Please enable javascript.Murder,ಹುಟ್ಟುವ ಮಗುವಿನ ಜಾತಿಗಾಗಿ ಜಗಳ : ಮೈಸೂರಿನ ಗರ್ಭಿಣಿ ಪತ್ನಿಯನ್ನು ಕೊಲೆಗೈದ ಪಾಪಿ ಪತಿ ಬಂಧನ - husband killed pregnant wife in mysuru - Vijay Karnataka

ಹುಟ್ಟುವ ಮಗುವಿನ ಜಾತಿಗಾಗಿ ಜಗಳ : ಮೈಸೂರಿನ ಗರ್ಭಿಣಿ ಪತ್ನಿಯನ್ನು ಕೊಲೆಗೈದ ಪಾಪಿ ಪತಿ ಬಂಧನ

Vijaya Karnataka Web 22 Mar 2022, 7:50 am
Subscribe

ಗರ್ಭಿಣಿ ಪತ್ನಿಯನ್ನು ಪಾಪಿ ಪತಿಯೋರ್ವ ಕೊಲೆ ಮಾಡಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ. ಹುಟ್ಟುವ ಮಗುವಿನ ಜಾತಿಗಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಬಳಿಕ ಇದು ಕೊಲೆಯಲ್ಲಿ ಅಂತ್ಯವಾಗಿದೆ.

ಹೈಲೈಟ್ಸ್‌:

  • ಮೈಸೂರಿನ ಗರ್ಭಿಣಿ ಪತ್ನಿಯನ್ನು ಕೊಲೆಗೈದ ಪಾಪಿ ಪತಿ
  • ಅಂತರ್ಜಾತಿ ವಿವಾಹ ಹಿನ್ನೆಲೆ ಹುಟ್ಟುವ ಮಗುವಿನ ಜಾತಿಗಾಗಿ ಜಗಳ
  • ಉಸಿರು ಗಟ್ಟಿಸಿ ಕೊಲೆ ಬಳಿಕ ತಪ್ಪೊಪ್ಪಿಕೊಂಡ ಕಿರಾತಕ ಗಂಡ
husband wife
ಮೈಸೂರು: ಗರ್ಭಿಣಿ ಎಂಬುದನ್ನೂ ನೋಡದೆ ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಿನಕಲ್‌ ನಿವಾಸಿ ಪ್ರಮೋದ್‌ ಆರೋಪಿ. ಪತ್ನಿ ಅಶ್ವಿನಿ(23)ಯನ್ನು ಉಸಿರು ಗಟ್ಟಿಸಿ ಈತ ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.
ಮೂರು ದಿನಗಳ ಹಿಂದೆ ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿ, ಬೆಳವಾಡಿಯಲ್ಲಿರುವ ಕೆರೆಗೆ ಎಸೆದಿದ್ದು, ಸೋಮವಾರ ಸಂಜೆ ಶವ ಸಿಕ್ಕಿದೆ. ಕೃಷಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಮೋದ್‌, ಮೂರು ವರ್ಷಗಳ ಹಿಂದೆ ಅನ್ಯ ಜಾತಿಯ ಅಶ್ವಿನಿಯನ್ನು ಪ್ರೀತಿಸಿ ವಿವಾಹವಾಗಿದ್ದ.

ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್‌ ಟೆಕ್ನಿಷಿಯನ್‌ ಆಗಿ ಅಶ್ವಿನಿ ಕಾರ್ಯ ನಿರ್ವಹಿಸುತ್ತಿದ್ದರು. ಅಶ್ವಿನಿ ಗರ್ಭಿಣಿಯಾಗಿದ್ದು, ಹುಟ್ಟುವ ಮಗು ಯಾವ ಜಾತಿಗೆ ಸೇರಲಿದೆ ಎಂಬ ಗೊಂದಲದಲ್ಲಿದ್ದ ಪ್ರಮೋದ್‌, ಮಗುವನ್ನು ತೆಗೆಸುವಂತೆ ಒತ್ತಡ ಹೇರುತ್ತಿದ್ದ. ಈ ಬಗ್ಗೆ ಎರಡು ಕುಟುಂಬದ ಹಿರಿಯರು ರಾಜಿ ಸಂಧಾನ ನಡೆಸಿದ್ದರು.

ಮದುವೆಗೆ ಜಾತಿ ಕಾರಣ ಹೇಳಿ 3 ವರ್ಷ ಪ್ರೀತಿಸಿದ ಯುವತಿಯನ್ನೇ ಪೆಟ್ರೋಲ್‌ ಸುರಿದು ಕೊಂದ ಕಿರಾತಕ!

ಶುಕ್ರವಾರ ಸಂಜೆ ಕಾರಿ ನಲ್ಲಿ ಮನೆಗೆ ಬಂದ ಪ್ರಮೋದ್‌, ಅಶ್ವಿನಿ ಜತೆ ಜಗಳವಾಡಿ ಕೊಲೆ ಮಾಡಿದ್ದಾನೆ. ಪುತ್ರಿ ಅಶ್ವಿನಿಯಿಂದ ಯಾವುದೇ ಕರೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪೋಷಕರು, ವಿಜಯ ನಗರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ.

ಅನುಮಾನಗೊಂಡ ಪೊಲೀಸರು, ವಿಚಾರಣೆ ನಡೆಸಿದಾಗ ಪ್ರಮೋದ್‌ ತಾನೇ ಕೊಲೆ ಮಾಡಿ, ಬೆಳವಾಡಿ ಕೆರೆಯಲ್ಲಿ ಶವ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಮೋದ್‌ನನ್ನು ಬಂಧಿಸಿದ್ದು, ಕಿರುಕುಳ ನೀಡಿದ ಪ್ರಮೋದ್‌ನ ಪೋಷಕರು ಮತ್ತು ಸೋದರಿಗಾಗಿ ಶೋಧ ನಡೆಸುತ್ತಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ