ಆ್ಯಪ್ನಗರ

ಮೈಸೂರು: ಪತ್ನಿಗೆ ಅನೈತಿಕ ಸಂಪರ್ಕವಿದೆ ಎಂದು ಉಸಿರುಗಟ್ಟಿಸಿ ಕೊಂದ ಪತಿ

ಮಂಡ್ಯದ ಸಾತನೂರು ಗ್ರಾಮದ ಸೌಮ್ಯ 11 ವರ್ಷಗಳ ಹಿಂದೆ ರವಿಯನ್ನು ಮದುವೆಯಾಗಿದ್ದು, 9 ವರ್ಷದ ಗೌರವ್, 7 ವರ್ಷದ ಅಕುಲ್ ಎರಡು ಗಂಡು ಮಕ್ಕಳಿದ್ದಾರೆ. ರವಿಯ ಮನೆಯಲ್ಲಿ ಕಳೆದ 6 ತಿಂಗಳಿಂದ ಮನೆಯಲ್ಲಿ ಅನೈತಿಕ ಸಂಬಂಧದ ವಿಚಾರವಾಗಿ ಕಲಹ ನಡೆಯುತ್ತಿತ್ತು

Vijaya Karnataka Web 18 Jan 2021, 4:24 pm
ಮೈಸೂರು: ಪತ್ನಿಗೆ ಅನೈತಿಕ ಸಂಪರ್ಕವಿದೆ ಎಂದು ಸಂಶಯಪಡುತ್ತಿದ್ದ ಪತಿ ಆಕೆಯನ್ನು ಉಸಿರುಗಟ್ಟಸಿ ಕೊಲೆ ಮಾಡಿದ ಘಟನೆ ಹುಣಸೂರಿನಲ್ಲಿ ನಡೆದಿದೆ.
Vijaya Karnataka Web husband murder wife in mysore
ಮೈಸೂರು: ಪತ್ನಿಗೆ ಅನೈತಿಕ ಸಂಪರ್ಕವಿದೆ ಎಂದು ಉಸಿರುಗಟ್ಟಿಸಿ ಕೊಂದ ಪತಿ


ಹುಣಸೂರಿನ ಕಲ್ಕುಣಿಕೆ ಮಾರಿಗುಡಿ ಬೀದಿ ನಿವಾಸಿ ರವಿ ತನ್ನ ಪತ್ನಿ ಸೌಮ್ಯಾ (31) ಎಂಬುವವರನ್ನು ಮನೆಯಲ್ಲಿ ಬಟ್ಟೆಯಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ.

ಮಂಡ್ಯದ ಸಾತನೂರು ಗ್ರಾಮದ ಸೌಮ್ಯ ಸುಮಾರು 11 ವರ್ಷಗಳ ಹಿಂದೆ ರವಿಯನ್ನು ಮದುವೆಯಾಗಿದ್ದು, 9 ವರ್ಷದ ಗೌರವ್, 7 ವರ್ಷದ ಅಕುಲ್ ಎರಡು ಗಂಡು ಮಕ್ಕಳಿದ್ದಾರೆ. ರವಿಯ ಮನೆಯಲ್ಲಿ ಕಳೆದ 6 ತಿಂಗಳಿಂದ ಮನೆಯಲ್ಲಿ ಅನೈತಿಕ ಸಂಬಂಧದ ವಿಚಾರವಾಗಿ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಅಲ್ಲದೇ ಶೀಲ ಶಂಕಿಸಿದ ಪತಿ ಮನೆಯಲ್ಲಿ ಈ ಕೃತ್ಯ ಎಸಗಿದ್ದಾನೆ. ಸೌಮ್ಯ ಆಶಾ ಕಾರ್ಯಕರ್ತೆಯಾಗಿದ್ದು, ಪತಿ ರವಿ ಪತ್ನಿ ನಿದ್ರೆ ಮಾಡುವಾಗ ಕುತ್ತಿಗೆ ಮೇಲೆ ಕಾಲಿನಿಂದ ಅದುಮಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ಮೃತಳ ಅಣ್ಣ ಮಹೇಶ್, ತಂಗಿ ಸಾವಿನ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ಆರೋಪಿ ರವಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಪೊಲೀಸರ ಕೈಯಲ್ಲೇ ಸಿಕ್ಕಿಬಿದ್ದ ಶ್ರೀಗಂಧ ಮರಗಳ್ಳರು : ಶ್ರೀಗಂಧದ ಮರಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ನಾಲ್ವರನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದು 35 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ರಘು (46), ಮಂಜುನಾಥ (22), ಸೈಯದ್‌ ಗೌಸ್‌ ಮೊಹಿದ್ದೀನ್‌ (50), ಮಕ್ಬುಲ್‌ ಷರೀಫ್‌ (58) ಬಂಧಿತ ಆರೋಪಿಗಳು. ಆರೋಪಿಗಳು ನಗರದ ಬೆಲವತ್ತ ರಿಂಗ್‌ ರಸ್ತೆ ಪಕ್ಕದಲ್ಲಿರುವ ಭಾರತೀಯ ನೋಟು ಮುದ್ರಣ ಘಟಕದ ಕಾಂಪೌಂಡ್‌ನಿಂದ ಒಳಗೆ ನುಸುಳಿ ಅಲ್ಲಿರುವ ಕಾಡಿನೊಳಗೆ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ್ದರು. ಆರ್‌ಬಿಐ ಭದ್ರತಾ ಸಿಬ್ಬಂದಿ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮೇಟಗಳ್ಳಿ ಪೊಲೀಸರು, ಗಂಧದ ಮರಗಳನ್ನು ಕತ್ತರಿಸುತ್ತಿದ್ದ ಆರೋಪಿಗಳನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ