ಆ್ಯಪ್ನಗರ

Rohini Sindhuri : ಗೆಸ್ಟ್‌ ಹೌಸ್ ಪೀಠೋಪಕರಣ ಹೊತ್ತೊಯ್ದ ರೋಹಿಣಿ ಸಿಂಧೂರಿ; ಡಿಸಿ ಕಚೇರಿಗೆ ಎಟಿಐನಿಂದ ಪತ್ರ

ಮೈಸೂರಿನಿಂದ ವರ್ಗಾವಣೆಗೊಂಡರು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಮೈಸೂರಿನಲ್ಲಿ ಆರೋಪಗಳು ಕೇಳಿಬರುತ್ತಲೆ ಇವೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ರೋಹಿಣಿ ಸಿಂಧೂರಿ ಅವರು ಮೈಸೂರಿನ ಆಡಳಿತ ತರಬೇತಿ ಕೇಂದ್ರದ ಅತಿಥಿ ಗೃಹದಿಂದ 12 ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದ್ದು, ಅವುಗಳನ್ನು ವಾಪಸ್‌ ಕೊಡಿ ಎಂದು ಎಟಿಐ ಅಧಿಕಾರಿಗಳು ಮೈಸೂರು ಡಿಸಿಗೆ ಪತ್ರ ಬರೆದಿದ್ದಾರೆ.

Edited byಅವಿನಾಶ ವಗರನಾಳ | Vijaya Karnataka Web 6 Dec 2022, 10:47 am

ಹೈಲೈಟ್ಸ್‌:


  • ಮೈಸೂರಿನ ಎಟಿಐ ಗೆಸ್ಟ್‌ ಹೌಸ್‌ ಪೀಠೋಪಕರಣ ಹೊತ್ತೊಯ್ದ ರೋಹಿಣಿ ಸಿಂಧೂರಿ
  • 12 ವಸ್ತುಗಳನ್ನು ವಾಪಸ್‌ ಕೊಡಿ ಎಂದು ಮೈಸೂರು ಡಿಸಿಗೆ ಎಟಿಐ ಅಧಿಕಾರಿಗಳಿಂದ ಪತ್ರ
  • ರೋಹಿಣಿ ಸಿಂಧೂರಿಗೆ 2020ರಿಂದ 3 ಬಾರಿ ಪತ್ರ ಬರೆದ ಎಟಿಐ, ಸಿಂಧೂರಿ ಗಪ್‌ಚುಪ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Rohini Sindhuri
ಮೈಸೂರು: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹೊಸ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ರೋಹಿಣಿ ಸಿಂಧೂರಿ ಅವರು ಆಡಳಿತ ತರಬೇತಿ ಕೇಂದ್ರದ ಅತಿಥಿ ಗೃಹದಿಂದ 12 ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅವುಗಳನ್ನು ವಾಪಸ್‌ ಕೊಡಿ ಎಂದು ಆಡಳಿತ ತರಬೇತಿ ಕೇಂದ್ರದ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರು ನಿಯುಕ್ತಿಯಾಗಿ ಬಂದಾಗ 40 ದಿನಗಳ ಕಾಲ ಆಡಳಿತ ತರಬೇತಿ ಕೇಂದ್ರದ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದರು. ಬಳಿಕ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸಕ್ಕೆ ರೋಹಿಣಿ ಸಿಂಧೂರಿ ಶಿಫ್ಟ್ ಆಗುವಾಗ ಆಡಳಿತ ತರಬೇತಿ ಕೇಂದ್ರ ಅತಿಥಿ ಗೃಹದಿಂದ 12 ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸಾಮಗ್ರಿಗಳ ವಾಪಸ್‌ಗೆ 2020ರಿಂದ ಎಟಿಐ ಬರೆದಿರುವ 3 ಪತ್ರಕ್ಕೆ ರೋಹಿಣಿ ಸಿಂಧೂರಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಮೈಸೂರು ಜಿಲ್ಲಾಧಿಕಾರಿಗೆ ಎಟಿಐ ಅಧಿಕಾರಿಗಳು ಮತ್ತೊಂದು ಪತ್ರ ಬರೆದಿದ್ದು, ಟೆಲಿಫೋನ್ ಟೇಬಲ್, ಬೆತ್ತದ ಚೇರ್ ಸೇರಿ 12 ಸಾಮಗ್ರಿ ಜಿಲ್ಲಾಧಿಕಾರಿಗಳ ವಸತಿ ಗೃಹದಲ್ಲಿ ಇದ್ದರೆ ವಾಪಸ್ ಕೊಡಿ ಎಂದು ಕೇಳಿದ್ದಾರೆ.

ಎಟಿಐ ಬರೆದಿರೋ ಪತ್ರದಲ್ಲಿ ಏನಿದೆ..?
ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನಿಯುಕ್ತಿಯಾದಾಗ ಎಟಿಐ ಸಂಸ್ಥೆಯ ಗೆಸ್ಟ್ ಹೌಸ್‌ನಲ್ಲಿ ಉಳಿದುಕೊಂಡಿದ್ದರು. ಇಲ್ಲಿಂದ ಅಧಿಕೃತ ನಿವಾಸಕ್ಕೆ ಶಿಫ್ಟ್ ಆಗಬೇಕಾದರೆ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಅದರಲ್ಲಿ ಪ್ರಮುಖವಾಗಿ ಟೆಲಿಫೋನ್ ಟೇಬಲ್, ಬೆತ್ತದ ಚೇರ್ , ಮೈಕ್ರೋ ಒವೆನ್, ಮಂಚ, ಹಾಸಿಗೆ, ಯೋಗ ಮ್ಯಾಟ್ ಒಳಗೊಂಡಿದೆ. ಒಟ್ಟು 12 ಸಾಮಾಗ್ರಿಗಳನ್ನ ಪಡೆದಿರುತ್ತಾರೆ. ಇವೆಲ್ಲವೂ ಜಿಲ್ಲಾಧಿಕಾರಿಗಳ ವಸತಿ ಗೃಹದಲ್ಲಿ ಇದ್ದರೆ ವಾಪಸ್ ಕೊಡಿ ಎಂದು ಕೇಳಿದ್ದಾರೆ.

ರೋಹಿಣಿ ಗಪ್ ಚುಪ್!
ಸಾಮಗ್ರಿಗಳ ವಾಪಸ್‌ಗೆ 2020ರಿಂದ ಎಟಿಐ ಬರೆದಿರುವ 3 ಪತ್ರಕ್ಕೆ ರೋಹಿಣಿ ಸಿಂಧೂರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಮೈಸೂರು ಜಿಲ್ಲಾಧಿಕಾರಿಗಳಿಗೆ ಎಟಿಐ ಅಧಿಕಾರಿಗಳು ಮತ್ತೊಂದು ಪತ್ರ ಬರೆದಿದ್ದು, ನೂತನ ಡಿಸಿ ಕೆವಿ ರಾಜೇಂದ್ರ ಉತ್ತರ ಕೊಡಬೇಕಾಗಿದೆ. ರೋಹಿಣಿ ಸಿಂಧೂರಿ ಮೈಸೂರಲ್ಲಿ ಇದ್ದಷ್ಟು ದಿನ ಎಲ್ಲಾ ವಸ್ತುಗಳನ್ನ ಉಪಯೋಗಿಸಿದ್ದು , ಈಗ ಆರೋಪ ಬಂದರೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಸಾರ್ವಜನಿಕರನ್ನು ಆಶ್ಚರ್ಯಗೊಳಿಸಿದೆ.
Rohini Sindhuri: ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್: ಶಾಸಕ ಸಾರಾ ಮಹೇಶ್
ಮೈಸೂರು ಡಿಸಿ ಜೊತೆ ಮಾತನಾಡ್ತೀನಿ ಎಂದ ಸಿಂಧೂರಿ!
ಇನ್ನು ಆರೋಪಕ್ಕೆ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದು, ಆಡಳಿತ ತರಬೇತಿ ಸಂಸ್ಥೆಯ 12 ವಸ್ತು ಡಿಸಿ ಕಚೇರಿಯಲ್ಲಿರಬಹುದು. ಈ ಬಗ್ಗೆ ಮೈಸೂರು ಡಿಸಿ ಡಾ.ರಾಜೇಂದ್ರ ಜತೆ ಮಾತನಾಡುತ್ತೇನೆ ಎಂದು ಸದ್ಯ ಮುಜರಾಯಿ ಇಲಾಖೆ ಆಯುಕ್ತೆಯಾಗಿರುವ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

Sa Ra Mahesh | ಸಾ.ರಾ.ಮಹೇಶ್ vs ರೋಹಿಣಿ ಸಿಂಧೂರಿ: ಐಎಎಸ್‌ ಅಧಿಕಾರಿ ವಿರುದ್ಧ 1,200 ಪುಟಗಳ ದಾಖಲೆ ಸಲ್ಲಿಕೆ
ಸಿಂಧೂರಿ ವಿವಾದದ ಸರಮಾಲೆ!
ಒಂದಿಲ್ಲೊಂದು ವಿಚಾರಗಳಲ್ಲಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಗೃಹ ಉಪಯೋಗಿ ವಸ್ತುಗಳ ಬಳಕೆ ವಿಚಾರದಲ್ಲೂ ವಿವಾದ ಸೃಷ್ಟಿಕೊಂಡಿರುವುದು ವಿಪರ್ಯಾಸವಾಗಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ 2020 ಅಕ್ಟೋಬರ್‌ನಲ್ಲಿ ಮೈಸೂರಿಗೆ ಆಗಮಿಸಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು.

ರೋಹಿಣಿ ಸಿಂಧೂರಿಗೆ 'ಬಟ್ಟೆ ಬ್ಯಾಗ್' ಕಂಟಕ! ಹಗರಣದ ತನಿಖೆಗೆ ಸರ್ಕಾರದ ಆದೇಶ, ಸಾರಾ ಮಹೇಶ್‌ಗೆ ಮೇಲುಗೈ
ಬಟ್ಟೆ ಬ್ಯಾಗ್ ಖರೀದಿ ಹಗರಣದಲ್ಲಿ ಶಾಸಕ ಸಾರಾ ಮಹೇಶ್ ವಿರುದ್ಧ ಸಿಡಿದು ಬಾರಿ ಸದ್ದು ಮಾಡಿದ್ದ ರೋಹಿಣಿ ಸಿಂಧೂರಿ ಕಣ್ಣೀರಿಟ್ಟು ಮೈಸೂರಿನಿಂದ ಹೊರಟಿದ್ದರು. ಕೊರೊನಾ ಸಂಧರ್ಭದಲ್ಲಿ ಹಣಕಾಸು ದುರ್ಬಳಕೆ ಆರೋಪ ಹೊತ್ತಿದ್ದ ರೋಹಿಣಿ ಸಿಂಧೂರಿ ವಿರುದ್ದ ಇದೀಗ ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿಗಳೇ ಪತ್ರ ಬರೆದಿದ್ದು, ತಮ್ಮ ಸಂಸ್ಥೆಯಿಂದ ಹೊತ್ತೊಯ್ದ ವಸ್ತುಗಳನ್ನ ಮರಳಿ ನೀಡುವಂತೆ ಕೇಳಿಕೊಂಡಿದ್ದಾರೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ