ಆ್ಯಪ್ನಗರ

ನಮ್ಮ ಸರಕಾರವಿದ್ದರೆ ಸ್ತ್ರೀಶಕ್ತಿ ಸಾಲ ಮನ್ನಾ ಮಾಡ್ತಿದ್ವಿ

ಹುಣಸೂರು: ಸಮ್ಮಿಶ್ರ ಸರಕಾರ ಉರುಳಿಸಲು ಸಹಕರಿಸಿದ ಅಪಖ್ಯಾತಿಗೊಳಗಾಗಿರುವ ಎಚ್‌.ವಿಶ್ವನಾಥ್‌ಗೆ ದೇವರು ಶಿಕ್ಷೆ ಕೊಡುವ ಕಾಲ ಬಂದಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

Vijaya Karnataka 25 Nov 2019, 5:00 am
ಹುಣಸೂರು: ಸಮ್ಮಿಶ್ರ ಸರಕಾರ ಉರುಳಿಸಲು ಸಹಕರಿಸಿದ ಅಪಖ್ಯಾತಿಗೊಳಗಾಗಿರುವ ಎಚ್‌.ವಿಶ್ವನಾಥ್‌ಗೆ ದೇವರು ಶಿಕ್ಷೆ ಕೊಡುವ ಕಾಲ ಬಂದಿದೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.
Vijaya Karnataka Web if our government has a woman power loan waiver
ನಮ್ಮ ಸರಕಾರವಿದ್ದರೆ ಸ್ತ್ರೀಶಕ್ತಿ ಸಾಲ ಮನ್ನಾ ಮಾಡ್ತಿದ್ವಿ


ತಾಲೂಕಿನ ಹಿರೀಕ್ಯಾತನಹಳ್ಳಿಯಲ್ಲಿಹುಣಸೂರು ಕ್ಷೇತ್ರದ ಉಪಚುನಾವಣೆಯ ಜೆಡಿಎಸ್‌ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್‌ ಪರ ಮತಯಾಚನೆ ಮಾಡಿ ಮಾತನಾಡಿದರು.''ಸಮ್ಮಿಶ್ರ ಸರಕಾರದಲ್ಲಿ43 ಸಾವಿರ ಕೋಟಿ ರೂ.ರೈತರ ಬೆಳೆ ಸಾಲ ಮನ್ನಾ ಮಾಡಿದ್ದೆವು. ಇನ್ನು 5-6 ತಿಂಗಳು ಕುಮಾರಸ್ವಾಮಿ ಸರಕಾರ ಉಳಿದಿದ್ದರೆ ಸ್ತ್ರೀಶಕ್ತಿ ಸಂಘಗಳ ಸಾಲ ಸಂಪೂರ್ಣ ಮನ್ನಾ ಮಾಡಲು ಚಿಂತಿಸಲಾಗಿತ್ತು. ಆದರೆ, ಕುತಂತ್ರಿ ರಾಜಕಾರಣಿಗಳಿಂದ ಸರಕಾರ ಉಳಿ ಯಲಿಲ್ಲ,'' ಎಂದು ದೂರಿದರು.

''ರಾಜಕೀಯವಾಗಿ ತೆರೆ ಮರೆಗೆ ಸರಿದಿದ್ದ ವಿಶ್ವನಾಥ್‌ ಅವರನ್ನು ಎಚ್‌.ಡಿ.ಕುಮಾರ ಸ್ವಾಮಿ ಧರ್ಮರಾಯನಂತೆ ಪಕ್ಷಕ್ಕೆ ಕರೆತಂದು ಟಿಕೆಟ್‌ ನೀಡಿ ಗೆಲ್ಲಿಸಿದ್ದಲ್ಲದೆ ರಾಜ್ಯಾಧ್ಯಕ್ಷನ ನ್ನಾಗಿ ಮಾಡಿದರೂ ಪಕ್ಷಕ್ಕೆ ದ್ರೋಹ ಮಾಡಿ ದ್ದಾರೆ, ತಾಲೂಕಿನ ಗೌರವ ಹಾಳು ಮಾಡಿದ ವಿಶ್ವನಾಥ್‌ ಮಂತ್ರಿಯಾಗಲು ಸರಕಾರ ಬೀಳಿಸಿ ಬೇರೆ ಪಕ್ಷಕ್ಕೆ ಹೋಗಿ ಮತ್ತೆ ನಿಮ್ಮ ಮತ ಬೇಡಲು ಬಂದಿದ್ದಾರೆ. ಸುಪ್ರಿಂಕೋರ್ಟ್‌ ಅನರ್ಹರೆಂದು ತೀರ್ಪು ನೀಡಿದ್ದು, ಜನತಾ ನ್ಯಾಯಾಲಯದಲ್ಲೂತಿರಸ್ಕರಿಸುವ ವಿಶ್ವಾಸವಿದೆ,'' ಎಂದು ಹೇಳಿದರು. ನಮ್ಮ ಸರಕಾರವಿದ್ದಾಗ ಕೆ.ಆರ್‌.ನಗರ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ಸಕ್ಕರೆ ಕಾರ್ಖಾನೆ ಮತ್ತು ಪಾಂಡವಪುರದ ಸಕ್ಕರೆ ಕಾರ್ಖಾನೆಗಳನ್ನು ಪುನಾರಂಭಿಸಿದ್ದೆವು. ನಂತರ ಬಂದ ಕಾಂಗ್ರೆಸ್‌ ಸರಕಾರ ಎರಡು ಕಾರ್ಖಾನೆಗಳನ್ನು ಬೀಗ ಮುದ್ರೆ ಹಾಕಿಸಿದೆ,'' ಎಂದು ಲೇವಡಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ