ಆ್ಯಪ್ನಗರ

ನಿವೇಶನ ಸ್ವಚ್ಛವಾಗಿರದಿದ್ದರೆ ದುಬಾರಿ ದಂಡ

ನಿವೇಶನ ಮಾಲೀಕರೇ ಎಚ್ಚರ! ಮುಡಾದಿಂದ ನಿವೇಶನ ಸಿಕ್ಕಿದೆ ಎಂದು ಸುಮ್ಮನಾಗದಿರಿ. ಆಗಾಗ್ಗೆ ನಿವೇಶನದಲ್ಲಿ ಸ್ವಚ್ಛತಾ ಕಾರ್ಯ ನಡೆಸದಿದ್ದರೆ ದುಬಾರಿ ದಂಡ ತೆರಬೇಕಾಗುತ್ತದೆ!

Vijaya Karnataka 23 Sep 2018, 5:00 am
ಹರೀಶ ಎಲ್‌. ತಲಕಾಡು ಮೈಸೂರು : ನಿವೇಶನ ಮಾಲೀಕರೇ ಎಚ್ಚರ! ಮುಡಾದಿಂದ ನಿವೇಶನ ಸಿಕ್ಕಿದೆ ಎಂದು ಸುಮ್ಮನಾಗದಿರಿ. ಆಗಾಗ್ಗೆ ನಿವೇಶನದಲ್ಲಿ ಸ್ವಚ್ಛತಾ ಕಾರ್ಯ ನಡೆಸದಿದ್ದರೆ ದುಬಾರಿ ದಂಡ ತೆರಬೇಕಾಗುತ್ತದೆ!
Vijaya Karnataka Web if the site is not clean expensive fine
ನಿವೇಶನ ಸ್ವಚ್ಛವಾಗಿರದಿದ್ದರೆ ದುಬಾರಿ ದಂಡ


ಇತ್ತೀಚೆಗೆ ಮುಡಾ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು ತ್ಯಾಜ್ಯ ಸಂಗ್ರಹ ತಾಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮುಡಾ ಅಧಿಕಾರಿಗಳು ಸ್ವಚ್ಛವಾಗಿರದ ನಿವೇಶನಗಳ ಮಾಲೀಕರಿಗೆ 5ರಿಂದ 10 ಸಾವಿರ ರೂ.ವರೆಗೆ ದಂಡ ವಿಧಿಸಲು ಮುಂದಾಗಿದ್ದಾರೆ. ಖಾಲಿ ನಿವೇಶನಗಳ ಸ್ವಚ್ಛತೆಗೆ ಮೂರು ದಿನಗಳ ಕಾಲಾವಕಾಶ ನೀಡಿದ್ದಾರೆ.

ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಮೈಸೂರು ನಗರ 2015-16, 2016-17 ಮತ್ತು 2017-18ನೇ ಸಾಲಿನಲ್ಲಿ ಮಧ್ಯಮ ನಗರ ವಿಭಾಗದಲ್ಲಿ ಸ್ವಚ್ಛ ನಗರ ಎಂಬ ಕೀರ್ತಿಗೆ ಪಾತ್ರವಾಗಿದೆ. ಆದರೆ ಇತ್ತೀಚೆಗೆ ಮುಡಾ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳಲ್ಲಿ ಯಥೇಚ್ಛವಾಗಿ ಗಿಡಗಂಟಿಗಳು ಬೆಳೆದು ಹಾವು, ಚೇಳುಗಳ ಅವಾಸ ಸ್ಥಾನವಾಗುತ್ತಿದೆ. ಅಲ್ಲದೆ ಖಾಲಿ ನಿವೇಶನಗಳಲ್ಲಿ ಕೆಲ ಸಾರ್ವಜನಿಕರು ಖಾಲಿ ನಿವೇಶನಗಳಲ್ಲಿ ತ್ಯಾಜ್ಯವನ್ನು ಸುರಿಯುವ ಮೂಲಕ ಅನೈರ್ಮಲ್ಯವುಂಟು ಮಾಡುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಸಿಐಟಿಬಿ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾಗಿರುವ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಇದ್ದರೆ ನಿವೇಶನ ಮಾಲೀಕರ ವಿರುದ್ಧ ಕಾನೂನು ರೀತಿ ಶಿಸ್ತು ಕ್ರಮ ಜರುಗಿಸಲು ಮುಡಾ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಖಾಸಗಿ ಬಡಾವಣೆ ಹೊರತುಪಡಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾಗಿರುವ ನಿವೇಶನಗಳಲ್ಲಿ ಅಂದಾಜು 18 ಸಾವಿರಕ್ಕೂ ಹೆಚ್ಚು ನಿವೇಶನಗಳು ಖಾಲಿ ಇದ್ದು, ನಿವೇಶನ ಪಡೆದವರು ಯಾವುದೇ ರೀತಿ ಕಟ್ಟಡ ನಿರ್ಮಿಸದೇ ಇರುವುದರಿಂದ ಪಾಳು ಬಿದ್ದಿದ್ದು, ಕೆಲವೆಡೆ ಸಾರ್ವಜನಿಕರು ಕಸ ತಂದು ಎಸೆಯುತ್ತಿದ್ದರೆ ಮತ್ತೆ ಕೆಲವೆಡೆ ರಾತ್ರೋ ರಾತ್ರಿ ಡೆಬ್ರಿಸ್‌ ತಂದು ಸುರಿಯಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳಲ್ಲಿ ನಿವೇಶನ ಪಡೆದ ಮಾಲೀಕರು ತಮ್ಮ ನಿವೇಶನಗಳ ಸ್ವಚ್ಛತಾ ಕಾರ್ಯ ನಡೆಸಬೇಕು ಎಂದು ಮುಡಾ ಆಯುಕ್ತ ಕಾಂತರಾಜು ತಿಳಿಸಿದ್ದಾರೆ.

ಸಿಐಟಿಬಿ ಮತ್ತು ಮೈಸೂರು ನಗರ ಪಾಲಿಕೆಯಿಂದ ಹಂಚಿಕೆಯಾಗಿರುವ ಸಾವಿರಾರು ನಿವೇಶನಗಳು ಖಾಲಿ ಇದ್ದು, ಗಿಡಗಂಟಿಗಳು ಬೆಳೆದು ತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿವೇಶನ ಮಾಲೀಕರಿಗೆ ಮೂರು ದಿನಗಳ ಕಾಲ ಗಡುವು ನೀಡಲಾಗುತ್ತಿದ್ದು, ಒಂದು ವೇಳೆ ಸ್ವಚ್ಛತಾ ಕಾರ್ಯ ನಡೆಸದೇ ಇದ್ದರೆ 5ರಿಂದ 10 ಸಾವಿರ ರೂ. ವರೆಗೆ ದಂಡ ವಿಧಿಸಿ ಶಿಸ್ತು ಕ್ರಮ ಜರುಗಿಸಲಾಗುವುದು.
-ಕಾಂತರಾಜು, ಆಯುಕ್ತರು, ಮುಡಾ.

ನಮ್ಮ ಏರಿಯಾದಲ್ಲಿ ಸಾಕಷ್ಟು ನಿವೇಶನಗಳು ಖಾಲಿ ಇದ್ದು, ಇತ್ತೀಚೆಗೆ ಗಿಡಗಂಟಿಗಳು ಬೆಳೆದು ಹಾವು, ಚೇಳುಗಳ ಕಾಟ ಜಾಸ್ತಿಯಾಗಿದೆ. ಅಲ್ಲದೆ ಕೆಲವರು ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಅದಕ್ಕೆ ಸುರಕ್ಷತೆ ದೃಷ್ಟಿಯಿಂದ ನಾವೇ ಹಣ ಕೊಟ್ಟು ಬೇರೆಯವರ ನಿವೇಶನಗಳನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಈಗ ಮುಡಾದವರೇ ಎಚ್ಚರಿಕೆ ನೀಡಿರುವುದರಿಂದ ಅನುಕೂಲವಾಗಲಿದೆ.
-ಸುಮಿತ್ರಾ ಬಸವರಾಜು, ವಿಜಯ ನಗರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ