ಆ್ಯಪ್ನಗರ

ಅಕ್ರಮ ಸಂಬಂಧ ಬಯಲು: ವಿವಾಹಿತ ಜೋಡಿ ನೇಣಿಗೆ ಶರಣು

ಅಕ್ರಮ ಸಂಬಂಧ ಬಹಿರಂಗಗೊಂಡ ಹಿನ್ನೆಲೆಯಲ್ಲಿ ವಿವಾಹಿತ ಜೋಡಿಯೊಂದು ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

Vijaya Karnataka 2 Jul 2019, 9:49 am
ಮೈಸೂರು: ಅಕ್ರಮ ಸಂಬಂಧ ಬಹಿರಂಗಗೊಂಡಿದ್ದಕ್ಕೆ ಹೆದರಿ ವಿವಾಹಿತ ಜೋಡಿಯೊಂದು ನೇಣಿಗೆ ಶರಣಾಗಿದೆ.
Vijaya Karnataka Web suicide


ಮೈಸೂರಿನ ರಮಾಬಾಯಿ ನಗರದಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ರಮಾಬಾಯಿ ನಗರದ ನಿವಾಸಿ ಸಂತೋಷ್‌ ಕುಮಾರ್‌(34), ಜೆಪಿ ನಗರದ ನಿವಾಸಿ ಸುಮಿತ್ರ(35) ಮೃತರು.

ಸಂತೋಷ್‌ ಕುಮಾರ್‌ ಅವರು ಅರ್ಚನಾ ಅವರನ್ನು ವಿವಾಹವಾಗಿದ್ದರೆ, ಸುಮಿತ್ರ ಅವರು ಸಿದ್ದರಾಜು ಅವರನ್ನು ವಿವಾಹವಾಗಿದ್ದು, ಇಬ್ಬರಿಗೂ ಮಕ್ಕಳಿದ್ದಾರೆ.

ಜೆಪಿ ನಗರದ ಕಾರ್ಖಾನೆಯಲ್ಲಿ ನೌಕರರಾಗಿದ್ದ ಇವರಿಬ್ಬರ ನಡುವೆ ಅಕ್ರಮ ಸಂಬಂಧವಿದ್ದು, ಈ ವಿಷಯ ಎರಡು ಕುಟುಂಬದವರಿಗೂ ತಿಳಿದು ರಾಜಿ ಪಂಚಾಯಿತಿ ನಡೆಸಿ ಎಚ್ಚರಿಕೆ ನೀಡಿದ್ದರು. ಆದರೂ ಇಬ್ಬರ ನಡುವೆ ಅಕ್ರಮ ಸಂಬಂಧ ಮುಂದುವರಿದಿತ್ತು. ಕಳೆದ ಗುರುವಾರ ಸಂತೋಷ್‌ ಕುಮಾರ್‌ ಅವರ ಪತ್ನಿ ಊರಿಗೆ ತೆರಳುತ್ತಿದ್ದಂತೆ ಸುಮಿತ್ರಾ ಮನೆಗೆ ಬಂದಿದ್ದಾರೆ. ಸುಮಿತ್ರಾ ಮನೆಗೆ ಬಂದಿರುವ ವಿಷಯವನ್ನು ನೆರೆ ಹೊರೆಯ ನಿವಾಸಿಗಳಿಂದ ತಿಳಿದ ಅರ್ಚನಾ, ಬೆಳಗ್ಗೆಯೇ ಮನೆ ಹತ್ತಿರ ಬಂದು ಬಾಗಿಲು ತೆರೆಯುವಂತೆ ಗಲಾಟೆ ಮಾಡಿದ್ದಲ್ಲದೆ ಮಹಿಳಾ ಪೊಲೀಸ್‌ ಠಾಣೆಗೂ ದೂರು ನೀಡಲು ತೆರಳಿದ್ದಾರೆ. ಅಷ್ಟರಲ್ಲಿ ಸುಮಿತ್ರಾ ಅವರ ಪತಿ ಸಿದ್ದರಾಜುಗೂ ವಿಷಯ ತಿಳಿದು ಮನೆಯತ್ತ ಬಂದಿದ್ದಾರೆ.

ಇದರಿಂದ ಗಾಬರಿಗೊಂಡ ಸಂತೋಷ್‌ ಕುಮಾರ್‌ ಮತ್ತು ಸುಮಿತ್ರಾ ಕೋಣೆಯಲ್ಲಿ ಒಂದೇ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಷ್ಟರಲ್ಲಿ ಅರ್ಚನಾ ಪೊಲೀಸರೊಂದಿಗೆ ಮನೆಯತ್ತ ಬಂದಿದ್ದಾರೆ. ಎಷ್ಟೇ ಬಾಗಿಲು ಬಡಿದರೂ ತೆಗೆಯದ ಕಾರಣ ಬಾಗಿಲು ಹೊಡೆದು ಒಳ ಪ್ರವೇಶ ಮಾಡಿದಾಗ ಇಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಸಂತೋಷ್‌ ಕುಮಾರ್‌ ಪತ್ನಿ ಅರ್ಚನಾ ನೀಡಿದ ದೂರಿನ ಮೇರೆಗೆ ಮೈಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ