ಆ್ಯಪ್ನಗರ

ಕಾಂಗ್ರೆಸ್‌ನ ‘ಶಕ್ತಿ ಅಭಿಯಾನ’ಕ್ಕೆ ಚಾಲನೆ

ದೇಶದ ರಾಜಕೀಯ ವಿದ್ಯಾಮಾನಗಳು ಪ್ರತಿಯೊಬ್ಬ ಜನಸಾಮಾನ್ಯರಿಗೆ ತಲುಪುವ ಉದ್ದೇಶದಿಂದ ರಾಹುಲ್‌ಗಾಂಧಿಯವರು 'ಶಕ್ತಿ ಅಭಿಯಾನ'ವನ್ನು ದೇಶದಾದ್ಯಂತ ಹಮ್ಮಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಕೆ.ವೆಂಕಟೇಶ್‌ ತಿಳಿಸಿದರು.

Vijaya Karnataka 12 Dec 2018, 5:00 am
ಪಿರಿಯಾಪಟ್ಟಣ : ದೇಶದ ರಾಜಕೀಯ ವಿದ್ಯಾಮಾನಗಳು ಪ್ರತಿಯೊಬ್ಬ ಜನಸಾಮಾನ್ಯರಿಗೆ ತಲುಪುವ ಉದ್ದೇಶದಿಂದ ರಾಹುಲ್‌ಗಾಂಧಿಯವರು 'ಶಕ್ತಿ ಅಭಿಯಾನ'ವನ್ನು ದೇಶದಾದ್ಯಂತ ಹಮ್ಮಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಕೆ.ವೆಂಕಟೇಶ್‌ ತಿಳಿಸಿದರು.
Vijaya Karnataka Web inauguration to congress energy campaign
ಕಾಂಗ್ರೆಸ್‌ನ ‘ಶಕ್ತಿ ಅಭಿಯಾನ’ಕ್ಕೆ ಚಾಲನೆ


ತಾಲೂಕಿನ ಆಯಿತನಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌ನ ಶಕಿ ್ತಅಭಿಯಾನ ಕಾರ್ಯಕ್ರಮವನ್ನು ಮೊಬೈಲ್‌ನಲ್ಲಿ ಮೆಸೇಜ್‌ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರತಿ ರಾಜ್ಯದ ಭಾಷೆಗಳ ಅನುಗುಣವಾಗಿ ಮಾಹಿತಿಗಳು ಮೊಬೈಲ್‌ಗೆ ಸಂಗ್ರಹವಾಗುತ್ತದೆ. ಆದ್ದರಿಂದ ತಾಲೂಕಿನಲ್ಲಿ ಕಾಂಗ್ರೆಸ್‌ನವರು ಅತಿಹೆಚ್ಚು ನೋಂದಣಿ ಮಾಡುವ ಗುರಿ ಹೊಂದಿದ್ದೇವೆ. ಡಿ.15 ಶಕ್ತಿ ಅಭಿಯಾನಕ್ಕೆ ಸೇರ್ಪಡೆ ಮಾಡಲು ಕೊನೆಯ ದಿನವಾಗಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನೋದಣಿ ಮಾಡಬೇಕು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌.ನಿರೂಪ ಮಾತನಾಡಿ, ತಾಲೂಕಿನ ಕಾಂಗ್ರೆಸ್‌ ಕಾರ್ಯಕರ್ತರು ಶಕ್ತಿ ಅಭಿಯಾನದಲ್ಲಿ ಸಕ್ರಿಯರಾಗಿ ತೊಡಗಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಟಿ.ಡಿ.ಸ್ವಾಮಿ, ಗ್ರಾ.ಪಂ.ಅಧ್ಯಕ್ಷ ರಾಜಶೇಖರ್‌, ಮಾಜಿ ಜಿ.ಪಂ.ಸದಸ್ಯ ರಹಮತ್‌ಜಾನ್‌ಬಾಬು, ತಾ.ಪಂ.ಸದಸ್ಯರಾದ ಕುಂಜಪ್ಪ ಕಾರ್ನಾಡ್‌, ಪಿಎಲ್‌ಡಿಬ್ಯಾಂಕ್‌ ಅಧ್ಯಕ್ಷ ಆವರ್ತಿ ಚಂದ್ರಶೇಖರ್‌, ಮಾಜಿ ಅಧ್ಯಕ್ಷ ಕೆ.ಹೊಲದಪ್ಪ, ಸದಸ್ಯ ಮಣಿ, ಕಾಂಗ್ರೆಸ್‌ ಎಸ್ಸಿ ಘಟಕದ ಉಪಾಧ್ಯಕ್ಷ ಸೀಗೂರು ವಿಜಯಕುಮಾರ್‌, ಗ್ರಾಮದ ಮುಖಂಡರಾದ ಕಾಂತೇಗೌಡರು, ಎ.ಆರ್‌.ಪುಟ್ಟರಾಜು, ನಾಗೇಗೌಡ, ಎ.ಬಿ.ಗೋಪಾಲ್‌, ಗ್ರಾ.ಪಂ.ಸದಸ್ಯರಾದ ಸುಮಿತ್ರ ಮಂಜುನಾಯಕ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ