ಮೈಸೂರು: ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ತ್ಯಾಜ್ಯ ಬಿದ್ದಿದ್ದು, ವಿಲೇವಾರಿಯಾಗದೆ ಅಧಿಕಾರಿ ನಿರ್ಲಕ್ಷ್ಯ ತೋರುತ್ತಿದೆ.
ಡಿಸಿ ಕಚೇರಿ ಮುಂಭಾಗವೇ ತ್ಯಾಜ್ಯ ವಿಲೇವಾರಿಯಾಗದಿದ್ದರೆ ಇನ್ನೂ ಸಾಮಾನ್ಯ ಬಡಾವಣೆಗಳ ಗತಿಯೇನು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಹಲವು ಬಾರಿ ಸ್ವಚ್ಛ ನಗರಿ ಎಂಬ ಬಿರುದು ಪಡೆದಿದೆ. ಆದರೆ, ನಗರ ಹೃದಯ ಭಾಗದಲ್ಲೇ ಕಸದ ರಾಶಿ ಬಿದಿದ್ದರು ಅಧಿಧಿಕಾರಿಗಳು ಕಂಡೂ ಕಾಣದಂತೆ ವರ್ತಿಸಿದ್ದಾರೆ. ಇದು ಒಂದು ದಿನ ಮಾತ್ರವಲ್ಲ, ಆಗಾಗ ಇಂಥ ದೃಶ್ಯ ಸಾಮಾನ್ಯ. ಇಲ್ಲಿ ಸುರಿಯುವ ತ್ಯಾಜ್ಯ ವಿಲೇವಾರಿಯಾಗಲು ಹಲವು ದಿನ ಬೇಕು. ಸ್ವಚ್ಛತೆಯ ಪಾಠ ಹೇಳುವ ಮುಖ್ಯ ಅಧಿಕಾರಿಗಳು ಕಾರ್ಯಾಲಯದ ಮುಂಭಾಗವೇ ತ್ಯಾಜ್ಯ ವಿಲೇವಾರಿಯಾಗದಿರುವುದಕ್ಕೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
''ಇಲ್ಲಿ ಯಾರು ತ್ಯಾಜ್ಯ ತಂದು ಸುರಿಯುತ್ತಾರೆ ಎಂದು ತಿಳಿದಿಲ್ಲ. ಆದರೆ, ತ್ಯಾಜ್ಯದ ರಾಶಿ ಕನಿಷ್ಠ ಮೂರು, ನಾಲ್ಕು ದಿನ ಇರುತ್ತದೆ. ಇಲ್ಲಿ ಹತ್ತಿರದಲ್ಲಿ ಯಾವುದೇ ಕಚೇರಿಯಿಲ್ಲ. ಇದು ಜಿಲ್ಲಾಧಿಕಾರಿ ಕಚೇರಿಯ ತ್ಯಾಜ್ಯವೇ ಇರಬೇಕು. ಕಸದಲ್ಲಿ ವ್ಯರ್ಥ ಅರ್ಜಿಗಳು ಸೇರಿದಂತೆ ನಾನಾ ನಮೂನೆಯ ಪೇಪರ್ಗಳು ಹಾಗೂ ಸ್ಟೇಷನರಿ ಸಂಬಂಧಿತ ಕಸ ವಿರುತ್ತದೆ. ಯಾರೇ ಆಗಲಿ ಸ್ವಚ್ಛ ನಗರಿ ಎಂಬ ಬಿರುದಿಗೆ ಕಪ್ಪು ಚುಕ್ಕೆಯಾಗಬಾರದು. ಶೀಘ್ರ ತ್ಯಾಜ್ಯ ವಿಲೇವಾರಿ ಮಾಡಿಸಿ, ಮತ್ತೆ ತ್ಯಾಜ್ಯ ಸುರಿಯದಂತೆ ಎಚ್ಛರಿಕೆ ನೀಡುವಂತೆ,'' ಸಾರ್ವಜನಿಕರು ಆಗ್ರಹಿಸಿದ್ದಾರೆ.
ಡಿಸಿ ಕಚೇರಿ ಮುಂಭಾಗವೇ ತ್ಯಾಜ್ಯ ವಿಲೇವಾರಿಯಾಗದಿದ್ದರೆ ಇನ್ನೂ ಸಾಮಾನ್ಯ ಬಡಾವಣೆಗಳ ಗತಿಯೇನು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಹಲವು ಬಾರಿ ಸ್ವಚ್ಛ ನಗರಿ ಎಂಬ ಬಿರುದು ಪಡೆದಿದೆ. ಆದರೆ, ನಗರ ಹೃದಯ ಭಾಗದಲ್ಲೇ ಕಸದ ರಾಶಿ ಬಿದಿದ್ದರು ಅಧಿಧಿಕಾರಿಗಳು ಕಂಡೂ ಕಾಣದಂತೆ ವರ್ತಿಸಿದ್ದಾರೆ. ಇದು ಒಂದು ದಿನ ಮಾತ್ರವಲ್ಲ, ಆಗಾಗ ಇಂಥ ದೃಶ್ಯ ಸಾಮಾನ್ಯ. ಇಲ್ಲಿ ಸುರಿಯುವ ತ್ಯಾಜ್ಯ ವಿಲೇವಾರಿಯಾಗಲು ಹಲವು ದಿನ ಬೇಕು. ಸ್ವಚ್ಛತೆಯ ಪಾಠ ಹೇಳುವ ಮುಖ್ಯ ಅಧಿಕಾರಿಗಳು ಕಾರ್ಯಾಲಯದ ಮುಂಭಾಗವೇ ತ್ಯಾಜ್ಯ ವಿಲೇವಾರಿಯಾಗದಿರುವುದಕ್ಕೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
''ಇಲ್ಲಿ ಯಾರು ತ್ಯಾಜ್ಯ ತಂದು ಸುರಿಯುತ್ತಾರೆ ಎಂದು ತಿಳಿದಿಲ್ಲ. ಆದರೆ, ತ್ಯಾಜ್ಯದ ರಾಶಿ ಕನಿಷ್ಠ ಮೂರು, ನಾಲ್ಕು ದಿನ ಇರುತ್ತದೆ. ಇಲ್ಲಿ ಹತ್ತಿರದಲ್ಲಿ ಯಾವುದೇ ಕಚೇರಿಯಿಲ್ಲ. ಇದು ಜಿಲ್ಲಾಧಿಕಾರಿ ಕಚೇರಿಯ ತ್ಯಾಜ್ಯವೇ ಇರಬೇಕು. ಕಸದಲ್ಲಿ ವ್ಯರ್ಥ ಅರ್ಜಿಗಳು ಸೇರಿದಂತೆ ನಾನಾ ನಮೂನೆಯ ಪೇಪರ್ಗಳು ಹಾಗೂ ಸ್ಟೇಷನರಿ ಸಂಬಂಧಿತ ಕಸ ವಿರುತ್ತದೆ. ಯಾರೇ ಆಗಲಿ ಸ್ವಚ್ಛ ನಗರಿ ಎಂಬ ಬಿರುದಿಗೆ ಕಪ್ಪು ಚುಕ್ಕೆಯಾಗಬಾರದು. ಶೀಘ್ರ ತ್ಯಾಜ್ಯ ವಿಲೇವಾರಿ ಮಾಡಿಸಿ, ಮತ್ತೆ ತ್ಯಾಜ್ಯ ಸುರಿಯದಂತೆ ಎಚ್ಛರಿಕೆ ನೀಡುವಂತೆ,'' ಸಾರ್ವಜನಿಕರು ಆಗ್ರಹಿಸಿದ್ದಾರೆ.