ಆ್ಯಪ್ನಗರ

ಆನ್‌ಲೈನ್‌ ಔಷಧ ವ್ಯಾಪಾರ ವಿರೋಧಿಸಿ ಜಾಥಾ

ಆನ್‌ಲೈನ್‌ ಮೂಲಕ ಔಷಧ ವಹಿವಾಟು ಸ್ಥಗಿತಗೊಳಿ ಸುವುದೂ ಸೇರಿದಂತೆ ನಾನಾ ಬೇಡಿಕೆಗಾಗಿ ಹಾಗೂ ತರ್ಕಬದ್ಧ ಔಷಧ ನೀತಿಗಳಿಂದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿನಗರದಲ್ಲಿಸೋಮವಾರ ಮೆಡಿಕಲ್‌ ಅಂಡ್‌ ಸೇಲ್ಸ್‌ ರೆಪ್ರೆಸೆಂಟೇಟಿವ್‌ ಅಸೋಸಿ ಯೇಷನ್‌ ಸದಸ್ಯರು ಜಾಗೃತಿ ಜಾಥಾ ನಡೆಸಿದರು.

Vijaya Karnataka 12 Nov 2019, 5:00 am
ಮೈಸೂರು: ಆನ್‌ಲೈನ್‌ ಮೂಲಕ ಔಷಧ ವಹಿವಾಟು ಸ್ಥಗಿತಗೊಳಿ ಸುವುದೂ ಸೇರಿದಂತೆ ನಾನಾ ಬೇಡಿಕೆಗಾಗಿ ಹಾಗೂ ತರ್ಕಬದ್ಧ ಔಷಧ ನೀತಿಗಳಿಂದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ನಗರದಲ್ಲಿ ಸೋಮವಾರ ಮೆಡಿಕಲ್‌ ಅಂಡ್‌ ಸೇಲ್ಸ್‌ ರೆಪ್ರೆಸೆಂಟೇಟಿವ್‌ ಅಸೋಸಿಯೇಷನ್‌ ಸದಸ್ಯರು ಜಾಗೃತಿ ಜಾಥಾ ನಡೆಸಿದರು.
Vijaya Karnataka Web MYSPHOTOS-6031847
ನಗರದ ಮಹಾತ್ಮಗಾಂಧಿ ವೃತ್ತದ ಬಳಿ ರಾಜ್ಯ ಮಟ್ಟದ ಜಾಗೃತಿ ಜಾಥಾಕ್ಕೆ ಸೋಮವಾರ ಹಿರಿಯ ವೈದ್ಯ ಡಾ.ಕೆ.ಜಾಯೀದ್‌ ನಹೀಮ್‌ ಚಾಲನೆ ನೀಡಿದರು.


ನಗರದ ಮಹಾತ್ಮಗಾಂಧಿ ವೃತ್ತದ ಬಳಿ ರಾಜ್ಯ ಮಟ್ಟದ ಜಾಗೃತಿ ಜಾಥಾಕ್ಕೆ ಸೋಮವಾರ ಹಿರಿಯ ವೈದ್ಯ ಡಾ.ಕೆ.ಜಾಯೀದ್‌ ನಹೀಮ್‌ ಚಾಲನೆ ನೀಡಿದರು. ಬಳಿಕ ಆರಂಭವಾದ ಜಾಗೃತಿ ಜಾಥಾ ದೊಡ್ಡ ಗಡಿಯಾರ ವೃತ್ತ, ಚಾಮರಾಜೇಂದ್ರ ವೃತ್ತ, ಜಯಚಾಮರಾಜೇಂದ್ರ ವೃತ್ತ, ಬೆಂಗಳೂರು-ನೀಲಗಿರಿ ರಸ್ತೆ, ಗನ್‌ಹೌಸ್‌ ವೃತ್ತದ ಮೂಲಕ ನಂಜನಗೂಡಿಗೆ ತೆರಳಿತು. ಬಳಿಕ ಪಟ್ಟಣದ ರಸ್ತೆಗಳಲ್ಲಿಸಂಚರಿಸಿ ಹಾಸನಕ್ಕೆ ಪ್ರಯಾಣ ಬೆಳೆಸಿತು. ನ.15ರವರೆಗೆ ಮಂಡ್ಯ, ಹಾಸನ, ಶಿವಮೊಗ್ಗ, ಮಂಗಳೂರು ಜಿಲ್ಲೆಗಳಲ್ಲಿಸಂಚರಿಸಲಿದ್ದು, ಜನರಲ್ಲಿ ಜಾಗೃತಿ ಮೂಡಿಸಲಿದೆ.

ಆನ್‌ಲೈನ್‌ ಔಷಧ ಖರೀದಿಯಿಂದಾಗುವ ದುಷ್ಪರಿಣಾಮ, ತರ್ಕಬದ್ಧ ಔಷಧ ನೀತಿಗಳಿಂದಾಗಿ ಜನರ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳು ಮತ್ತು ಔಷಧ ಕಂಪನಿಗಳ ಮಾಲೀಕರಿಂದ ನೌಕರರ ಮೇಲಾಗುತ್ತಿರುವ ದೌರ್ಜನ್ಯ ಕುರಿತಂತೆ 2020ರ ಫೆ.14ರಿಂದ 16ರವರೆಗೆ ಮೈಸೂರಿನಲ್ಲಿಅಖಿಲ ಭಾರತ ಜನರಲ್‌ ಕೌನ್ಸಿಲ್‌ ಸಭೆ ಆಯೋಜಿಸಲಾಗಿದ್ದು, ಈ ಸಮಾವೇಶದ ಹಿನ್ನೆಲೆಯಲ್ಲಿರಾಜ್ಯಮಟ್ಟದಲ್ಲಿಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಔಷಧಗಳ ಮೇಲೆ ಶೇ.0 ಜಿಎಸ್‌ಟಿ, ಆನ್‌ಲೈನ್‌ ಮೂಲಕ ಔಷಧಿಗಳ ಮಾರಾಟ ನಿಷೇಧಿಸುವುದು. ಚಿಲ್ಲರೆ ಸರಪಳಿ ಮಳಿಗೆಗಳ ಮೂಲಕ ಔಷಧಗಳ ಚಿಲ್ಲರೆ ಮಾರಾಟದ ಏಕಸ್ವಾಮ್ಯವನ್ನು ನಿಲ್ಲಿಸಬೇಕು. ಔಷಧಗಳ ಮಾರಾಟ ಮತ್ತು ವ್ಯಾಪಾರದಲ್ಲಿಅನೈತಿಕ ಮತ್ತು ಭ್ರಷ್ಟ ಅಭ್ಯಾಸಗಳನ್ನು ನಿಲ್ಲಿಸಬೇಕು. ಸಾರ್ವಜನಿಕ ವಲಯದ ಔಷಧೀಯ ಕಂಪನಿ ಗಳನ್ನು ಪುನಶ್ಚೇತನಗೊಳಿಸಬೇಕು. ಎಲ್ಲಾಜನರಿಗೂ ಕೈಗೆಟುಕುವ ಆರೋಗ್ಯ ರಕ್ಷಣೆ ನೀಡಬೇಕು. ಉದ್ಯೋಗದಾತರ ಶೋಷಣೆಯಿಂದ ಕಾರ್ಯ ಕರ್ತರ ಹಿತಾಸಕ್ತಿ ಕಾಪಾಡಲು ಕಾರ್ಮಿಕ ಕಾನೂನಿನ ಮೂಲಕ ಕ್ರಮ ಕೈಗೊಳ್ಳಬೇಕು. ಯುವಕರು ಮತ್ತು ನಿರುದ್ಯೋಗಿಗಳ ಹಿತಾಸಕ್ತಿ ಕಾಪಾಡಲು ಭಾರತೀಯ ಆರ್ಥಿಕತೆ ಪುನರುಜ್ಜೀವನಗೊಳಿಸಬೇಕೆಂದು ಔಷಧ ಮಾರಾಟದ ಪ್ರತಿನಿಧಿಗಳು ಆಗ್ರಸಿದರು.

ಸಂಘದ ರಾಜ್ಯಾಧ್ಯಕ್ಷ, ಸಭೆಯ ಸಂಘಟನಾ ಕಾರ‍್ಯದರ್ಶಿ ಎಲ್‌.ಮುರಳೀಧರ ಪೇಶ್ವಾ, ಮೈಸೂರು ಘಟಕದ ಕಾರ‍್ಯದರ್ಶಿ ಕಾರ್ತಿಕ್‌ ಗೌಡ, ಮೈಸೂರು ಘಟಕದ ಅಧ್ಯಕ್ಷ ಲಕ್ಷ್ಮೇಶ, ಸಿಐಟಿಯು ರಾಜಾಧ್ಯಕ್ಷ ವರಲಕ್ಷ್ಮೇ, ರಾಜ್ಯ ಕಾರ‍್ಯದರ್ಶಿ ಉಮೇಶ್‌, ಮೈಸೂರು ಪ್ರಧಾನ ಕಾರ‍್ಯದರ್ಶಿ ಜಯರಾಮ್‌, ಜಿಲ್ಲಾಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಮ್ಮುನಲ್ಲಾಖಾನ್‌, ಕಾರ‍್ಯದರ್ಶಿ ಕುಮಾರಸ್ವಾಮಿ, ಉಪಾಧ್ಯಕ್ಷ ಚಂದ್ರಗುಪ್ತ ಜೈನ್‌ ಸೇರಿದಂತೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ