ಆ್ಯಪ್ನಗರ

ಕಬಿನಿ ಒಳ, ಹೊರ ಹರಿವು ಗಣನೀಯ ಇಳಿಕೆ

ತಾಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯದ ಹೊರ ಹರಿವು 5 ಸಾವಿರ ಕ್ಯೂಸೆಕ್‌ಗೆ ಇಳಿದಿದೆ. ಹಾಗಾಗಿ ಇದುವರೆಗೂ ಮುಳುಗಿದ್ದ ಜಲಾಶಯದ ಮುಂಭಾಗದ ಸೇತುವೆ ನೀರಿನಿಂದ ಮುಕ್ತವಾಗಿದೆ. ಜಲಾಶಯಕ್ಕೆ 13 ಸಾವಿರ ಕ್ಯೂಸೆಕ್‌ ಒಳ ಹರಿವಿದ್ದು, ಜಲಾಶಯದ ಮಟ್ಟವನ್ನು 2283.10 ಅಡಿಗೆ ನಿಲ್ಲಿಸಿಕೊಳ್ಳಲಾಗಿದೆ. ಜಲಾಶಯದ ಸಂಗ್ರಹಣಾ ಸಾಮರ್ಥ್ಯ‌ 19.55 ಟಿಎಂಸಿ ಆಗಿದ್ದು, ಸದ್ಯಕ್ಕೆ ಜಲಾಶಯದಲ್ಲಿ 18 ಟಿಎಂಸಿ ನೀರು ಇದೆ.

Vijaya Karnataka 16 Aug 2019, 5:00 am
ಎಚ್‌.ಡಿ.ಕೋಟೆ : ತಾಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯದ ಹೊರ ಹರಿವು 5 ಸಾವಿರ ಕ್ಯೂಸೆಕ್‌ಗೆ ಇಳಿದಿದೆ. ಹಾಗಾಗಿ ಇದುವರೆಗೂ ಮುಳುಗಿದ್ದ ಜಲಾಶಯದ ಮುಂಭಾಗದ ಸೇತುವೆ ನೀರಿನಿಂದ ಮುಕ್ತವಾಗಿದೆ. ಜಲಾಶಯಕ್ಕೆ 13 ಸಾವಿರ ಕ್ಯೂಸೆಕ್‌ ಒಳ ಹರಿವಿದ್ದು, ಜಲಾಶಯದ ಮಟ್ಟವನ್ನು 2283.10 ಅಡಿಗೆ ನಿಲ್ಲಿಸಿಕೊಳ್ಳಲಾಗಿದೆ. ಜಲಾಶಯದ ಸಂಗ್ರಹಣಾ ಸಾಮರ್ಥ್ಯ‌ 19.55 ಟಿಎಂಸಿ ಆಗಿದ್ದು, ಸದ್ಯಕ್ಕೆ ಜಲಾಶಯದಲ್ಲಿ 18 ಟಿಎಂಸಿ ನೀರು ಇದೆ.
Vijaya Karnataka Web kabini inner and outer flow decrease
ಕಬಿನಿ ಒಳ, ಹೊರ ಹರಿವು ಗಣನೀಯ ಇಳಿಕೆ


ಎರಡು ದಿನಗಳಿಂದ ಎಚ್‌.ಡಿ.ಕೋಟೆ ಮತ್ತು ಸರಗೂರು ಸೇರಿದಂತೆ ತಾಲೂಕಿನ ಹಲವಡೆ ಸಾಧಾರಣ ಮಳೆ ಆಗಿದೆ. ಕಬಿನಿ ಜಲಾಶಯ ವ್ಯಾಪ್ತಿಯ ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಸಾಧ್ಯತೆ ಇಲ್ಲ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಇನ್ನೂ ತಾರಕ ಮತ್ತು ನುಗು ಜಲಾಶಯಗಳಿಂದಲೂ ನೀರು ಬಿಡುತ್ತಿಲ್ಲ. ಪಟ್ಟಣದ ಬಳಿಯ ಹೆಬ್ಬಳ್ಳ ಜಲಾಶಯದಲ್ಲಿ ಕೋಡಿ ನೀರು ಹರಿಯುತ್ತಿದ್ದರೂ ಯಾವುದೇ ಆತಂಕ ಪಡಬೇಕಿಲ್ಲ.

ನೆರೆ ಹಾವಳಿ ಹಿನ್ನೆಲೆಯಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರಗಳಿಂದ ಜನರು ತಮ್ಮ ಮನೆಗಳಿಗೆ ತೆರಳಿದ್ದಾರೆ. ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಬಾಡಿಗೆ ಮನೆ ಪಡೆಯಲು ತಾಲೂಕು ಆಡಳಿತ 4,800 ರೂ. ಕೊಟ್ಟಿದೆ. ಕಂದಾಯ ಇಲಾಖೆ ಪರಿಹಾರ ಕ್ರಮ ತೆಗೆದುಕೊಂಡಿದೆ.

ನೆರೆಯಿಂದ ಸುಮಾರು 16 ಕ್ಕೂ ಹೆಚ್ಚು ದೊಡ್ಡ ಸೇತುವೆಗಳು ಹಾನಿಗೆ ಒಳಗಾಗಿದ್ದು, ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಸುಮಾರು 881 ಮನೆಗಳು ಭಾಗಶಃ ಕುಸಿದಿವೆ. ಮನೆ ಪರಿಹಾರ, ಬೆಳೆ ಪರಿಹಾರ ಮತ್ತು ಸೇತುವೆ ದುರಸ್ತಿ ಹಾಗೂ ಇತರ ಕಾರ್ಯಗಳಿಗೆ ಸುಮಾರು 50 ಕೋಟಿ ರೂ. ಅನುದಾನಕ್ಕೆ ಸರಕಾರಕ್ಕೆ ಮನವಿ ಮಾಡಿರುವುದಾಗಿ ಶಾಸಕ ಅನಿಲ್‌ ಚಿಕ್ಕಮಾದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ