ಆ್ಯಪ್ನಗರ

ಕುರುಬರ ಎಸ್‌ಟಿ ಮೀಸಲು ಹೋರಾಟಕ್ಕೆ ಕಾಗಿನೆಲೆ ಮಠದ ನೇತೃತ್ವ: ಶಿವಾನಂದ ಪುರಿ ಸ್ವಾಮೀಜಿ

ರಾಜ್ಯದಲ್ಲಿ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂಬ ಹೋರಾಟ ಪ್ರಬಲವಾಗಿದೆ. ರಾಜಕೀಯ ಕಾರಣಗಳಿಂದ ಹಲವು ನಾಯಕರು ಹೋರಾಟದಲ್ಲಿ ಭಾಗವಹಿಸುತ್ತಿಲ್ಲ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆ ಕಾಗಿನೆಲೆ ಮಠವೇ ಹೋರಾಟದ ನೇತೃತ್ವ ವಹಿಸಲಿದೆ ಎಂದು ಶಿವಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ.

Vijaya Karnataka Web 4 Dec 2020, 3:22 pm
ಮೈಸೂರು: ಹಿಂದುಳಿದ ವರ್ಗಗಳಲ್ಲಿ ಒಂದಾದ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲು ಸೌಲಭ್ಯ ಕಲ್ಪಿಸುವ ಹೋರಾಟಕ್ಕೆ ಮಠ - ಮಾನ್ಯಗಳು ನೇತೃತ್ವ ವಹಿಸಲಿವೆ ಎಂದು ಕಾಗಿನೆಲೆ ಕನಕ ಗುರು ಪೀಠದ ಮೈಸೂರು ಶಾಖೆಯ ಶಿವಾನಂದ ಪುರಿ ಸ್ವಾಮೀಜಿ ಹೇಳಿದರು.
Vijaya Karnataka Web SHIVANANDA PURI SWAMIJI
ಶಿವಾನಂದ ಪುರಿ ಸ್ವಾಮೀಜಿ (ಸಂಗ್ರಹ ಚಿತ್ರ)


ಈ ಹೋರಾಟಕ್ಕೆ ಬೆಂಬಲ ನೀಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಶಿವರಾಮು, ಕುರುಬ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ನಡೆಯುತ್ತಿರುವ ಹೋರಾಟದ ಹಿಂದೆ ಈ ಸಮುದಾಯದ ಒಗ್ಗಟ್ಟನ್ನು ಒಡೆಯುವ ಹುನ್ನಾರವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕನಕ ಜಯಂತಿ ಪ್ರಯುಕ್ತ ವಿಜಯ ಕರ್ನಾಟಕ ಕಚೇರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಇಬ್ಬರೂ ಮಾತನಾಡಿದರು. ಮೀಸಲು ಎಂಬುದು ತಳ ಸಮುದಾಯಗಳು ಪಡೆಯಲೇಬೇಕಾದ ಹಕ್ಕು. ಆದರೆ, ಮೀಸಲು ಸೌಲಭ್ಯದಿಂದಾಚೆಗೂ ಸಮುದಾಯಗಳನ್ನು ಅಭಿವೃದ್ಧಿ ಪಡಿಸುವ ಮಾರ್ಗೋಪಾಯಗಳನ್ನು ಸರಕಾರ, ಸಮಾಜ ರೂಪಿಸುವ ಅಗತ್ಯವಿದೆ ಎಂದು ಮಂಗಳೂರು ವಿವಿಯ ಕನಕದಾಸ ಸಂಶೋಧನಾ ಕೇಂದ್ರದ ಸ್ಥಾಪಕ ನಿರ್ದೇಶಕ ಪ್ರೊ.ಬಿ.ಶಿವರಾಮ ಶೆಟ್ಟಿ ಪ್ರತಿಪಾದಿಸಿದರು.

ಕುರುಬ ಹೋರಾಟಕ್ಕೆ ಸಿದ್ದರಾಮಯ್ಯ ಬರಲ್ಲ ಅಂದ್ರೆ ನಾವೇನು ಮಾಡೋದು: ಬೈರತಿ ಬಸವರಾಜ್‌ ಪ್ರಶ್ನೆ

ತಳ ಸಮುದಾಯಗಳಿಗೆ ನೀಡುತ್ತಿರುವ ಮೀಸಲು ಪ್ರಮಾಣವೇ ಕಡಿಮೆ ಇದೆ. ಸರಕಾರ ತಕ್ಷಣ ಜಾತಿ ಗಣತಿಯನ್ನು ಬಹಿರಂಗಪಡಿಸಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಕಲ್ಪಿಸಬೇಕು ಎಂದು ವಕೀಲ ಅ. ಮ.ಭಾಸ್ಕರ್‌ ಹೇಳಿದರು.

ಕುರುಬರಿಗೆ ಮೀಸಲಾತಿ ವಿಚಾರದಲ್ಲಿ ನಾನೇ ಟಾರ್ಗೆಟ್: ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ