ಪೂರ್ವಭಾವಿ ಸಭೆಯಲ್ಲಿಅಪಮಾನ ಆರೋಪ
ತಹಸೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲು ನಿರ್ಧಾರ
ಕೃಷ್ಣರಾಜನಗರ: ಪಟ್ಟಣದಲ್ಲಿನ.15ರಂದು ತಾಲೂಕು ಆಡಳಿತ ವತಿಯಿಂದ ನಡೆಯುವ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ಕುರುಬ ಸಮಾಜದ ಮುಖಂಡರು ಮತ್ತು ತಾಲೂಕು ಕುರುಬರ ಸಂಘ ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಚೀರ್ನಹಳ್ಳಿ ಶಿವಣ್ಣ ಹೇಳಿದರು.
''ಕನಕ ಜಯಂತಿ ಕಾರ್ಯಕ್ರಮ ನಡೆಯುವ ಎರಡು ದಿನ ಮುಂಚಿತವಾಗಿ ತಹಸೀಲ್ದಾರರು ಪೂರ್ವಭಾವಿ ಸಭೆ ಕರೆದು ನಿರ್ಲಕ್ಷತ್ರ್ಯ ವಹಿಸಿದ್ದು, ಇದರ ಜತೆಗೆ ಸಭೆಯ ನೋಟೀಸ್ ನೀಡಿಲ್ಲ. ಸಭೆಯಲ್ಲಿನಾವು ನೀಡಿದ ಸಲಹೆಯನ್ನೂ ಪರಿಗಣಿಸದ ಹಿನ್ನೆಲೆಯಲ್ಲಿಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಲಾಗಿದೆ,'' ಎಂದು ಸುದ್ದಿಗೋಷ್ಠಿಯಲ್ಲಿತಿಳಿಸಿದರು.
''ಪೂರ್ವಭಾವಿ ಸಭೆಯಲ್ಲಿಆಹ್ವಾನ ಪತ್ರಿಕೆಗೆ ಹಾಕಬೇಕಾದ ಹೆಸರುಗಳ ಬಗ್ಗೆ ಸಲಹೆ ಕೇಳಿದ್ದರು. ಅದರಂತೆ ಎಚ್.ವಿಶ್ವನಾಥ್ ಸೇರಿದಂತೆ ಸಮಾಜದ ಪ್ರಮುಖ ಐದು ಮಂದಿಯನ್ನು ಸೂಚಿಸಲಾಗಿತ್ತು. ಆದರೆ ತಹಸೀಲ್ದಾರ್ ಉದ್ಧೇಶಪೂರ್ವಕವಾಗಿ ವಿಶ್ವನಾಥ್ರ ಹೆಸರನ್ನು ಕೈಬಿಟ್ಟು ಆಹ್ವಾನ ಪತ್ರಿಕೆ ಮುದ್ರಿಸಿದ್ದಾರೆ,'' ಎಂದು ಆರೋಪಿಸಿದರು.
''ತಹಸೀಲ್ದಾರರು ರಾಜಕೀಯ ಪ್ರೇರಣೆಯಿಂದ ವಿಶ್ವನಾಥ್ ಹೆಸರನ್ನು ಕೈ ಬಿಟ್ಟು ಸಮಾಜವನ್ನು ಅಪಮಾನಿಸಿರುವುದರ ಜತೆಗೆ ನಮ್ಮಲ್ಲೇ ಬಿರುಕು ಉಂಟು ಮಾಡುವ ಕೆಲಸ ಮಾಡಿದ್ದಾರೆ. ಕಳೆದ 3 ವರ್ಷಗಳಿಂದ ನಿರಂತರವಾಗಿ ತಾಲೂಕು ಆಡಳಿತ ಕನಕದಾಸ ಜಯಂತಿ ಆಚರಣೆ ವಿಚಾರದಲ್ಲಿಅಸಡ್ಡೆ ತೋರುತ್ತಿದ್ದು, ಸಂಘಕ್ಕೆ ಅಪಮಾನ ಮಾಡುತ್ತಿದೆ,'' ಎಂದೂ ದೂರಿದರು.
''ನಮ್ಮ ಸಲಹೆಯನ್ನು ತಿರಸ್ಕರಿಸಿ ಎಚ್.ವಿಶ್ವನಾಥ್ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿಮುದ್ರಿಸದಿರುವುದಕ್ಕೆ ಕಾರಣವೇನು ಎಂದು ತಹಸೀಲ್ದಾರರು ಸಮಾಜದ ಮುಖಂಡರಿಗೆ ತಿಳಿಸಬೇಕು,'' ಎಂದ ಚೀರ್ನಹಳ್ಳಿಶಿವಣ್ಣ ಒತ್ತಾಯಿಸಿದರು.
ತಹಸೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿಗೆ ತಾಲೂಕು ಕುರುಬರ ಸಂಘದ ವತಿಯಿಂದ ದೂರು ನೀಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿತಾ.ಪಂ.ಪ್ರಭಾರ ಅಧ್ಯಕ್ಷ ಕೆ.ಪಿ.ಯೋಗೀಶ್ ಸಂಘದ ಉಪಾಧ್ಯಕ್ಷ ಸಾಕರಾಜು, ಕಾರ್ಯದರ್ಶಿ ನಟರಾಜು, ನಿರ್ದೇಶಕ ಮಾರ್ಚಳ್ಳಿ ಶ್ರೀನಿವಾಸ್, ಕೋಳಿಪ್ರಕಾಶ್, ಅಪ್ಪಾಜಿ, ಬುಡಿಗೌಡ, ಕಾಮೇನಹಳ್ಳಿ ಶ್ರೀನಿವಾಸ್, ರಾಮಕೃಷ್ಣೇಗೌಡ, ಬಸವರಾಜು, ಚಂದ್ರು, ಮೂಡಲಕೊಪ್ಪಲು ಕೃಷ್ಣೇಗೌಡ, ಮಂಚನಹಳ್ಳಿ ಅನಂತ್, ನಾಗಣ್ಣ, ಮುಖಂಡರಾದ ಕೆ.ಎಚ್.ಹಲಗೇಗೌಡ, ಕೆ.ಎಲ್.ಸ್ವಾಮಿ ಮತ್ತಿತರರು ಇದ್ದರು.
ತಹಸೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲು ನಿರ್ಧಾರ
ಕೃಷ್ಣರಾಜನಗರ: ಪಟ್ಟಣದಲ್ಲಿನ.15ರಂದು ತಾಲೂಕು ಆಡಳಿತ ವತಿಯಿಂದ ನಡೆಯುವ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ಕುರುಬ ಸಮಾಜದ ಮುಖಂಡರು ಮತ್ತು ತಾಲೂಕು ಕುರುಬರ ಸಂಘ ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಚೀರ್ನಹಳ್ಳಿ ಶಿವಣ್ಣ ಹೇಳಿದರು.
''ಕನಕ ಜಯಂತಿ ಕಾರ್ಯಕ್ರಮ ನಡೆಯುವ ಎರಡು ದಿನ ಮುಂಚಿತವಾಗಿ ತಹಸೀಲ್ದಾರರು ಪೂರ್ವಭಾವಿ ಸಭೆ ಕರೆದು ನಿರ್ಲಕ್ಷತ್ರ್ಯ ವಹಿಸಿದ್ದು, ಇದರ ಜತೆಗೆ ಸಭೆಯ ನೋಟೀಸ್ ನೀಡಿಲ್ಲ. ಸಭೆಯಲ್ಲಿನಾವು ನೀಡಿದ ಸಲಹೆಯನ್ನೂ ಪರಿಗಣಿಸದ ಹಿನ್ನೆಲೆಯಲ್ಲಿಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಲಾಗಿದೆ,'' ಎಂದು ಸುದ್ದಿಗೋಷ್ಠಿಯಲ್ಲಿತಿಳಿಸಿದರು.
''ಪೂರ್ವಭಾವಿ ಸಭೆಯಲ್ಲಿಆಹ್ವಾನ ಪತ್ರಿಕೆಗೆ ಹಾಕಬೇಕಾದ ಹೆಸರುಗಳ ಬಗ್ಗೆ ಸಲಹೆ ಕೇಳಿದ್ದರು. ಅದರಂತೆ ಎಚ್.ವಿಶ್ವನಾಥ್ ಸೇರಿದಂತೆ ಸಮಾಜದ ಪ್ರಮುಖ ಐದು ಮಂದಿಯನ್ನು ಸೂಚಿಸಲಾಗಿತ್ತು. ಆದರೆ ತಹಸೀಲ್ದಾರ್ ಉದ್ಧೇಶಪೂರ್ವಕವಾಗಿ ವಿಶ್ವನಾಥ್ರ ಹೆಸರನ್ನು ಕೈಬಿಟ್ಟು ಆಹ್ವಾನ ಪತ್ರಿಕೆ ಮುದ್ರಿಸಿದ್ದಾರೆ,'' ಎಂದು ಆರೋಪಿಸಿದರು.
''ತಹಸೀಲ್ದಾರರು ರಾಜಕೀಯ ಪ್ರೇರಣೆಯಿಂದ ವಿಶ್ವನಾಥ್ ಹೆಸರನ್ನು ಕೈ ಬಿಟ್ಟು ಸಮಾಜವನ್ನು ಅಪಮಾನಿಸಿರುವುದರ ಜತೆಗೆ ನಮ್ಮಲ್ಲೇ ಬಿರುಕು ಉಂಟು ಮಾಡುವ ಕೆಲಸ ಮಾಡಿದ್ದಾರೆ. ಕಳೆದ 3 ವರ್ಷಗಳಿಂದ ನಿರಂತರವಾಗಿ ತಾಲೂಕು ಆಡಳಿತ ಕನಕದಾಸ ಜಯಂತಿ ಆಚರಣೆ ವಿಚಾರದಲ್ಲಿಅಸಡ್ಡೆ ತೋರುತ್ತಿದ್ದು, ಸಂಘಕ್ಕೆ ಅಪಮಾನ ಮಾಡುತ್ತಿದೆ,'' ಎಂದೂ ದೂರಿದರು.
''ನಮ್ಮ ಸಲಹೆಯನ್ನು ತಿರಸ್ಕರಿಸಿ ಎಚ್.ವಿಶ್ವನಾಥ್ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿಮುದ್ರಿಸದಿರುವುದಕ್ಕೆ ಕಾರಣವೇನು ಎಂದು ತಹಸೀಲ್ದಾರರು ಸಮಾಜದ ಮುಖಂಡರಿಗೆ ತಿಳಿಸಬೇಕು,'' ಎಂದ ಚೀರ್ನಹಳ್ಳಿಶಿವಣ್ಣ ಒತ್ತಾಯಿಸಿದರು.
ತಹಸೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿಗೆ ತಾಲೂಕು ಕುರುಬರ ಸಂಘದ ವತಿಯಿಂದ ದೂರು ನೀಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿತಾ.ಪಂ.ಪ್ರಭಾರ ಅಧ್ಯಕ್ಷ ಕೆ.ಪಿ.ಯೋಗೀಶ್ ಸಂಘದ ಉಪಾಧ್ಯಕ್ಷ ಸಾಕರಾಜು, ಕಾರ್ಯದರ್ಶಿ ನಟರಾಜು, ನಿರ್ದೇಶಕ ಮಾರ್ಚಳ್ಳಿ ಶ್ರೀನಿವಾಸ್, ಕೋಳಿಪ್ರಕಾಶ್, ಅಪ್ಪಾಜಿ, ಬುಡಿಗೌಡ, ಕಾಮೇನಹಳ್ಳಿ ಶ್ರೀನಿವಾಸ್, ರಾಮಕೃಷ್ಣೇಗೌಡ, ಬಸವರಾಜು, ಚಂದ್ರು, ಮೂಡಲಕೊಪ್ಪಲು ಕೃಷ್ಣೇಗೌಡ, ಮಂಚನಹಳ್ಳಿ ಅನಂತ್, ನಾಗಣ್ಣ, ಮುಖಂಡರಾದ ಕೆ.ಎಚ್.ಹಲಗೇಗೌಡ, ಕೆ.ಎಲ್.ಸ್ವಾಮಿ ಮತ್ತಿತರರು ಇದ್ದರು.