ಆ್ಯಪ್ನಗರ

ಸಂಗಮ ಸಾಹಿತ್ಯಕ್ಕೆ ಕನ್ನಡದ ಕೊಡುಗೆ ಅಪಾರ

ನಾನಾ ಭಾಷೆಗಳ ಸಮ್ಮಿಲನ ಹಾಗೂ ಉತ್ಕೃಷ್ಟವಾದ ಕಾವ್ಯಾಂಶ ಹೊಂದಿರುವ ಸಂಗಮ ಸಾಹಿತ್ಯ ಬೆಳವಣಿಗೆಗೆ ಕನ್ನಡದ ಕೊಡುಗೆಯೂ ಇದೆ ಎಂಬುದನ್ನು ತಮಿಳರು ತಿಳಿದುಕೊಳ್ಳಬೇಕು ಎಂದು ಭಾಷಾ ವಿಜ್ಞಾನಿ ಪ್ರೊ.ಷ.ಶೆಟ್ಟರ್‌ ಅಭಿಪ್ರಾಯಪಟ್ಟರು.

Vijaya Karnataka 15 Jul 2019, 5:00 am
'ಮೈಸೂರು ಸಾಹಿತ್ಯ ಉತ್ಸವ' ವಿಚಾರ ಸಂಕಿರಣದಲ್ಲಿ ಪ್ರೊ.ಷ.ಶೆಟ್ಟರ್‌ ಬಣ್ಣನೆ
Vijaya Karnataka Web kannada contribution to sangam literature is immense
ಸಂಗಮ ಸಾಹಿತ್ಯಕ್ಕೆ ಕನ್ನಡದ ಕೊಡುಗೆ ಅಪಾರ


ಮೈಸೂರು:
ನಾನಾ ಭಾಷೆಗಳ ಸಮ್ಮಿಲನ ಹಾಗೂ ಉತ್ಕೃಷ್ಟವಾದ ಕಾವ್ಯಾಂಶ ಹೊಂದಿರುವ ಸಂಗಮ ಸಾಹಿತ್ಯ ಬೆಳವಣಿಗೆಗೆ ಕನ್ನಡದ ಕೊಡುಗೆಯೂ ಇದೆ ಎಂಬುದನ್ನು ತಮಿಳರು ತಿಳಿದುಕೊಳ್ಳಬೇಕು ಎಂದು ಭಾಷಾ ವಿಜ್ಞಾನಿ ಪ್ರೊ.ಷ.ಶೆಟ್ಟರ್‌ ಅಭಿಪ್ರಾಯಪಟ್ಟರು.

ಮೈಸೂರು ಲಿಟರೆರಿ ಫೋರಂ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ನಗರದಲ್ಲಿ ಆಯೋಜಿಸಿರುವ 'ಮೈಸೂರು ಸಾಹಿತ್ಯ ಉತ್ಸವ- 2019'ರ ಎರಡನೇ ದಿನದ ವಿಚಾರ ಸಂಕಿರಣದಲ್ಲಿ 'ಕನ್ನಡ ನುಡಿ, ಸಾಹಿತ್ಯ ಪ್ರಧಾನ ಧಾರೆ' ಎಂಬ ವಿಚಾರ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು.

''ಕನ್ನಡ 4ನೇ ಶತಮಾನ, ತಮಿಳು 7ನೇ ಶತಮಾನದಲ್ಲಿ ಸಂಪೂರ್ಣ ಲಿಪಿ ರೂಪಕ್ಕೆ ಬಂದವು. ಹೀಗಾಗಿ ಮೊದಲು ಮೌಖಿಕವಾಗಿದ್ದು, ನಂತರ ಲಿಪಿ ರೂಪಕ್ಕೆ ಬಂದ ಹಲವು ಭಾಷೆಗಳಲ್ಲಿ ಕನ್ನಡ ಮೊದಲಾದರೆ, ತಮಿಳು ನಂತರದ ಸ್ಥಾನ ಪಡೆದಿದೆ. ಸಾಹಿತ್ಯ ಬೇರೆ, ಲಿಪಿ ಬೇರೆ ಎಂಬುದನ್ನು ಮನಗಾಣಬೇಕು. ಕಾವ್ಯಾಂಶಗಳು ಸಂಗಮ ಸಾಹಿತ್ಯದಲ್ಲಿ ಉತ್ಕೃಷ್ಟವಾಗಿದ್ದು, ಅವುಗಳನ್ನು ಮೀರಿಸುವಷ್ಟು ನಾವು ಸಾಹಿತ್ಯ ಬರೆದಿಲ್ಲ. ಅಷ್ಟು ಸಾಹಿತ್ಯ ಸಂಪತ್ತು ಮಾಡಿಕೊಂಡಿದ್ದಾರೆ. ಆದರೆ 12 ಕವಿಗಳು ಗುರುತಿಸಿ, ಅವರು ಕನ್ನಡಿಗರು ಅಂತ ಹೇಳಿ, ಅವರ ಸಾಹಿತ್ಯವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದೇನೆ. ತನ್ಮೂಲಕ ತಮಿಳರದ್ದು ಸಂಗಮ ಸಾಹಿತ್ಯವಾದರೂ ಅದರಲ್ಲಿ ನಮ್ಮ ಭಾಗವಿತ್ತು ಎಂಬ ಅಂಶವನ್ನು ಬೆಳಕಿಗೆ ತಂದಿದ್ದೇನೆ,'' ಎಂದರು.

''ಕನ್ನಡ ಇತಿಹಾಸವು ಹಲ್ಮಿಡಿ ಶಾಸನವನ್ನು ದಾಟಿ 'ಇಸಿಲ' ಶಬ್ದಕ್ಕೆ ಹೋಗುತ್ತದೆ. ಆದರೆ ಮೌಖಿಕವಾಗಿ ನಮ್ಮದು ಇನ್ನೂ ನೂರಾರು ವರ್ಷಗಳಷ್ಟು ಇತಿಹಾಸವುಳ್ಳ ಭಾಷೆಯಾಗಿದೆ. ಭಾಷೆಗೆ ಯಾವಾಗಲೂ ಲಿಪಿಯಿಂದ ಬಂದಿದ್ದು ಅಂದಾಗ ಮಾತ್ರ ಮಹತ್ವ ಬರುತ್ತದೆ. ಸಂಸ್ಕೃತ ಪ್ರಾಚೀನ ಭಾಷೆಯಾದರೂ ಲಿಪಿ ಹೊಂದಿರಲಿಲ್ಲ. ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಿನಲ್ಲಿ ತಮಿಳಿನಲ್ಲಿಯೇ ಲಿಪ್ಯಂತರ ಹೊಂದಿ ಬೆಳೆಯಿತೇ ವಿನಃ ಸ್ವಂತ ಲಿಪಿ ಮಾಡಿಕೊಂಡಿಲ್ಲ. ಕೆಲವು ಆರ್ಯವರ್ತ ಸಂಸ್ಕೃತ ಪಂಡಿತರು ಸಂಸ್ಕೃತ ಓದಿ ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಲಿಪಿ ರಚನೆಯಾಗಲು ಬಿಡಲಿಲ್ಲ. ಇದು ಬಾಲಿಶವಾದಂತಹ ವಿಷಯ. 3ನೇ ಶತಮಾನಕ್ಕೆ ಅಶೋಕ ಬ್ರಾಹ್ಮಿ ಲಿಪಿ ಲೋಕಕ್ಕೆ ಪರಿಚಯಿಸಿದ. ಆ ನಂತರ ಇತರೆ ಭಾಷೆಗಳು ಹುಟ್ಟಿಕೊಂಡವು,'' ಎಂದರು.

ಇತಿಹಾಸ ಪ್ರಾಧ್ಯಾಪಕ ಡಾ.ಪೃಥ್ವಿದತ್ತ ಚಂದ್ರಶೋಭಿ ಸಂವಾದ ನಡೆಸಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ