ಆ್ಯಪ್ನಗರ

ಕನ್ನಡ ದೇಶವಿದು:ಕವಿ ವ್ಯಾಖ್ಯಾನ

ಕನ್ನಡದ ಅಸ್ತಿತ್ವ ತುಂಬಾ ಗಟ್ಟಿಯಾಗಿ ನೆಲೆ ನಿಂತಿರುವ ಭಾರತದಲ್ಲಿ, ಕನ್ನಡ ಭಾಷೆ ಮತ್ತು ದೇಶವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಹೇಳಿದರು.

ವಿಕ ಸುದ್ದಿಲೋಕ 8 May 2017, 5:15 am
ಮೈಸೂರು: ಕನ್ನಡದ ಅಸ್ತಿತ್ವ ತುಂಬಾ ಗಟ್ಟಿಯಾಗಿ ನೆಲೆ ನಿಂತಿರುವ ಭಾರತದಲ್ಲಿ, ಕನ್ನಡ ಭಾಷೆ ಮತ್ತು ದೇಶವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಹೇಳಿದರು.
Vijaya Karnataka Web kannada country definition of poet
ಕನ್ನಡ ದೇಶವಿದು:ಕವಿ ವ್ಯಾಖ್ಯಾನ


ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಶ್ರೀ ಶಿವರಾತ್ರೀಶ್ವರ ರಾಜೇಂದ್ರ ಭವನದಲ್ಲಿ ನಡೆದ ಸಮಾರಂಭದಲ್ಲಿ ಹಲವು ಸದುದ್ದೇಶವನ್ನು ಹೊತ್ತು ನೂತನವಾಗಿ ಸ್ಥಾಪನೆಯಾದ ಭಾರತ ಕನ್ನಡ ಪರಿಷತ್ತಿನ ಉದ್ಘಾಟನೆಗೊಳಿಸಿ ಮಾತನಾಡಿದರು.

‘‘ಕನ್ನಡದ ಅಸ್ತಿತ್ವ ತುಂಬಾ ಗಟ್ಟಿಯಾಗಿ ನೆಲೆ ನಿಂತಿರುವ ಭಾರತದಲ್ಲಿ, ಕನ್ನಡ ಭಾಷೆ ಮತ್ತು ದೇಶವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಇದರೊಂದಿಗೆ ಜಗತ್ತು ವಿಕಾಸಗೊಳ್ಳುತ್ತಿದ್ದಂತೆ ಜಾಗತೀಕರಣದೆಡೆಗೆ ಕೊಚ್ಚಿ ಹೋಗುತ್ತಿರುವ ಕನ್ನಡಿಗರ ರಕ್ಷಣೆಗೆ ನೂತನವಾಗಿ ಉದಯಿಸಿರುವ ಭಾರತ ಕನ್ನಡ ಪರಿಷತ್ತು ಕನ್ನಡದ ಉಳಿವಿಗೆ ಆಶಾದಾಯಕ ವಾಗಿದೆ,’’ಎಂದು ಸ್ವಾಗತಿಸಿದರು.

‘‘ಜಗತ್ತಿನಲ್ಲಿ ಪ್ರಸ್ತುತ ಸಂಕುಚಿತಗೊಂಡಿರುವ ದೇಶಗಳೆಲ್ಲವೂ ವ್ಯಾಪಾರೀಕರಣದ ಹಿನ್ನೆಲೆಯನ್ನು ಪಡೆದುಕೊಳ್ಳುತ್ತಿದೆ. ಎಲ್ಲೆಡೆ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳು ಮಿಶ್ರಣಗೊಂಡು ಕಂಗ್ಲಿಷ್ ಭಾಷೆಯಾಗಿ ಬಳಕೆಯಾಗುತ್ತಿದೆ. ಇನ್ನೊಂದೆಡೆ ಎಲ್ಲಾ ನಗರವೂ ವಾಣಿಜ್ಯ ಕೇಂದ್ರಗಳಾಗಿ ಮೌಲ್ಯಗಳೆಲ್ಲವೂ ಉಲ್ಲಟ- ಪಲ್ಲಟಗಳಾಗುತ್ತಿವೆ. ಇಂತಹ ಸ್ಥಿತಿಯಲ್ಲಿ ಮೌಲ್ಯತೆ ಬಿತ್ತಲು ಭಾರತ ಕನ್ನಡ ಪರಿಷತ್ತು ಸ್ಥಾಪನೆಯಾಗಿರುವುದು ಶ್ಲಾಘನೀಯ. ಹಾಗಾಗಿ ಪರಿಷತ್ತಿನ ಹೆಚ್ಚೆಚ್ಚು ಪ್ರಚಾರದೊಂದಿಗೆ ಕನ್ನಡ ಭಾಷೆ ಹಾಗೂ ಸಾಹಿತ್ಯದ ಉಳಿವಿಗೆ ಶ್ರಮಿಸಿರಿ,’’ ಎಂದು ಪರಿಷತ್ತಿನ ಪದಾಧಿಕಾರಿಗಳಿಗೆ ಸಲಹೆ ನೀಡಿದರು.

ಪರಿಷತ್ತಿನ ಲಾಂಛನ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ‘‘ಕನ್ನಡದ ಉಳಿವಿಗೆ ಅದೆಷ್ಟು ಸಂಘಟನೆಗಳು ಹುಟ್ಟಿದ ರೂ ಕನ್ನಡದ ಸ್ಥಿತಿ ಮಾತ್ರ ಇಂದಿಗೂ ಶೋಷಚನೀ ಯವಾಗಿದೆ. ಪ್ರಸ್ತುತ ನಾವೆಲ್ಲರೂ ರಾಜ್ಯೋದಯದ ವಜ್ರ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಆದರೂ ನಮ್ಮ ಕನ್ನಡಿಗರ, ಕರ್ನಾಟಕದ ಸಾಧನೆ ಬರೀ ಹಿತ್ತಾಳೆ ಸಾಧನೆಯಾಗಿದ್ದು, ಕನ್ನಡಕ್ಕಾಗಿ ಹೋರಾಡಿದಂತಹ ಮಹನೀಯರ ಶ್ರಮ ಇಂದಿಗೂ ಸಾರ್ಥಕವಾಗಿಲ್ಲ,’’ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಗೌರವಾಧ್ಯಕ್ಷೆ ಚಂಪಾಶಿವಣ್ಣ ಅವರು ರಚಿಸಿರುವ ಸೌಗಂಧಿಕ ಮತ್ತು ಚೆಂಗುಲಾಬಿ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಜತೆಗೆ ಕೇರಳದ ಪಾಲಕಾಡು ಜಿಲ್ಲೆಯಲ್ಲಿರುವ ಕಾಲಂಪಡ್ ಹೌಸ್ ಮೆಲಾರ್‌ಗೂಡ್‌ನ ಕೆ.ಕೆ.ಬಾಲಕೃಷ್ಣ ವರ್ಮ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎನ್.ಎಸ್.ರಾಮೇಗೌಡ, ಹಿರಿಯ ಸಾಹಿತಿ ಡಾ.ಕೆ.ಲೀಲಾ ಪ್ರಕಾಶ್, ಪರಿಷತ್ತಿನ ಹಿರಿಯ ಪೋಷಕಿ ಎ.ಹೇಮಗಂಗಾ, ರಾಜ್ಯಾಧ್ಯಕ್ಷ ರಾಘವೇಂದ್ರ ಕುಮಾರ್, ರಾಜ್ಯ ಉಪಾಧ್ಯಕ್ಷೆ ಎಸ್.ನಾಗರತ್ನ, ಕವಿ ಜಯಪ್ಪ ಹೊನ್ನಾಳಿ ಹಾಗೂ ಸಿರಿಗನ್ನಡ ವೇದಿಕೆ ರಾಜ್ಯ ಮಹಿಳಾ ಉಪಾಧ್ಯಕ್ಷೆ ಸೌಗಂಧಿಕಾ ವಿ.ಜೋಯಿಸ್ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ