ಆ್ಯಪ್ನಗರ

ನಾಯಿಗಳಿಗಾದ್ರೂ ಉತ್ತರಿಸ್ತೀನಿ..! ಯತ್ನಾಳ, ರೇಣುಕಾಚಾರ್ಯ ಮಾತಿಗೆ ಪ್ರತಿಕ್ರಿಯಿಸಲ್ಲ ಎಂದ ವಾಟಾಳ್

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ವಾಟಾಳ್‌ ನಾಗರಾಜ್‌ ವಿರುದ್ಧ ಹರಿಹಾಯ್ದಿದ್ದ ರೇಣುಕಾಚಾರ್ಯ, ಯತ್ನಾಳ್‌ ಯಾರು ಎಂಬುದೇ ನನಗೆ ತಿಳಿದಿಲ್ಲ ಎಂದು ವಾಟಾಳ್‌ ನಾಗರಾಜ್‌ ಮೈಸೂರಿನಲ್ಲಿ ಹೇಳಿದ್ದಾರೆ. ನಾಯಿಗಳಿಗಾದ್ರೂ ಉತ್ತರ ಕೊಡ್ತಿನಿ. ಆದ್ರೆ ಅವರ ಮಾತುಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

Vijaya Karnataka Web 29 Nov 2020, 8:21 pm
ಮೈಸೂರು: ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಡಿ.5ರಂದು ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್‌ ನಡೆಯುವುದು ಶತಸಿದ್ಧ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.
Vijaya Karnataka Web karnataka bandh on december 5th confirm says vatal nagaraj in mysuru
ನಾಯಿಗಳಿಗಾದ್ರೂ ಉತ್ತರಿಸ್ತೀನಿ..! ಯತ್ನಾಳ, ರೇಣುಕಾಚಾರ್ಯ ಮಾತಿಗೆ ಪ್ರತಿಕ್ರಿಯಿಸಲ್ಲ ಎಂದ ವಾಟಾಳ್


ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.30ರೊಳಗೆ ರಾಜ್ಯ ಸರಕಾರ ಮರಾಠ ಪ್ರಾಧಿಕಾರ ರಚಿಸುವ ನಿರ್ಧಾರ ಹಿಂಪಡೆಯಬೇಕು. ಇಲ್ಲವಾದಲ್ಲಿ ಡಿ.5ರಂದು ರಾಜ್ಯಾದ್ಯಂತ ಬಂದ್‌ ನಡೆಸುತ್ತೇವೆ. ಈಗಾಗಲೇ ಸುಮಾರು 1500 ಸಂಘಟನೆಗಳು, ಕಾಂಗ್ರೆಸ್‌, ಜೆಡಿಎಸ್‌ ಸೇರಿ ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ. ಹೀಗಾಗಿ ಆ ದಿನದಂದು ಬಸ್ಸು, ಟ್ಯಾಕ್ಸಿ, ರೈಲು ಸೇರಿ ಎಲ್ಲಾ ಸೇವೆಯೂ ಬಂದ್‌ ಆಗಲಿದೆ ಎಂದು ತಿಳಿಸಿದರು.

ಮರಾಠ ಪ್ರಾಧಿಕಾರ ರಚಿಸಿದಲ್ಲಿ ಮುಂದಿನ ದಿನಗಳಲ್ಲಿ ತಮಿಳರು, ಆಂಧ್ರದವರು, ಮಲೆಯಾಳಿಯವರು ಎಲ್ಲರೂ ಪ್ರಾಧಿಕಾರ ಕೇಳುತ್ತಾರೆ. ಚುನಾವಣೆ ಹಿನ್ನೆಲೆ 30 ಸಾವಿರ ಮರಾಠರ ಮತ ಪಡೆಯಲು ಪ್ರಾಧಿಕಾರ ರಚನೆ ಮಾಡಿದ್ದಾರೆ. ತನ್ಮೂಲಕ ಸಿಎಂ ಯಡಿಯೂರಪ್ಪ ಬರೀ ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅವರಿಗೆ ಬುದ್ದಿ ಇದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಈ ರೀತಿ ಧೋರಣೆ ಇರುವ ಸಿಎಂ ಅವರಿಂದ ಕರ್ನಾಟಕ, ಗಡಿನಾಡು ಉದ್ದಾರ ಆಗೋಲ್ಲ ಎಂದರು.

ಎರಡು ವರ್ಷದ ಹಿಂದೆ ಕರ್ನಾಟಕದಲ್ಲಿ ತಿರುವಳ್ಳವರ್‌ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಿದ ಯಡಿಯೂರಪ್ಪ, ಆ ಕ್ರಮವನ್ನು ವಿರೋಧಿಸಿದ್ದಕ್ಕೆ ನಮ್ಮನ್ನು ಜೈಲಿನಲ್ಲಿಟ್ಟಿದ್ದರು. ಇದೀಗ ಮರಾಠರ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಮುಂದಾಗಿದ್ದಾರೆ. ಇದು ಸರಿಯಲ್ಲ ಎಂದು ವಾಟಾಳ್‌ ನಾಗರಾಜ್ ‌ಟೀಕಿಸಿದರು.

ಡಿಸೆಂಬರ್‌ 5ರಂದು ಕರ್ನಾಟಕ ಬಂದ್‌ ನಿಶ್ಚಿತ, ಕನ್ನಡ ಹೋರಾಟಗಾರರ ಘೋಷಣೆ

ಯಡಿಯೂರಪ್ಪ ಒಬ್ಬ ಮಾಯಾವಿ. ಕ್ಷಣಕ್ಕೊಂದು ರೀತಿ ವರ್ತಿಸುತ್ತಿದ್ದಾರೆ. ಸೌಂದರ್ಯ ಚೆನ್ನಾಗಿದೆ ಅಂತ ಮದ್ವೆಯಾದ್ರೆ ರಾಕ್ಷಸಿ ರೂಪ ತೋರಿಸ್ತಾರೆ. ಬೆಳಗ್ಗೆ ರಾಕ್ಷಸ, ಸಂಜೆಯಾದ್ರೆ ಒಳ್ಳೆಯ ವ್ಯಕ್ತಿ, ರಾತ್ರಿ ಡ್ಯಾನ್ಸ್‌ ಆಡೋ ಮಾಯಾವಿಯಾಗಿದ್ದಾರೆ. ಇದನ್ನ ನಾನು ಶಾಸನ ಸಭೆಯಲ್ಲಿಯೇ ಹೇಳಿದ್ದೇನೆ. ಹೀಗಾಗಿ ಯಾರೂ ಯಡಿಯೂರಪ್ಪನ ನಂಬಿ ಕೆಡಬೇಡಿ ಎಂದರು.

ಮರಾಠ ಅಭಿವೃದ್ದಿ ನಿಗಮಕ್ಕೆ ವಿರೋಧ: ಡಿಸೆಂಬರ್‌ 5 ರಂದು ‘ಕರ್ನಾಟಕ ಬಂದ್‌’ ಅಧಿಕೃತ!

ಒಬಿಸಿಗೆ ಲಿಂಗಾಯತ ಸಮುದಾಯ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಲಿಂಗಾಯಿತ ಧರ್ಮ ಅಭಿವೃದ್ಧಿ ಮಾಡುವವರಾಗಿದ್ದರೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕಿತ್ತು. ಬಸವಣ್ಣನವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಆದರೆ ಅವರು ಅದನ್ನು ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕರ್ನಾಟಕ ಬಂದ್: ಕನ್ನಡ ಪರ ಸಂಘಟನೆ v/s ಬಿಜೆಪಿ ಸಂಘರ್ಷ!

ಬಂದ್‌ ವಿಚಾರವಾಗಿ ಯತ್ನಾಳ್‌ ಹಾಗೂ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ರೇಣುಕಾಚಾರ್ಯ, ಯತ್ನಾಳ್‌ ಯಾರು ಎಂಬುದೇ ನನಗೆ ತಿಳಿದಿಲ್ಲ. ನಾಯಿಗಳಿಗಾದ್ರೂ ಉತ್ತರ ಕೊಡ್ತಿನಿ. ಆದ್ರೆ ಅವರ ಮಾತುಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ರೇಣುಕಾಚಾರ್ಯ ಕೆಟ್ಟ ವಿಡಿಯೋಗಳು ವಾಟ್ಸಾಪ್‌ನಲ್ಲಿ ಹರಿದಾಡ್ತಿವೆ. ಅಂತಹವರ ಆರೋಪಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ