ಆ್ಯಪ್ನಗರ

ನಾಲ್ಕು ಕ್ಷೇತ್ರಗಳಲ್ಲಿ ಉದುರಿದ ದಳ

ರಾಜ್ಯ ರಾಜಕಾರಣದಲ್ಲೇ ಹೈವೋಲ್ಟೆಜ್‌ ಕ್ಷೇತ್ರವಾಗಿದ್ದ ಚಾಮುಂಡೇಶ್ವರಿ ಕ್ಷೇತ್ರ ಸೇರಿದಂತೆ ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಜೆಡಿಎಸ್‌ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಾಬಲ್ಯ ಮೆರೆದರೂ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್‌ನ ಅಭ್ಯರ್ಥಿಗಳು ಮೂರು ಅಥವಾ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಠೇವಣೆಯನ್ನೇ ಕಳೆದುಕೊಂಡಿದ್ದಾರೆ.

Vijaya Karnataka Web 17 May 2018, 5:00 am
ಮೈಸೂರು: ರಾಜ್ಯ ರಾಜಕಾರಣದಲ್ಲೇ ಹೈವೋಲ್ಟೆಜ್‌ ಕ್ಷೇತ್ರವಾಗಿದ್ದ ಚಾಮುಂಡೇಶ್ವರಿ ಕ್ಷೇತ್ರ ಸೇರಿದಂತೆ ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಜೆಡಿಎಸ್‌ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಾಬಲ್ಯ ಮೆರೆದರೂ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್‌ನ ಅಭ್ಯರ್ಥಿಗಳು ಮೂರು ಅಥವಾ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಠೇವಣೆಯನ್ನೇ ಕಳೆದುಕೊಂಡಿದ್ದಾರೆ.
Vijaya Karnataka Web karnataka election 2018
ನಾಲ್ಕು ಕ್ಷೇತ್ರಗಳಲ್ಲಿ ಉದುರಿದ ದಳ


ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರು 36,042 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರೂ, ಜಿಲ್ಲೆಯ ಐದು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಜೆಡಿಎಸ್‌ ಅಭ್ಯರ್ಥಿಗಳು ಠೇವಣಿಯನ್ನೇ ಕಳೆದುಕೊಂಡು ಮುಗ್ಗರಿಸಿದೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಿಗೆ ಮಾತ್ರ ತೃಪ್ತಿಕೊಂಡಿದ್ದ ಜೆಡಿಎಸ್‌ ಈಗ ತನ್ನ ಸಾಮರ್ಥವನನ್ನು ಕ್ಷೇತ್ರದಲ್ಲಿ ವೃದ್ದಿಸಿಕೊಂಡಿದ್ದು, ಹೆಚ್ಚುವರಿಯಾಗಿ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್‌ನ ತೆನೆ ವೃದ್ದಿಯಾಗಿದೆ.

ಜಿಲ್ಲೆಯ 11 ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲುವು ಸಾಧಿಸಿದ್ದರೂ, ಉಳಿದ ಆರು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ 2 ನೇ ಸ್ಥಾನ ಪಡೆದರೆ, ನಾಲ್ಕು ಕ್ಷೇತ್ರಗಳಲ್ಲಿ ಮೂರು ಸ್ಥಾನಕ್ಕೆ ಹೋದರೆ ಒಂದು ಕ್ಷೇತ್ರದಲ್ಲಿ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಅತಿ ಕಡಿಮೆ ಮತಗಳನ್ನು ಗಳಿಸುವ ಮೂಲಕ ನಾಲ್ಕು ಕ್ಷೇತ್ರಗಳಲ್ಲಿ ಠೇವಣೆ ಕಳೆದು ಕೊಂಡಿದೆ.

ಮೈಸೂರು ನಗರದ ಪ್ರತಿಷ್ಠಿತ ಕ್ಷೇತ್ರವಾದ ಕೃಷ್ಣ ರಾಜ, ಎನ್‌. ಆರ್‌. ಕ್ಷೇತ್ರ ಮತ್ತು ವರುಣ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳು, ಅತಿ ಕಡಿಮೆ ಮತಗಳನ್ನು ಗಳಿಸುವ ಮೂಲಕ ಠೇವಣೆ ಕಳೆದುಕೊಂಡಿದ್ದಾರೆ.

ರಾಜ್ಯದಲ್ಲೇ ಹೈವೋಲ್ಟೆಜ್‌ ಕ್ಷೇತ್ರವೆಂದೇ ಬಿಂಬಿತವಾಗಿದ್ದ ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರು ಅತಿ ಹೆಚ್ಚು ಮತಗಳನ್ನು ಅಂದರೆ 1,21,325 ಮತಗಳನ್ನು ಗಳಿಸಿ ಜಯಶೀಲರಾದರೆ, ಮೈಸೂರು ನಗರದ ನರಸಿಂಹ ರಾಜ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಅಬ್ದುಲ್‌ ಅಜೀಜ್‌ ಅತಿ ಕಡಿಮೆ ಅಂದರೆ 14,709 ಮತಗಳನ್ನು ಮಾತ್ರ ಗಳಿಸಿದ್ದು, ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರಲ್ಲದೇ ಠೇವಣಿ ಕಳೆದುಕೊಂಡಿದ್ದಾರೆ.

ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಚಲಾವಣೆಯಾದ 18,46,355 ಮತಗಳಲ್ಲಿ ಜೆಡಿಎಸ್‌ ಪಕ್ಷದ 11 ಅಭ್ಯರ್ಥಿಗಳು 6,05,030 ಮತಗಳನ್ನು ಪಡೆದಿದ್ದಾರೆ

ಗೆದ್ದ ಕೇತ್ರಗಳು: ಜೆಡಿಎಸ್‌-5, ಕಾಂಗ್ರೆಸ್‌-3, ಬಿಜೆಪಿ-3

ಪಡೆದ ಮತಗಳ ವಿವರ:

*ಚಾಮುಂಡೇಶ್ವರಿ- ಜಿ.ಟಿ.ದೇವೇಗೌಡ 1,21,325(1 ನೇ ಸ್ಥಾನ)

*ಹುಣಸೂರು- ಎಚ್‌.ವಿಶ್ವನಾಥ್‌, 91,667(1 ನೇ ಸ್ಥಾನ)

*ತಿ.ನರಸೀಪುರ- ಎಂ. ಅಶ್ವಿನ್‌ ಕುಮಾರ್‌, 79,749(1 ನೇ ಸ್ಥಾನ)

*ಪಿರಿಯಾಪಟ್ಟಣ-ಕೆ. ಮಹದೇವ, 77,317(1ನೇ ಸ್ಥಾನ)

*ಕೆ.ಆರ್‌. ನಗರ- ಸಾ.ರಾ. ಮಹೇಶ್‌, 85,011(1 ನೇ ಸ್ಥಾನ).

*ಎಚ್‌.ಡಿ. ಕೋಟೆ-ಚಿಕ್ಕಣ್ಣ, 54,559(2 ನೇ ಸ್ಥಾನ)

* ಚಾಮರಾಜ- ಪ್ರೊ.ಕೆ.ಎಸ್‌. ರಂಗಪ್ಪ, 27.284 (3 ನೇ ಸ್ಥಾನ)

ಠೇವಣಿ ಕಳೆದು ಕೊಂಡವರು:

*ವರುಣ- ಅಭಿಷೇಕ್‌ ಎಸ್‌. ಮಣೆಗಾರ್‌ 28,123(3 ನೇ ಸ್ಥಾನ ).

*ನರಸಿಂಹರಾಜ- ಅಬ್ದುಲ್‌ ಅಜೀಜ್‌( ಅಬ್ದುಲ್ಲಾ), 14,709(4 ನೇ ಸ್ಥಾನ)

*ನಂಜನಗೂಡು- ಎಚ್‌.ಎಸ್‌. ದಯಾನಂದ ಮೂರ್ತಿ, 13,679(3 ನೇ ಸ್ಥಾನ)

*ಕೃಷ್ಣ ರಾಜ - ಕೆ.ವಿ. ಮಲ್ಲೇಶ್‌ 11,607(3 ನೇ ಸ್ಥಾನ )

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ