ಆ್ಯಪ್ನಗರ

ಕಾವೇರಿ ನೀರು ಪ್ರವಾಹ: ಸಸ್ಯ ಕ್ಷೇತ್ರದ 96 ಸಾವಿರ ಗಿಡಗಳು ಜಲಾವೃತ

ಮಳೆ ನೀರು ಹೆಚ್ಚಾದ ಪರಿಣಾಮ ಕಾವೇರಿ ನೀರು ಪ್ರವಾಹದಿಂದ ಗಿರಿಗೂರು ಸಸ್ಯ ಕ್ಷೇತ್ರದಲ್ಲಿ 96 ಸಾವಿರ ವಿವಿಧ ಜಾತಿಯ ಗಿಡಗಳು ಜಾಲವೃತಗೊಂಡಿವೆ ಎಂದು ಸಸ್ಯಕ್ಷೇತ್ರದ ಉಪ ವಲಯಾರಣ್ಯಾಧಿಕಾರಿ ಪಿ.ಎಲ್‌.ರಾಮಣ್ಣ ತಿಳಿಸಿದ್ದಾರೆ.

Vijaya Karnataka 14 Aug 2019, 5:00 am
ಬೈಲಕುಪ್ಪೆ : ಮಳೆ ನೀರು ಹೆಚ್ಚಾದ ಪರಿಣಾಮ ಕಾವೇರಿ ನೀರು ಪ್ರವಾಹದಿಂದ ಗಿರಿಗೂರು ಸಸ್ಯ ಕ್ಷೇತ್ರದಲ್ಲಿ 96 ಸಾವಿರ ವಿವಿಧ ಜಾತಿಯ ಗಿಡಗಳು ಜಾಲವೃತಗೊಂಡಿವೆ ಎಂದು ಸಸ್ಯಕ್ಷೇತ್ರದ ಉಪ ವಲಯಾರಣ್ಯಾಧಿಕಾರಿ ಪಿ.ಎಲ್‌.ರಾಮಣ್ಣ ತಿಳಿಸಿದ್ದಾರೆ.
Vijaya Karnataka Web MYR-PHOTO MYS 13 BYL 01


ಪಿರಿಯಾಪಟ್ಟಣ ತಾಲೂಕು ಗಿರುಗೂರು ಗ್ರಾಮದ ಸಸ್ಯಕ್ಷೇತ್ರದಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿ ಗ್ರಾಮದ ರೈತರಿಗೆ ಹಾಗೂ ರಸ್ತೆ ಬದಿ ನೆಡಲು ವಿವಿಧ ಜಾತಿಯ ಗಿಡಗಳನ್ನು ಇಲಾಖೆವತಿಯಿಂದ ಬೆಳೆಸಲಾಗಿದ್ದ ಗಿಡಗಳೇ ಪ್ರವಾಹದ ನೀರಿಗೆ ಬಲಿಯಾಗಿರುವುದು.

ಆಯಾ ಪಂಚಾಯಿತಿಯ ಕೆಲವು ರೈತರು ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಮಳೆ ಬಂದ ತಕ್ಷಣ ವಿತರಿಸಲು ನಮ್ಮ ಇಲಾಖೆ ವತಿಯಿಂದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಆದರೆ ದುರದೃಷ್ಟಕ್ಕೆ ಇದ್ದಕ್ಕಿದ್ದ ಹಾಗೆ ಅತಿ ಹೆಚ್ಚು ಮಳೆಯಾದ ಕಾರಣ ಕಾವೇರಿ ನದಿ ನೀರು ಪ್ರವಾಹದಿಂದಾಗಿ ಸಸ್ಯಕ್ಷೇತ್ರದಲ್ಲಿ 8 ಅಡಿಗೂ ಹೆಚ್ಚು ನೀರು ಜಾಲಾವೃತಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಲಯಾರಣ್ಯಾಧಿಕಾರಿ ಶೈಲಜ, ಸಿಬ್ಬಂದಿ ಮಹದೇವು ಸೇರಿದಂತೆ ಮತ್ತಿತರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ