ಮೈಸೂರು: ಆಧುನಿಕ ಜಗತ್ತಿನಲ್ಲಿ ಮನುಷ್ಯನ ಬದುಕು, ಮೌಲ್ಯಗಳು ಬದಲಾವಣೆಯಾಗುತ್ತಿದ್ದು, ಹಣ, ಆಸ್ತಿ, ಅಂತಸ್ತುಗಳನ್ನು ಪಡೆಯಬೇಕೆಂಬ ಉದ್ದೇಶದಿಂದ ನಾನಾ ರೀತಿಯ ಅಪರಾಧಗಳಲ್ಲಿ ಸಿಲುಕುತ್ತಿದ್ದಾನೆ ಎಂದು ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸಿ. ಗೋಪಾಲ್ ಬೇಸರ ವ್ಯಕ್ತಪಡಿಸಿದರು.
ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಮಾನವ ಕಳ್ಳ ಸಾಗಾಣಿಕೆ ನಿಷೇಧ ಘಟಕ, ಆರ್ಥಿಕ ಅಪರಾಧ ವಿಭಾಗ ಸಿಸಿಬಿ ಮೈಸೂರು ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 2016-17ನೇ ಸಾಲಿನ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ, ಗಂಡು ಹೆಣ್ಣುಗಳು ಎಂಬ ತಾರತಮ್ಯ ಮಾಡುತ್ತಿದ್ದು, ಇದನ್ನು ನಮ್ಮ ಮನೆಯ ಬೀದಿಗಳಿಂದಲೇ ವಿಚಾರ ಮಾಡುವ, ಪ್ರಶ್ನೆ ಮಾಡುವ ಮಾರ್ಗೋಪಾಯಗಳು ಬೇಕಾಗಿದೆ. ಮಹಿಳೆ,ಮಕ್ಕಳನ್ನು ಸ್ವಂತ ಲಾಭಕ್ಕಾಗಿ ವೇಶ್ಯಾವಾಟಿಕೆ ದಂಧೆಯಲ್ಲಿ ಬಳಸಲು ಹಾಗೂ ಬಾಲ ಕಾರ್ಮಿರನ್ನಾಗಿ ಮಾಡಲು ಇಂದು ಅಕ್ರಮ ಸಾಗಾಣಿಕೆ ಮಾಡುತ್ತಿದ್ದಾರೆ. ಇಂತಹ ಕೃತ್ಯಗಳನ್ನು ಕಂಡಂತವರು ಇಲಾಖೆಗಳಿಗೆ ತಿಳಿಸಬೇಕು ಎಂದು ಹೇಳಿದರು.
ಮಾನವ ಕಳ್ಳ ಸಾಗಾಣಿಕೆ ಕುರಿತು ಮಾತನಾಡಿದ ವೈ.ಪಿ. ಚಂದ್ರಕಲಾ, ನಮ್ಮ ಅಕ್ಕ ಪಕ್ಕದಲ್ಲಿರುವವರೇ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿರುವ ದಂಧೆ ಹೆಚ್ಚಾಗಿದೆ. ನಮ್ಮ ಬಗ್ಗೆ ನಮಗೆ ಗಮನವಿರಲಿ ಜತೆಗೆ ನಮ್ಮ ಸುತ್ತ ಮುತ್ತ ಇರುವ ಜನರ ವಿರುದ್ಧ ಎಚ್ಚರಿಕೆ ವಹಿಸಬೇಕು ಎಂದರು.
ಹೆಣ್ಣು ಮಕ್ಕಳನ್ನು ಯಾರಾದರೂ ಹಿಂಬಾಲಿಸಿದರೆ, ಅನುಚಿತವಾಗಿ ವರ್ತಿಸಿದರೆ ನಮಗೆ ಮಾಹಿತಿ ಕೊಡಿ ನಾವು ಕ್ರಮ ಕೈಗೊಳ್ಳುತ್ತೇವೆ. ಪೊಲೀಸ್ ಠಾಣೆ, ಪೊಲೀಸ್ ಕಂಟ್ರೋಲ್ ರೂಂ. ಪೋನ್ ನಂಬರ್ ನಿಮ್ಮ ಬಳಿ ಇಟ್ಟುಕೊಂಡು ಅದರ ಮಾಹಿತಿ ಪಡೆಯಿರಿ ಎಂದು ಮಾಹಿತಿ ಕೊಟ್ಟರು. ಮಾನವ ಕಳ್ಳ ಸಾಗಾಣಿಕೆ ಎಂದರೇನು? ಅದಕ್ಕೆ ಒಳಗಾಗುತ್ತಿರುವವರು ಯಾರು? ಅದರ ದುಷ್ಪರಿಣಾಮಗಳೇನು? ಅದನ್ನು ತಡೆಗಟ್ಟುವುದು ಹೇಗೆ ಎಂದೆಲ್ಲಾ ಮಾಹಿತಿ ಒಳಗೊಂಡ ವಿಡಿಯೋ ಪ್ರದರ್ಶನ ಮತ್ತು ಪವರ್ ಪಾಯಿಂಟ್ ಪ್ರಸೆಂಟೇಷನ್ ನಡೆಸಿ ಕೊಟ್ಟರು.
ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ಶಾರದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ. ಪ್ರಸಾದಮೂರ್ತಿ,ಉಪನ್ಯಾಸಕಿ ಬಿ. ರಾಧ ,ವಿ.ಡಿ. ಸುನೀತಾರಾಣಿ ಇದ್ದರು.
ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಮಾನವ ಕಳ್ಳ ಸಾಗಾಣಿಕೆ ನಿಷೇಧ ಘಟಕ, ಆರ್ಥಿಕ ಅಪರಾಧ ವಿಭಾಗ ಸಿಸಿಬಿ ಮೈಸೂರು ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 2016-17ನೇ ಸಾಲಿನ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ, ಗಂಡು ಹೆಣ್ಣುಗಳು ಎಂಬ ತಾರತಮ್ಯ ಮಾಡುತ್ತಿದ್ದು, ಇದನ್ನು ನಮ್ಮ ಮನೆಯ ಬೀದಿಗಳಿಂದಲೇ ವಿಚಾರ ಮಾಡುವ, ಪ್ರಶ್ನೆ ಮಾಡುವ ಮಾರ್ಗೋಪಾಯಗಳು ಬೇಕಾಗಿದೆ. ಮಹಿಳೆ,ಮಕ್ಕಳನ್ನು ಸ್ವಂತ ಲಾಭಕ್ಕಾಗಿ ವೇಶ್ಯಾವಾಟಿಕೆ ದಂಧೆಯಲ್ಲಿ ಬಳಸಲು ಹಾಗೂ ಬಾಲ ಕಾರ್ಮಿರನ್ನಾಗಿ ಮಾಡಲು ಇಂದು ಅಕ್ರಮ ಸಾಗಾಣಿಕೆ ಮಾಡುತ್ತಿದ್ದಾರೆ. ಇಂತಹ ಕೃತ್ಯಗಳನ್ನು ಕಂಡಂತವರು ಇಲಾಖೆಗಳಿಗೆ ತಿಳಿಸಬೇಕು ಎಂದು ಹೇಳಿದರು.
ಮಾನವ ಕಳ್ಳ ಸಾಗಾಣಿಕೆ ಕುರಿತು ಮಾತನಾಡಿದ ವೈ.ಪಿ. ಚಂದ್ರಕಲಾ, ನಮ್ಮ ಅಕ್ಕ ಪಕ್ಕದಲ್ಲಿರುವವರೇ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿರುವ ದಂಧೆ ಹೆಚ್ಚಾಗಿದೆ. ನಮ್ಮ ಬಗ್ಗೆ ನಮಗೆ ಗಮನವಿರಲಿ ಜತೆಗೆ ನಮ್ಮ ಸುತ್ತ ಮುತ್ತ ಇರುವ ಜನರ ವಿರುದ್ಧ ಎಚ್ಚರಿಕೆ ವಹಿಸಬೇಕು ಎಂದರು.
ಹೆಣ್ಣು ಮಕ್ಕಳನ್ನು ಯಾರಾದರೂ ಹಿಂಬಾಲಿಸಿದರೆ, ಅನುಚಿತವಾಗಿ ವರ್ತಿಸಿದರೆ ನಮಗೆ ಮಾಹಿತಿ ಕೊಡಿ ನಾವು ಕ್ರಮ ಕೈಗೊಳ್ಳುತ್ತೇವೆ. ಪೊಲೀಸ್ ಠಾಣೆ, ಪೊಲೀಸ್ ಕಂಟ್ರೋಲ್ ರೂಂ. ಪೋನ್ ನಂಬರ್ ನಿಮ್ಮ ಬಳಿ ಇಟ್ಟುಕೊಂಡು ಅದರ ಮಾಹಿತಿ ಪಡೆಯಿರಿ ಎಂದು ಮಾಹಿತಿ ಕೊಟ್ಟರು. ಮಾನವ ಕಳ್ಳ ಸಾಗಾಣಿಕೆ ಎಂದರೇನು? ಅದಕ್ಕೆ ಒಳಗಾಗುತ್ತಿರುವವರು ಯಾರು? ಅದರ ದುಷ್ಪರಿಣಾಮಗಳೇನು? ಅದನ್ನು ತಡೆಗಟ್ಟುವುದು ಹೇಗೆ ಎಂದೆಲ್ಲಾ ಮಾಹಿತಿ ಒಳಗೊಂಡ ವಿಡಿಯೋ ಪ್ರದರ್ಶನ ಮತ್ತು ಪವರ್ ಪಾಯಿಂಟ್ ಪ್ರಸೆಂಟೇಷನ್ ನಡೆಸಿ ಕೊಟ್ಟರು.
ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ಶಾರದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ. ಪ್ರಸಾದಮೂರ್ತಿ,ಉಪನ್ಯಾಸಕಿ ಬಿ. ರಾಧ ,ವಿ.ಡಿ. ಸುನೀತಾರಾಣಿ ಇದ್ದರು.