ಆ್ಯಪ್ನಗರ

ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ಜನಾಂದೋಲನ

ಭಾರತ ಸರಕಾರದ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2019 ಜನಾಂದೋಲನ ಕಾರ‍್ಯಕ್ರಮಕ್ಕೆ ತಾಲೂಕಿನ ಮೂರು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.

Vijaya Karnataka 11 Sep 2019, 5:00 am
ಕೃಷ್ಣರಾಜನಗರ:ಭಾರತ ಸರಕಾರದ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2019 ಜನಾಂದೋಲನ ಕಾರ‍್ಯಕ್ರಮಕ್ಕೆ ತಾಲೂಕಿನ ಮೂರು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.
Vijaya Karnataka Web kendrada svaccha sarveksana janandolana
ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ಜನಾಂದೋಲನ


ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ, ಭಾರತ ಸರಕಾರ ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ತಾಲೂಕಿನ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಯ ಬ್ಯಾಡರಹಳ್ಳಿ, ಹೊಸಕೋಟೆ ಗ್ರಾಮ ಪಂಚಾಯಿತಿಯ ಚಿಬುಕಹಳ್ಳಿ ಹಾಗೂ ಲಾಳಂದೇವನಹಳ್ಳಿ ಗ್ರಾಮ ಪಂಚಾಯಿತಿಯ ಲಾಳನಹಳ್ಳಿ ಗ್ರಾಮಗಳನ್ನು ಯೋಜನೆಯಲ್ಲಿಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ.

ನೈರ್ಮಲ್ಯ ಮೌಲ್ಯ ಮಾಪನ: ಆಯಾ ಗ್ರಾಮ ಪಂಚಾಯಿತಿಗಳಿಗೆ ಮಾಹಿತಿ ನೀಡಲಾಗಿದ್ದು, ಅಂತೆಯೇ ಯೋಜನೆಯ ನಿಯತಾಂಕಗಳಲ್ಲಿಗುಣಾತ್ಮಕ ಮತು ಪರಿಣಾಮಾತ್ಮಕವಾಗಿ ನೈರ್ಮಲ್ಯದ ಕಾರ್ಯಕ್ಷಮತೆ ಆಧಾರದ ಮೇಲೆ ಸಮಗ್ರ ಶುಚಿತ್ವವನ್ನು ಸಾಧಿಸಿದ ರಾಜ್ಯ, ಜಿಲ್ಲೆಗಳಿಗೆ ಕೇಂದ್ರ ಸರಕಾರ ಶ್ರೇಣಿಯನ್ನು ನೀಡಲಿದ್ದು, ಇದರಲ್ಲಿಆಯಾ ಗ್ರಾಮಗಳ ಯೋಜನೆಯ ಪ್ರಗತಿ ಮಾನದಂಡವಾಗಿದೆ. ಈ ಯೋಜನೆಯಲ್ಲಿಬೃಹತ್‌ ಪ್ರಮಾಣದಲ್ಲಿನಾಗರಿಕರು ಭಾಗವಹಿಸುವಂತೆ ಪ್ರೋತ್ಸಾಹಿಸುವುದು, ಸ್ವಚ್ಛತೆ, ಶುಚಿತ್ವ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಗ್ರಾಮೀಣ ಸಮುದಾಯದಲ್ಲಿಅರಿವು ಮೂಡಿಸುವುದು ಮತ್ತು ನೈರ್ಮಲ್ಯದ ಬಗ್ಗೆ ಮೌಲ್ಯಮಾಪನ ಮಾಡಿ ಜಿಲ್ಲೆಗಳಿಗೆ ಶ್ರೇಣಿಯನ್ನು ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.

ಹಂತ ಹಂತಕ್ಕೂ ಅಂಕ: ಆಯಾ ಗ್ರಾಮಗಳ ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯಕೇಂದ್ರ, ಸಂತೆ, ಬಸ್‌ನಿಲ್ದಾಣ, ಗ್ರಾಮ ಪಂಚಾಯಿತಿ ಆವರಣ ಮತ್ತು ಧಾರ್ಮಿಕ ಸ್ಥಳಗಳು ಸೇರಿದಂತೆ ಎಲ್ಲಾಸಾರ್ವಜನಿಕ ಸ್ಥಳಗಳಲ್ಲಿನ ಶುಚಿತ್ವ ಮತ್ತು ನೈರ್ಮಲ್ಯದ ಬಗ್ಗೆ ನೇರ ಪರಿವೀಕ್ಷಣೆ ನಡೆಯಲಿದ್ದು, ಇದಕ್ಕೆ ಶೇ.30 ಅಂಕಗಳಿರುತ್ತವೆ. ಪ್ರತಿ ಕುಟುಂಬ ಶೌಚಾಲಯ ಹೊಂದಿರುವ, ಬಳಸುತ್ತಿರುವ ಬಗ್ಗೆ ಪರಿಶೀಲನೆಗೆ ತಲಾ ಶೇ.5ರಷ್ಟು ಅಂಕ, ಸಾರ್ವಜನಿಕ ಸ್ಥಳಗಳಲ್ಲಿಪ್ಲಾಸ್ಟಿಕ್‌ ತ್ಯಾಜ್ಯದ ಸಮರ್ಪಕ ವಿಲೇವಾರಿ ಬಗ್ಗೆ ಪರಿಶೀಲನೆಗೆ ಶೇ.10, ಗ್ರಾಮದ ಬೀದಿಗಳಲ್ಲಿಹಾಗೂ ಸಾರ್ವಜನಿಕ ಸ್ಥಳಗಳಲ್ಲಿಕೊಳಚೆ ನೀರಿನ ನಿರ್ವಹಣೆ ಬಗ್ಗೆ ಪರಿಶೀಲನೆಗೆ ಶೇ.10ರಷ್ಟು ಅಂಕ ನೀಡಲಾಗುವುದು.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಮುದಾಯ ಶೌಚಾಲಯ ನಿರ್ಮಾಣ ಹಾಗೂ ನಿರ್ವಹಣೆ ಮಾಡಿರುವ ಬಗ್ಗೆ ಶೇ.10ರಷ್ಟು ಅಂಕ, ಗ್ರಾಮ ಪಂಚಾಯಿತಿಗಳು ಬಯಲು ಬಹಿರ್ದೆಸೆ ಮುಕ್ತವಾಗಿರುವ ಬಗ್ಗೆ ಎರಡನೇ ಹಂತದ ಪರಿಶೀಲನೆ ನಡೆದಿರುವ ಬಗ್ಗೆ ಪರಿಶೀಲನೆಗೆ ಶೇ.15ರಷ್ಟು ಅಂಕಗಳನ್ನು ನೀಡಲಾಗುತ್ತದೆ.

ಸರ್ವೇ ಮಾಡುವ ಸಂಸ್ಥೆಯು ನೇರವಾಗಿ ನಾಗರಿಕರನ್ನು ಭೇಟಿ ಮಾಡಿ ಅವರು ನೀಡುವ ಮಾಹಿತಿಯ ಆಧಾರದ ಮೇಲೆ ಅಂಕಿ ಅಂಶಗಳನ್ನು ಸಂಗ್ರಹಣೆ ಶೇ.35 ರಷ್ಟು ಅಂಕಗಳು ನೀಡಲಾಗುತ್ತದೆ. ಈ ಮೂಲಕ ಗ್ರಾಮಗಳ ಸ್ವಚ್ಛತೆಗೆ ಸರಕಾರ ಮುಂದಾಗಿದ್ದು ಪ್ರಾರಂಭಿಕವಾಗಿ ಈ ಮೂರು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.

ಜನಜಾಗೃತಿ ಇಮ್ಮಡಿಗೊಳಿಸುವ ಹಾಗೂ ಶುಚಿತ್ವಕ್ಕೆ ಪ್ರಾಶಸ್ತತ್ರ್ಯ ನೀಡುವ ಮೂಲಕ ರಾಷ್ಟ್ರಮಟ್ಟದಲ್ಲಿತಾಲೂಕಿನ ಗ್ರಾಮೀಣ ಪ್ರದೇಶ ಸ್ವಚ್ಛ ಗ್ರಾಮಗಳು ಎಂಬುದಕ್ಕೆ ಎಲ್ಲರೂ ಸಹಕರಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿಈಗಾಗಲೇ ರಚಿಸಿರುವ ವಾಟ್ಸ್‌ ಅಪ್‌ ಗ್ರೂಪ್‌ನಲ್ಲಿಹೆಚ್ಚಿನ ಸಂಖ್ಯೆಯಲ್ಲಿಸ್ವಚ್ಛ ಸರ್ವೇಕ್ಷಣಾ-2019 ಬಗ್ಗೆ ಪ್ರಚಾರಪಡಿಸುವ ಹಾಗೂ ಗ್ರಾಮೀಣ ಪ್ರದೇಶದ ನಾಗರಿಕರು ಟೋಲ್‌ ಫ್ರೀ ಸಂಖ್ಯೆ 18005720112ಗೆ ಕರೆ ಮಾಡಿ ಗ್ರಾಮದ ಸಮೀಕ್ಷೆಯ ಕುರಿತು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವಂತೆ ಜನರಲ್ಲಿಜಾಗೃತಿ ಮೂಡಿಸಲಾಗುತ್ತಿದೆ.

- ಗಿರೀಶ್‌ ತಾ.ಪಂ.ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣರಾಜನಗರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ