ಅನ್ನದಾತರಿಲ್ಲದೆ ನಾವಿಲ್ಲ, ಟ್ರ್ಯಾಕ್ಟರ್ ಜಾಥಾಗೆ ಕಾಂಗ್ರೆಸ್ ಬೆಂಬಲ: ಡಿಕೆ ಶಿವಕುಮಾರ್
'ಅನ್ನದಾತರಿಲ್ಲದೆ ನಾವ್ಯಾರೂ ಜೀವಿಸಲು ಸಾಧ್ಯವೇ ಇಲ್ಲ. ರಾಜ್ಯ ಸರ್ಕಾರ ಇದನ್ನು ತಿಳಿದುಕೊಳ್ಳಬೇಕು. ರೈತರಿಗೆ ಪ್ರತಿಭಟಿಸುವ ಹಕ್ಕಿದೆ. ಅವರ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವೂ ಇದೆ. ಸುಖಾಸುಮ್ಮನೆ ರೈತರನ್ನು ಹೆದರಿಸಿ ಅವರ ಬಾಯಿ ಮುಚ್ಚಿಸಬಾರದು.' - ಡಿಕೆಶಿ ಆಗ್ರಹ
Lipi 25 Jan 2021, 5:45 pm
ಹೈಲೈಟ್ಸ್:
- ಪೊಲೀಸರೇ ನೀವು ಸರ್ಕಾರದ ಕೈಗೊಂಬೆಯಾಬೇಡಿ
- ಮಂಗಳವಾರ ರಜೆಯಿದ್ದು, ಟ್ರಾಫಿಕ್ ಸಮಸ್ಯೆಯಾಗುವುದಿಲ್ಲ
- ಹೋರಾಟಕ್ಕೆ ಎಲ್ಲರೂ ಬೆಂಬಲಿಸಿ: ಡಿಕೆಶಿ ಮನವಿ
ಮೈಸೂರು: ಮಂಗಳವಾರ ಬೆಂಗಳೂರಿನಲ್ಲಿ ರೈತರು ನಡೆಸಲು ಮುಂದಾಗಿರುವ ಟ್ರ್ಯಾಕ್ಟರ್ ಜಾಥಾಗೆ ಪೊಲೀಸರು ಅಡ್ಡಬಂದರೆ, ನಾವು ರೈತರ ಬೆಂಬಲವಾಗಿ ನಿಲ್ಲಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಟ್ರ್ಯಾಕ್ಟರ್ ಜಾಥಾ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣರಾಜ್ಯೋತ್ಸವದ ದಿನ ರೈತರು ನಡೆಸುತ್ತಿರುವ ಜಾಥಾಗೆ ನಮ್ಮ ಬೆಂಬಲವಿದೆ. ಒಂದು ವೇಳೆ ಜಾಥಾ ತೆರಳುವ ಟ್ರ್ಯಾಕ್ಟರ್ಗಳನ್ನು ಪೊಲೀಸರು ಜಪ್ತಿ ಮಾಡಿದರೆ ಅದನ್ನು ಬಿಡಿಸಿಕೊಳ್ಳಲು ನಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.
ಅನ್ನದಾತರಿಲ್ಲದೆ ನಾವ್ಯಾರೂ ಜೀವಿಸಲು ಸಾಧ್ಯವೇ ಇಲ್ಲ. ರಾಜ್ಯ ಸರ್ಕಾರ ಇದನ್ನು ತಿಳಿದುಕೊಳ್ಳಬೇಕು. ರೈತರಿಗೆ ಪ್ರತಿಭಟಿಸುವ ಹಕ್ಕಿದೆ. ಅವರ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವೂ ಇದೆ. ಸುಖಾಸುಮ್ಮನೆ ರೈತರನ್ನು ಹೆದರಿಸಿ ಅವರ ಬಾಯಿ ಮುಚ್ಚಿಸಬಾರದು. ಹಾಗೊಂದು ವೇಳೆ ಅವರನ್ನು ಹೆದರಿಸಿದರೆ, ನಾವು ರೈತರ ಬೆಂಬಲಕ್ಕೆ ನಿಲ್ಲುತ್ತೇವೆ. ಬಂಧಿಸಿದರೆ ಜೈಲ್ ಭರೋ ಚಳವಳಿ ಮಾಡಲು ಸಹ ನಾವು ಹೆದರುವುದಿಲ್ಲ ಎಂದು ಡಿಕೆಶಿ ಎಚ್ಚರಿಸಿದರು.
ಪೊಲೀಸರೇ ನೀವು ಸರ್ಕಾರದ ಕೈಗೊಂಬೆಯಾಬೇಡಿ ಎಂದು ಆಗ್ರಹಿಸಿದ ಡಿಕೆಶಿ, ಎಲ್ಲರಿಗೂ ಒಂದೇ ನ್ಯಾಯ ಎಂದರು. ಮಂಗಳವಾರ ರಜೆಯಿದ್ದು, ಟ್ರಾಫಿಕ್ ಸಮಸ್ಯೆಯಾಗುವುದಿಲ್ಲ. ಹೀಗಾಗಿ, ಹೋರಾಟಕ್ಕೆ ಎಲ್ಲರೂ ಬೆಂಬಲಿಸಿ ಎಂದು ಡಿಕೆಶಿ ಮನವಿ ಮಾಡಿದರು.
ಅನ್ನದಾತರಿಲ್ಲದೆ ನಾವ್ಯಾರೂ ಜೀವಿಸಲು ಸಾಧ್ಯವೇ ಇಲ್ಲ. ರಾಜ್ಯ ಸರ್ಕಾರ ಇದನ್ನು ತಿಳಿದುಕೊಳ್ಳಬೇಕು. ರೈತರಿಗೆ ಪ್ರತಿಭಟಿಸುವ ಹಕ್ಕಿದೆ. ಅವರ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವೂ ಇದೆ. ಸುಖಾಸುಮ್ಮನೆ ರೈತರನ್ನು ಹೆದರಿಸಿ ಅವರ ಬಾಯಿ ಮುಚ್ಚಿಸಬಾರದು. ಹಾಗೊಂದು ವೇಳೆ ಅವರನ್ನು ಹೆದರಿಸಿದರೆ, ನಾವು ರೈತರ ಬೆಂಬಲಕ್ಕೆ ನಿಲ್ಲುತ್ತೇವೆ. ಬಂಧಿಸಿದರೆ ಜೈಲ್ ಭರೋ ಚಳವಳಿ ಮಾಡಲು ಸಹ ನಾವು ಹೆದರುವುದಿಲ್ಲ ಎಂದು ಡಿಕೆಶಿ ಎಚ್ಚರಿಸಿದರು.
ಪೊಲೀಸರೇ ನೀವು ಸರ್ಕಾರದ ಕೈಗೊಂಬೆಯಾಬೇಡಿ ಎಂದು ಆಗ್ರಹಿಸಿದ ಡಿಕೆಶಿ, ಎಲ್ಲರಿಗೂ ಒಂದೇ ನ್ಯಾಯ ಎಂದರು. ಮಂಗಳವಾರ ರಜೆಯಿದ್ದು, ಟ್ರಾಫಿಕ್ ಸಮಸ್ಯೆಯಾಗುವುದಿಲ್ಲ. ಹೀಗಾಗಿ, ಹೋರಾಟಕ್ಕೆ ಎಲ್ಲರೂ ಬೆಂಬಲಿಸಿ ಎಂದು ಡಿಕೆಶಿ ಮನವಿ ಮಾಡಿದರು.