ಆ್ಯಪ್ನಗರ

Santro Ravi Case | ವಿಗ್‌ ತೆಗೆದು ಓಡಾಡಿದ, ಖಾಕಿಗೆ ಸುಳಿವು ಕೊಟ್ಟ ಮಾರ್ಕ್: ಸ್ಯಾಂಟ್ರೋ ರವಿ ಪತ್ತೆಯ ಹಿಂದೆ...

Story of Santro Ravi and Police chase: ಕರ್ನಾಟಕ ಸರಕಾರಕ್ಕೆ ತಲೆ ನೋವಾಗಿ ಪರಿಣಮಿಸಿದ್ದ ಸ್ಯಾಂಟ್ರೋ ರವಿ ಪ್ರಕರಣವನ್ನು ಪೊಲೀಸರು ಒಂದು ಹಂತಕ್ಕೆ ತಂದಿದ್ದಾರೆ. ಹನ್ನೊಂದು ದಿನ ನಿರಂತರ ಹುಡುಕಾಟದಲ್ಲಿದ್ದ ಪೊಲೀಸರಿಗೆ ರಾಜ್ಯ ರಾಜಧಾನಿಯಿಂದ ಸಾವಿರಕ್ಕೂ ಅಧಿಕ ಕಿಲೋ ಮೀಟರ್‌ ದೂರದ ಅಹಮದಾಬಾದ್‌ನಲ್ಲಿ ಆರೋಪಿಯ ಸುಳಿವು ಪತ್ತೆಯಾಗಿತ್ತು. ಹಿಂದಿ ಭಾಷೆಯಲ್ಲಿ ಮಾತನಾಡುವ ಬೊಕ್ಕ ತಲೆಯ ವ್ಯಕ್ತಿಯೊಬ್ಬನನ್ನು ಗುಜರಾತ್‌ ಪೊಲೀಸರ ನೆರವಿನೊಂದಿಗೆ ವಶಕ್ಕೆ ಪಡೆಯಲಾಯಿತು. ಆದರೆ, ಆತನೇ ಆರೋಪಿ ಎಂಬುದನ್ನು ಖಚಿತ ಪಡಿಸಿದ್ದು, ಆತನ ಹಳೆಯ ಫೋಟೋ.

Edited byಹೇಮಂತ್ ಕುಮಾರ್ ಎಸ್ | Lipi 15 Jan 2023, 5:24 pm

ಹೈಲೈಟ್ಸ್‌:

  • ಒಂದು ಕಡೆ ನಿಲ್ಲದೆ ಜಾಗ ಬದಲಿಸುತ್ತಿದ್ದ ಆರೋಪಿ
  • ಮೊಬೈಲ್‌ ಫೋನ್‌, ಸಿಮ್‌ ಜೊತೆಗೆ ತನ್ನ ಚಹರೆಯನ್ನೂ ಬದಲಿಸಿಕೊಂಡಿದ್ದ ಸ್ಯಾಂಟ್ರೋ ರವಿ
  • ಪೊಲೀಸರಿಂದ ಸತತ ಹನ್ನೊಂದು ದಿನ ತಲೆ ಮರೆಸಿಕೊಂಡಿದ್ದ
  • ಗುಜರಾತ್‌ನಲ್ಲಿ ಪೊಲೀಸರಿಗೆ ಸಿಕ್ಕರೂ, ಖಚಿತ ಪಡಿಸಿಕೊಳ್ಳಲು ಸಮಯ ಬೇಕಾಯಿತು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Santro Ravi face mark
ಸ್ಯಾಂಟ್ರೋ ರವಿ ಬಂಧನದ ವೇಳೆ ತೆಗೆದ ಚಿತ್ರ ಮತ್ತು ಆತನ ಹಳೆಯ ಚಿತ್ರ

ಮೈಸೂರು: ವಿವಿಧ ಅಪರಾಧ ಪ್ರಕರಣಗಳ ಮೇಲೆ ಇತ್ತೀಚೆಗಷ್ಟೇ ಪೊಲೀಸರ ಬಲೆಗೆ ಬಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವ ಸ್ಯಾಂಟ್ರೋ ರವಿ ವಿಚಾರ ಬಗೆದಷ್ಟು ವಿಸ್ತರಿಸುತ್ತಿದೆ. ಗುಜರಾತ್‌ನಲ್ಲಿ ಆತನನ್ನು ಸೆರೆ ಹಿಡಿದ ಪೋಲಿಸರಿಗೆ ಆತ ಹೇಗೆ ಯಾಮಾರಿಸಲು ಪ್ರಯತ್ನ ಮಾಡಿದ್ದ ಅನ್ನುವ ಅಂಶ ಬಹಿರಂಗವಾಗಿದೆ.
ಸಿನಿಮೀಯ ಶೈಲಿಯಲ್ಲಿ ಪೊಲೀಸರು ಸ್ಯಾಂಟ್ರೋ ರವಿಯನ್ನು ಚೇಸ್ ಮಾಡಿದ್ದರು. ಗುಜರಾತ್‌ನಲ್ಲಿ ಪೊಲೀಸರ ಕೈಗೆ ತಗ್ಲಾಕೊಂಡ ವೇಳೆ ನಾಟಕವಾಡಿದ್ದ ರವಿ ಹಿಂದಿ ಭಾಷೆಯಲ್ಲಿ ಮಾತಾಡಿದ್ದ. ಪೊಲೀಸರಿಗೆ ಯಾವುದೇ ಅನುಮಾನ ಬಾರದ ರೀತಿ ಚಾಣಾಕ್ಷನ ರೀತಿ ವರ್ತಿಸಿದ್ದ. ಅವನ ವರ್ತನೆ ಪೊಲೀಸ್‌ ತಂಡಕ್ಕೂ ಗಲಿಬಿಲಿ ತಂದಿತ್ತು. ಆದರೆ, ಆತನ ಹಣೆಯಲ್ಲಿದ್ದ 'ಗುರುತು' ಮಾರ್ಕ್ ಅವನೇ ಸ್ಯಾಂಟ್ರೋ ರವಿ ಎಂಬುದನ್ನು ಪೊಲೀಸರಿಗೆ ಖಚಿತಪಡಿಸಿತ್ತು. ಸೆರೆಹಿಡಿಯುವಲ್ಲಿ ಪೊಲೀಸರಿಗೆ ನೆರವಾಗಿದ್ದೆ ಆತನ ಹಳೆಯ ಫೋಟೋದಲ್ಲಿದ್ದ ಕಂಡಿದ್ದ 'ಮಾರ್ಕ್‌'.
Santro Ravi Arrest: ಸ್ಯಾಂಟ್ರೋ ರವಿ ಬಂಧನ ಕಾರ್ಯಾಚರಣೆಯೇ ರೋಚಕ! ಪೊಲೀಸರಿಗೆ ಸಿಕ್ಕಿದ್ದ ಸುಳಿವೇನು?
ಮಾಸದ ಗಾಯದ ಗುರುತು:

ಹಿಂದಿಯಲ್ಲಿ ಮಾತನಾಡಿ ಪೊಲೀಸರಿಗೆ ಮತ್ತೊಮ್ಮೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿಯನ್ನು ಪತ್ತೆ ಮಾಡಲು ಆತನ ಹಣೆಯ ಮೇಲಿದ್ದ ಹಳೆಯ ಗಾಯದ ಗುರುತು ನೆರವಾಗಿದೆ. ಕರ್ನಾಟಕದಿಂದ ಆಚೆಗೆ ಆತ ಓಡಾಟ ನಡೆಸಿರುವ ಸುಳಿವು ಆಧರಿಸಿ, ಇತರೆ ರಾಜ್ಯಗಳ ಪೊಲೀಸರಿಗೂ ಆರೋಪಿಯ ಪತ್ತೆಗಾಗಿ ಮಾಹಿತಿ ರವಾನಿಸಲಾಗಿತ್ತು. ಫೋಟೋ ಹಿಡಿದುಕೊಂಡು ಹೊರಟ ಪೊಲೀಸರು, ತಮ್ಮ ಮುಂದೆಯೇ ಇದ್ದ ಶಂಕಿತ ವ್ಯಕ್ತಿಯ ಮುಖ ಚರ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು.
Santro Ravi: ಯಾರೀತ ಸ್ಯಾಂಟ್ರೋ ರವಿ? ಈತನ ಹಿನ್ನೆಲೆ ಇಲ್ಲಿದೆ!
ಸ್ಯಾಂಟ್ರೋ ರವಿ ಹಣೆಯ ಎಡ ಭಾಗದಲ್ಲಿದ್ದ ಗಾಯದ ಗುರುತು ಪ್ರಮುಖ ಸುಳಿವು ನೀಡಿತ್ತು. 20 ವರ್ಷದ ಹಿಂದಿನ ಫೋಟೋ ಹಾಗೂ ತಲೆಗೆ ವಿಗ್ ಹಾಕಿದಾಗ ತೆಗಿದಿರೋ ಫೋಟೋ ಹಾಗೂ ಪೊಲೀಸರು ವಶಕ್ಕೆ ಪಡೆದ ಬಳಿಕ ತೆಗೆದಿರುವ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಂತೆ ಆತನೇ ಹುಡುಕುತ್ತಿದ್ದ ಆರೋಪಿ ಎಂಬುದು ಖಚಿತವಾಗಿದೆ. ಗುಜರಾತ್‌ನಲ್ಲಿ ಪೊಲೀಸರಿಗೆ ಮೊದಲು ಈತನೇ ಸ್ಯಾಂಟ್ರೋ ರವಿ ಅನ್ನೋ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

ಕಾಮನ್‌ ಮ್ಯಾನ್‌ ಆದ, ವಿಗ್‌ ತೆಗೆದ!

ಬೊಂಬಾಟಾಗಿ ಹಲವು ಕಡೆ ಫೋಟೋಗೆ ಪೋಸ್ ಕೊಟ್ಟಿರೋ ಸ್ಯಾಂಟ್ರೋ ರವಿ, ಯಾವಾಗ ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬ ಆತಂಕ ಆರಂಭವಾಯಿತೋ ಆಗ ಧರಿಸಿದ್ದ ವಿಗ್ ತೆಗೆದಿದ್ದ. ಹಾಗೆಯೇ ಮೀಸೆ ಸಹ ತೆಗೆದಿದ್ದ. ಅಲ್ಲದೇ ತೀರಾ ಸಾಮಾನ್ಯ ವ್ಯಕ್ತಿ ಧರಿಸುವ ಬಟ್ಟೆಗಳಲ್ಲಿ ಓಡಾಡಿದ್ದ. ಜೀವನ ಶೈಲಿಯನ್ನು ಬದಲಿಸಿಕೊಂಡು, ಯಾರಿಗೂ ಅನುಮಾನ ಬಾರದ ರೀತಿ ಹಿಂದಿ ಭಾಷೆಯನ್ನಷ್ಟೇ ಮಾತಾಡುತ್ತಿದ್ದ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
Santro Ravi Arrest | ಸ್ಯಾಂಟ್ರೋ ರವಿ ತಪ್ಪಿತಸ್ಥನಾಗಿದ್ದರೆ ಸೂಕ್ತ ಕಾನೂನು ಕ್ರಮ: ಆರಗ ಜ್ಞಾನೇಂದ್ರ
ನ್ಯಾಯಾಂಗ ಬಂಧನ..

ಸದ್ಯ ಸ್ಯಾಂಟ್ರೋ ರವಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳನ್ನು 6ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಎರಡನೇ ಶನಿವಾರ ನ್ಯಾಯಾಲಯದ ಕಲಾಪ ಇಲ್ಲದ ಕಾರಣ ನ್ಯಾಯಾಧೀಶರ ನಿವಾಸಕ್ಕೆ ಕರೆದುಕೊಂಡು ಹೋಗಿ ಹಾಜರು ಪಡಿಸಲಾಗಿತ್ತು. ಬಿಗಿ ಭದ್ರತೆಯಲ್ಲಿ ಪೊಲೀಸರು ವಾಲ್ಮೀಕಿ ನಗರದ ರಸ್ತೆಯಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಆರೋಪಿಗಳನ್ನು ಕರೆತಂದಿದ್ದರು. ನ್ಯಾಯಾಧೀಶರು ಎಲ್ಲ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಲೇಖಕರ ಬಗ್ಗೆ
ಹೇಮಂತ್ ಕುಮಾರ್ ಎಸ್
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ 2022ರಿಂದ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಮಾಧ್ಯಮ ರಂಗಕ್ಕೆ ಅಧಿಕೃತ ಪ್ರವೇಶ ಆಗಿದ್ದು 2011ರಲ್ಲಿ ನ್ಯೂಸ್ ಚಾನೆಲ್ ಮೂಲಕ. ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಬರಹದ ನಂಟು ಬೆಳೆಸಿಕೊಂಡಿದ್ದರು. ಸಿನಿಮಾ, ಕ್ರೈಂ, ರಾಜಕೀಯ, ಮೆಟ್ರೊ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ, ರಾಷ್ಟ್ರ-ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ. ಟಿವಿ, ಪತ್ರಿಕೆ, ಡಿಜಿಟಲ್‌/ ವೆಬ್‌, ಕೆಲ ಸಮಯ ರೇಡಿಯೊ ಚಾನೆಲ್‌ನಲ್ಲೂ ತೊಡಗಿಸಿಕೊಂಡ ಅನುಭವಿರುವ ಇವರ ಮಂತ್ರ 'ಬದುಕು ನಿರಂತರ'. ಚಾರಣ, ರಂಗಭೂಮಿ, ಪ್ರವಾಸ, ಓದು,...ಹೀಗೆ ಒಂದಷ್ಟು ಅಭ್ಯಾಸ-ಹವ್ಯಾಸಗಳು ಜೊತೆಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ