ಆ್ಯಪ್ನಗರ

ಕರಾಮುವಿವಿ ಸಭೆ ರದ್ದು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮಂಜೂರಾತಿ ಹುದ್ದೆಗಳು ಖಾಲಿ ಇಲ್ಲದಿದ್ದರೂ ಅನಧಿಕೃತವಾಗಿ 22 ಹುದ್ದೆಗಳನ್ನು ಸೃಜಿಸುವುದಲ್ಲದೆ ಆ ಹುದ್ದೆಗೆ ಅನರ್ಹರನ್ನು ನೇಮಕ ಮಾಡಿರುವ ವಿಚಾರದ ಬಗ್ಗೆ ಚರ್ಚಿಸಲು ಶನಿವಾರ ಕರೆಯಲಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿ ವ್ಯವಸ್ಥಾಪನ ಮಂಡಳಿ ಸಭೆ ರದ್ದಾಗಿದೆ.

Vijaya Karnataka 22 Jul 2018, 5:00 am
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮಂಜೂರಾತಿ ಹುದ್ದೆಗಳು ಖಾಲಿ ಇಲ್ಲದಿದ್ದರೂ ಅನಧಿಕೃತವಾಗಿ 22 ಹುದ್ದೆಗಳನ್ನು ಸೃಜಿಸುವುದಲ್ಲದೆ ಆ ಹುದ್ದೆಗೆ ಅನರ್ಹರನ್ನು ನೇಮಕ ಮಾಡಿರುವ ವಿಚಾರದ ಬಗ್ಗೆ ಚರ್ಚಿಸಲು ಶನಿವಾರ ಕರೆಯಲಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿ ವ್ಯವಸ್ಥಾಪನ ಮಂಡಳಿ ಸಭೆ ರದ್ದಾಗಿದೆ.
Vijaya Karnataka Web ksou meeting cancel
ಕರಾಮುವಿವಿ ಸಭೆ ರದ್ದು


ಉನ್ನತ ಶಿಕ್ಷಣ ಇಲಾಖೆ ಆಡಳಿತಕ್ಕೆ ಒಳಪಟ್ಟಿರುವ ವಿಶ್ವವಿದ್ಯಾನಿಲಯಗಳ ಕಾರ್ಯಕಾರಿ ಸಮಿತಿ, ಪರಿಷತ್‌ ಹಾಗೂ ಆಡಳಿತ ಮಂಡಳಿಗೆ ಆಯಾ ವಿವಿಗಳ ಅಧಿನಿಯಮಗಳಲ್ಲಿನ ಅವಕಾಶದನ್ವಯ ಸರಕಾರದಿಂದ ನಾಮ ನಿರ್ದೇಶನಗೊಂಡಿರುವ ಸದಸ್ಯರನ್ನು ರಾಜ್ಯ ಸರಕಾರ ಜು. 17 ರಂದು ಹಿಂಪಡೆದಿದೆ. ಹಾಗಾಗಿ ಶನಿವಾರ ನಡೆಯಬೇಕಿದ್ದ ಸಭೆಗೆ ಸದಸ್ಯರ ಕೋರಂ ಕೊರತೆ ಉಂಟಾದ ಕಾರಣ ಸಭೆಯನ್ನು ರದ್ದುಪಡಿಸಲಾಗಿದೆ.

ಸಭೆಯಲ್ಲಿ ಕರಾಮುವಿವಿಲ್ಲಿ ನಿಯಮ ಬಾಹಿರವಾಗಿ 22 ಮಂದಿ ಉಪನ್ಯಾಸಕರನ್ನು ನೇಮಕ ಮಾಡಿರುವ ವಿಚಾರವನ್ನು ಚರ್ಚಿಸಬೇಕಿತ್ತು. ಸಭೆ ರದ್ದಾದ ಕಾರಣ ಈ ವಿಚಾರದ ಬಗ್ಗೆ ಚರ್ಚೆಯು ಮತ್ತಷ್ಟು ವಿಳಂಬವಾಗಲಿದೆ. ಸರಕಾರ ಇದೀಗ ಹಿಂಪಡೆದಿರುವ ನಾಮನಿರ್ದೇಶಿತರ ಜಾಗಕ್ಕೆ ಬೇರೆಯವರನ್ನು ನೇಮಕ ಮಾಡುವ ವರೆಗೆ ಈ ವಿಷಯದ ಬಗ್ಗೆ ಚರ್ಚಿಸಲು ಸಾಧ್ಯವಾಗದ ಸನ್ನಿವೇಶ ನಿರ್ಮಾಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ