ಆ್ಯಪ್ನಗರ

'ಸೀತಾರಾಮ ಕಲ್ಯಾಣ' ಚಿತ್ರ ನೋಡಲು ರಜೆ ಕೇಳಿದ KSRTC ನಿರ್ವಾಹಕ

ಚಿತ್ರದ ನಾಯಕರು ಕರ್ನಾಟಕ ರಾಜ್ಯದ 'ಹೆಮ್ಮೆಯ ಜಯಪ್ರಿಯ ಮುಖ್ಯಮಂತ್ರಿ' ಕುಮಾರ್ ಅಣ್ಣರವರ ಮಗ ಆಗಿರುತ್ತಾರೆ. ಹಾಗು ನಮ್ಮ ಜಿಲ್ಲೆ ಹಾಸನದವರಾಗಿರುತ್ತಾರೆ. ಹಾಗಾಗಿ ನಾನು 'ಸೀತಾರಾಮ ಕಲ್ಯಾಣ' ಚಲನಚಿತ್ರವನ್ನು ನೋಡಲು ದಿ.26-01-2019ರಂದು ಹೋಗಬೇಕಾಗಿರುತ್ತದೆ.

Vijaya Karnataka Web 26 Jan 2019, 3:25 pm
ಬೆಂಗಳೂರು: ಕೆಎಸ್‌ಆರ್‌ಟಿಸಿ ನಿರ್ವಾಹಕರೊಬ್ಬರು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರವರ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ನೋಡಲು ರಜೆ ಕೋರಿ ಬರೆದ ಪತ್ರ ವೈರಲ್ ಆಗಿದೆ.
Vijaya Karnataka Web latter


ಮೈಸೂರು ಕೆಎಸ್‌ಆರ್‌ಟಿಸಿ ಘಟಕದ ಚಾಲಕ ಕಂ ನಿರ್ವಾಹಕರಾಗಿರುವ ರಾಜೇಶ.ಎಂ.ಜೆ ಎಂಬವರೇ ಸಿನಿಮಾ ನೋಡಲು ರಜೆ ಕೋರಿ ಪತ್ರ ಬರೆದವರು.

'ಸೀತಾರಾಮ ಕಲ್ಯಾಣ ಚಲನಚಿತ್ರ ದಿ.25-01-2019ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದ್ದು, ಈ ಚಲನಚಿತ್ರವು ಕುಟುಂಬ ಸಮೇತ ನೋಡುವಂತಹ ಒಳ್ಳೆಯ ಚಲನಚಿತ್ರವಾಗಿರುತ್ತದೆ. ಹಾಗೂ ಚಿತ್ರದ ನಾಯಕರು ಕರ್ನಾಟಕ ರಾಜ್ಯದ 'ಹೆಮ್ಮೆಯ ಜಯಪ್ರಿಯ ಮುಖ್ಯಮಂತ್ರಿ' ಕುಮಾರ್ ಅಣ್ಣರವರ ಮಗ ಆಗಿರುತ್ತಾರೆ. ಹಾಗು ನಮ್ಮ ಜಿಲ್ಲೆ ಹಾಸನದವರಾಗಿರುತ್ತಾರೆ. ಹಾಗಾಗಿ ನಾನು 'ಸೀತಾರಾಮ ಕಲ್ಯಾಣ' ಚಲನಚಿತ್ರವನ್ನು ನೋಡಲು ದಿ.26-01-2019ರಂದು ಹೋಗಬೇಕಾಗಿರುತ್ತದೆ. ಹಾಗಾಗಿ ನನ್ನ ಕರ್ತವ್ಯಕ್ಕೆ ರಜೆ ನೀಡಬೇಕಾಗಿ ತಮ್ಮಲ್ಲಿ ಸವಿನಯ ಪ್ರಾರ್ಥನೆ' ಎಂದು ಕೆಎಸ್‌ಆರ್‌ಟಿಸಿ ಮೈಸೂರು ಘಟಕದ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.


'ಸೀತಾರಾಮ ಕಲ್ಯಾಣ' ಚಿತ್ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ