ಆ್ಯಪ್ನಗರ

ವಿಮಾನ ಪ್ರಯಾಣಿಕರೇ ಗಮನಿಸಿ..! ಮೈಸೂರು ಏರ್‌ಪೋರ್ಟ್‌ಗೆ ನಗರ ಬಸ್‌ ನಿಲ್ದಾಣದಿಂದ ವೋಲ್ವೋ ಬಸ್‌

ಮೈಸೂರು ವಿಮಾನ ನಿಲ್ದಾಣಕ್ಕೆ ನಗರ ಬಸ್‌ ನಿಲ್ದಾಣದಿಂದ ವೋಲ್ವೋ ಬಸ್‌ ಸಂಚಾರವನ್ನು ಕೆಎಸ್‌ಆರ್‌ಟಿಸಿ ಆರಂಭಿಸಿದೆ. ಜೊತೆಗೆ ದರವನ್ನು ಕೂಡ ನಿಗದಿ ಮಾಡಿ ಆದೇಶ ಹೊರಡಿಸಿದೆ. ವಿಮಾನಗಳ ಆಗಮನ, ನಿರ್ಗಮನ ವೇಳಾಪಟ್ಟಿಯಂತಡ ವೋಲ್ವೋ ಬಸ್‌ಗಳ ಸಂಚಾರ ಇರಲಿದೆ.

Vijaya Karnataka Web 14 Dec 2020, 5:31 pm
ಮೈಸೂರು: ಸಂಸದ ಪ್ರತಾಪ್ ಸಿಂಹ ಮನವಿಯ ಬಳಿಕ ಕೆಎಸ್‌ಆರ್‌ಟಿಸಿ ನಗರ ಬಸ್‌ ನಿಲ್ದಾಣದಿಂದ ಮಂಡಕಲ್ಲಿಯ ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್‌ಗಳ ಸಂಚಾರವನ್ನು ಆರಂಭಿಸಿದೆ. ವಿಮಾನಗಳ ಆಗಮನ ಮತ್ತು ನಿರ್ಗಮನ ವೇಳಾಪಟ್ಟಿಯಂತೆ ವೋಲ್ವೋ ಬಸ್‌ಗಳ ಸಂಚಾರ ಇರಲಿದೆ.
Vijaya Karnataka Web Mysuru airport
ಸಂಗ್ರಹ ಚಿತ್ರ


ನಗರದಿಂದ ವಿಮಾನ ನಿಲ್ದಾಣಕ್ಕೆ ಅನುಕೂಲಕರ ಬಸ್ ಸೇವೆ ಇರದ ಕಾರಣ ಟ್ಯಾಕ್ಸಿ ಚಾಲಕರು ಪ್ರಯಾಣಿಕರಿಂದ ಹೆಚ್ಚಿನ ದರ ಪಡೆಯುತ್ತಿರುವ ದೂರುಗಳು ಕೇಳಿಬಂದಿದ್ದವು. ಅದಲ್ಲದೇ ಶುಕ್ರವಾರದಿಂದ ಮೈಸೂರು-ಮಂಗಳೂರು ವಿಮಾನ ಸೇವೆ ಶುರುವಾಗಿದ್ದು, ನಗರದಿಂದ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಬಸ್‌ಗಳನ್ನು ಬಿಡಲು ಹಾಗೂ ವೇಳಾಪಟ್ಟಿಯನ್ನು ಪರಿಷ್ಕರಿಸಲು ಸಂಸದ ಪ್ರತಾಪ್‌ ಸಿಂಹ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ಹೊಸ ವೇಳಾಪಟ್ಟಿಯಂತೆ, ವೋಲ್ವೋ ಬಸ್ ನಗರ ಬಸ್‌ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 6.15, ಬೆಳಗ್ಗೆ 9.05, ಮಧ್ಯಾಹ್ನ 12, ಮಧ್ಯಾಹ್ನ 1.45, ಮಧ್ಯಾಹ್ನ 2.35, ಮಧ್ಯಾಹ್ನ 3.15 ಮತ್ತು ಸಂಜೆ 5.50ಕ್ಕೆ ಹೊರಡಲಿದೆ. ವಿಮಾನ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 6.50, ಬೆಳಗ್ಗೆ 9.40, ಮಧ್ಯಾಹ್ನ 12.35, ಮಧ್ಯಾಹ್ನ 2.20, ಮಧ್ಯಾಹ್ನ 3.10, ಮಧ್ಯಾಹ್ನ 3.40 ಮತ್ತು 6.25ಕ್ಕೆ ವೋಲ್ವೋ ಬಸ್‌ ಹೊರಡಲಿದೆ.

ನಗರ ಬಸ್‌ ನಿಲ್ದಾಣದಿಂದ ಪ್ರಾರಂಭವಾಗುವ ಈ ಬಸ್‌, ಸಬ್ ಅರ್ಬನ್ ಬಸ್ ನಿಲ್ದಾಣ, ಜೆಪಿ ಪ್ಯಾಲೇಸ್ ಹೋಟೆಲ್, ಶುಂಠಿ ಹೋಟೆಲ್, ರಾಡಿಸನ್ ಬ್ಲೂ ಹೋಟೆಲ್ ಮತ್ತು ನಂಜನಗೂಡು ರಸ್ತೆಯ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಮಾರ್ಗವಾಗಿ ಮಂಡಕಲ್ಲಿಯ ವಿಮಾನ ನಿಲ್ದಾಣ ತಲುಪಲಿದೆ.

ಮಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಆರಂಭ, ಬಜಪೆಗೆ ಬಂದಿಳಿದ ಮೊದಲ ವಿಮಾನ

ವಿಮಾನ ನಿಲ್ದಾಣದಿಂದ ಶ್ರೀ ಗಣಪತಿ ಆಶ್ರಮಕ್ಕೆ ತಲಾ ಒಬ್ಬರಿಗೆ 70 ರೂ. ಟಿಕೆಟ್‌ ದರ ನಿಗದಿಪಡಿಸಿದ್ದರೆ, ರಾಡಿಸನ್ ಬ್ಲೂ ಹೋಟೆಲ್‌ಗೆ 70 ರೂ., ಶುಂಠಿ ಹೋಟೆಲ್‌ಗೆ 80 ರೂ., ಜೆಪಿ ಪ್ಯಾಲೇಸ್ ಹೋಟೆಲ್‌ಗೆ 80 ರೂ., ಕೆಎಸ್‌ಆರ್‌ಟಿಸಿ ಉಪ ನಗರ ಬಸ್ ನಿಲ್ದಾಣಕ್ಕೆ 100 ರೂ. ಮತ್ತು ಸಿಟಿ ಬಸ್ ನಿಲ್ದಾಣಕ್ಕೆ 100 ರೂ. ನಿಗದಿಪಡಿಸಲಾಗಿದೆ.

ನಿವಾರ್‌ ಸೈಕ್ಲೋನ್‌: ಮೈಸೂರು-ತಮಿಳುನಾಡು ಸಾರಿಗೆಯಲ್ಲಿ ಸದ್ಯಕ್ಕೆ ಯಾವುದೇ ವ್ಯತ್ಯಯ ಇಲ್ಲ

ಸಾರಿಗೆ ನೌಕರರ ಮುಷ್ಕರ ಅಂತ್ಯವಾಗಿ, ಬಸ್‌ ಸೇವೆ ಮತ್ತೆ ಸಹಜ ಸ್ಥಿತಿಗೆ ಮರಳಿದ ನಂತರ ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್‌ ಸೇವೆ ಸಿಗಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಳಿಯಬೇಕಿದ್ದ ವಿಮಾನ ಚೆನ್ನೈನಲ್ಲಿ ಲ್ಯಾಂಡ್‌ ಆಗಿದ್ದೇಕೆ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ