ಆ್ಯಪ್ನಗರ

ಚಪ್ಪರದಹಳ್ಳಿಯಲ್ಲಿ ಕುವೆಂಪು ಪ್ರತಿಮೆ ಅನಾವರಣ

ವಿಶ್ವಮಾನವ ಸಂದೇಶ ಸಾರುವ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆ ಚಪ್ಪರದಹಳ್ಳಿ ಗ್ರಾಮದಲ್ಲಿ ಅನಾವರಣಗೊಂಡಿರುವುದು ನಿಜಕ್ಕೂ ಶ್ಲಾಘನೀಯ. ಈ ಗ್ರಾಮವು ರಾಜ್ಯ ಮಟ್ಟದಲ್ಲಿ ಹೆಸರು ಮಾಡಲು ಕನ್ನಡ ಸಾಹಿತ್ಯ ಪರಿಷತ್‌ ಮುಖ್ಯ ಕಾರಣವಾಗಿದೆ ಎಂದು ಶಾಸಕ. ಕೆ.ಮಹದೇವ್‌ ತಿಳಿಸಿದರು.

Vijaya Karnataka 20 Jan 2019, 5:00 am
ಬೆಟ್ಟದಪುರ : ವಿಶ್ವಮಾನವ ಸಂದೇಶ ಸಾರುವ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆ ಚಪ್ಪರದಹಳ್ಳಿ ಗ್ರಾಮದಲ್ಲಿ ಅನಾವರಣಗೊಂಡಿರುವುದು ನಿಜಕ್ಕೂ ಶ್ಲಾಘನೀಯ. ಈ ಗ್ರಾಮವು ರಾಜ್ಯ ಮಟ್ಟದಲ್ಲಿ ಹೆಸರು ಮಾಡಲು ಕನ್ನಡ ಸಾಹಿತ್ಯ ಪರಿಷತ್‌ ಮುಖ್ಯ ಕಾರಣವಾಗಿದೆ ಎಂದು ಶಾಸಕ. ಕೆ.ಮಹದೇವ್‌ ತಿಳಿಸಿದರು.
Vijaya Karnataka Web kuvempu statue in chapparahalli
ಚಪ್ಪರದಹಳ್ಳಿಯಲ್ಲಿ ಕುವೆಂಪು ಪ್ರತಿಮೆ ಅನಾವರಣ


ರಾಜ್ಯದ ಎರಡನೇ ಕಸಾಪ ಗ್ರಾಮ ಘಟಕವಾದ ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮ ಘಟಕದಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರತಿಮೆ ಅನಾವರಣಗೊಳಿಸಿ ಮತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

'' ಇಂದಿನ ಕಾಲದಲ್ಲಿ ರಾಜ್ಯದ ಜನತೆ ಕನ್ನಡಿಗರಾಗಿ ಕನ್ನಡ ಸಾಹಿತಿಗಳು, ಕವಿಗಳೂ, ಲೇಖಕರ ಮತ್ತು ವಿದ್ವಾಂಸರನ್ನು ದಿನ ಕಳೆದಂತೆ ಮರೆಯುತ್ತಿರುವುದು ನಿಜಕ್ಕೂ ನೋವುಂಟು ಮಾಡುವ ಸಂಗತಿ. ಇಂಥ ಪರಿಸ್ಥಿತಿ ನಮ್ಮನ್ನು ಬಿಟ್ಟು ಹೋಗಬೇಕು, ಕನ್ನಡಿಗರಾಗಿ ನಾವು ಕನ್ನಡಕ್ಕೆ ತನು, ಮನವನ್ನು ಅರ್ಪಿಸುವುದಕ್ಕೆ ಸದಾ ಸಿದ್ಧರಾಗಿರಬೇಕು'' ಎಂದರು.

ತಾಲೂಕು ಕಸಾಪ ಅಧ್ಯಕ್ಷ ಗೊರಳ್ಳಿ ಜಗದೀಶ್‌ ಮಾತನಾಡಿ, '' ಐದು ವರ್ಷಗಳ ಹಿಂದೆ ಗ್ರಾಮದಲ್ಲಿ ಕಸಾಪ ಗ್ರಾಮ ಘಟಕ ಉದ್ಘಾಟಿಸಿದಾಗ ಇಲ್ಲಿ ಕುವೆಂಪು ಪ್ರತಿಮೆಯನ್ನು ಅನಾವರಣಗೊಳಿಸಬೇಕು ಎಂದು ಎಲ್ಲರೂ ತೀರ್ಮಾನ ಮಾಡಿದರು. ಆದರೆ ಗ್ರಾಮದಲ್ಲಿ ಮನಸ್ಸು ಮಾಡಲಿಲ್ಲ. ನಾವು ಸಾಕಷ್ಟು ಬಾರಿ ಗ್ರಾಮಕ್ಕೆ ಬಂದು ಕುವೆಂಪು ಪ್ರತಿಮೆ ಗ್ರಾಮದ ದೊಡ್ಡ ಕನಸು, ನಾವು ಅದನ್ನು ಇಲ್ಲಿ ಸ್ಥಾಪಿಸಿ ಅನಾವರಣಗೊಳಿಸಬೇಕು ಎಂದು ಮತ್ತೆ ಪಣ ತೊಟ್ಟಾಗ ಶಾಸಕರಾದ ಕೆ.ಮಹದೇವ್‌ ನಾನು ನಿಮ್ಮ ಜತೆ ಇದ್ದೀನಿ, ಮೂರ್ತಿಯನ್ನು ಅನಾವರಣ ಮಾಡೋಣ ಎಂದು ಎಲ್ಲಾ ಸಹಕಾರ ನೀಡಿದರು'' ಎಂದರು.

ಸ್ವಾಮೀಜಿ ಅವರಿಂದ ಪ್ರತಿಮೆಗೆ ಮಾಲಾರ್ಪಣೆ: ಪಿರಿಯಾಪಟ್ಟಣ ತಾಲೂಕು ರಾವಂದೂರು ಶ್ರೀ ಮುರುಘ ರಾಜೇಂದ್ರ ಮಠದ ಶ್ರೀ ಮೋಕ್ಷ ಪತಿ ಸ್ವಾಮೀಜಿ ಅವರು ಆಗಮಿಸಿ ಅನಾವರಣಗೊಂಡ ಕುವೆಂಪು ಪ್ರತಿಮೆಗೆ ಹೂವಿನಹಾರ ಹಾಕಿ, ಮಾತನಾಡಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಪ್ರತಿಮೆ ದಾನಿಗಳಾದ ಸಾಹಿತಿ ಅಂಬ್ಲಾರೆ ಬಸವೇಗೌಡ, ಎಂಜಿನಿಯರ್‌ ಬೆಕ್ಕರೆ ರಮೇಶ್‌, ಶಾನುಬೋಗನಹಳ್ಳಿ ಅರುಣ್‌, ಬೆಟ್ಟದಪುರ ದೇವರಾಜು, ಪಿಡಿಒ ಮಹೇಂದ್ರ ಸೇರಿದಂತೆ ಹಲವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಜಿ.ಪಂ ಸದಸ್ಯರಾದ ರುದ್ರಮ್ಮ ನಾಗಯ್ಯ, ತಾ.ಪಂ.ಸದಸ್ಯೆ ಸುಮಿತ್ರ ನಾಗರಾಜು, ಪುಷ್ಪಲತಾ ಪುಟ್ಟಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ವಸಂತ್‌ಕುಮಾರ್‌, ಸದಸ್ಯರಾದ ಸುಂದ್ರಮ್ಮ, ಲೀಲಾವತಿ, ಪ್ರೇಮಮ್ಮ, ಮಾಜಿ ಅಧ್ಯಕ್ಷ ನಿಂಗೇಗೌಡ, ಕಸಾಪ ಹೋಬಳಿ ಅಧ್ಯಕ್ಷ ಆಲನಹಳ್ಳಿ ಕೆಂಪರಾಜು, ಮಂಜುನಾಥ್‌ ಮದಕರಿ, ಯಜಮಾನರಾದ ಸಿ.ಎನ್‌.ಜವರೇಗೌಡ, ಸಿ.ಎನ್‌.ಕಾಳೇಗೌಡ, ರಾಜೇಗೌಡ, ಸಿ.ಆರ್‌ ಅಣ್ಣೇಗೌಡ, ಸಿ.ಬಿ ಬಸವರಾಜು, ಮುಖಂಡರಾದ ಸಿ.ಆರ್‌ ನಾಗರಾಜು, ಸಿ.ಎಸ್‌.ಕುಶಾಲ್‌ ಕಸಾಪ ಹೋಬಳಿ, ಗ್ರಾಮ ಘಟಕಗಳ ಪದಾಧಿಕಾರಿಗಳು ಮತ್ತು ಗ್ರಾಮದ ಹಲವು ಮುಖಂಡರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ