ಆ್ಯಪ್ನಗರ

ಆಟೊರಿಕ್ಷಾ ಡಿಕ್ಕಿ: ಮಹಿಳೆ ಸಾವು

ಸಿಟಿಆರ್‌ಐನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ ಕಸ್ತೂರಮ್ಮಗೆ ಹುಣಸೂರು ಕಡೆಯಿಂದ ತೆರಳುತ್ತಿದ್ದ ಬೈಕ್‌ ಡಿಕ್ಕಿ ಹೊಡೆದ ರಭಸಕ್ಕೆ ಆಯತಪ್ಪಿ ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ ಹುಣಸೂರು ನಗರದ ಕಡೆಗೆ ಬರುತ್ತಿದ್ದ ಆಟೊರಿಕ್ಷಾ ಕಸ್ತೂರಮ್ಮ ಅವರ ಮೇಲೆ ಹರಿದು ಪಲ್ಟಿಯಾಗಿದೆ, ಆಟೊರಿಕ್ಷಾದಲ್ಲಿದ್ದ ಕಮರುನ್ನೀಸಾ ಮೇಲೆ ಆಟೋ ಮಗುಚಿ ಬಿದ್ದಿದ್ದರಿಂದ ಅವರಿಗೂ ತೀವ್ರ ಗಾಯವಾಗಿದೆ.

Vijaya Karnataka 14 Mar 2019, 12:41 pm
ಹುಣಸೂರು: ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್‌ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಆಟೊರಿಕ್ಷಾಗೆ ಸಿಲುಕಿ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಆಟೊರಿಕ್ಷಾ ಪಲ್ಟಿಯಾಗಿದ್ದರಿಂದ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಕೂಡ ತೀವ್ರ ಗಾಯಗೊಂಡಿದ್ದಾರೆ.
Vijaya Karnataka Web lady death


ನಗರದ ಚಿಕ್ಕ ಹುಣಸೂರು ಬಳಿ ಘಟನೆ ನಡೆದಿದೆ. ಚಿಕ್ಕ ಹುಣಸೂರು ನಿವಾಸಿ, ಸಿಟಿಆರ್‌ಐನಲ್ಲಿ ದಿನಗೂಲಿ ಕೆಲಸ ನಿರ್ವಹಿಸುತ್ತಿದ್ದ ನಾಗಮ್ಮ ಅಲಿಯಾಸ್‌ ಕಸ್ತೂರಮ್ಮ(56) ಮೃತರು. ಆಟೊರಿಕ್ಷಾದಲ್ಲಿದ್ದ ಕಮರುನ್ನೀಸಾ ತೀವ್ರ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ನಗರದ ಸಿಟಿಆರ್‌ಐನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ ಕಸ್ತೂರಮ್ಮಗೆ ಹುಣಸೂರು ಕಡೆಯಿಂದ ತೆರಳುತ್ತಿದ್ದ ಬೈಕ್‌ ಡಿಕ್ಕಿ ಹೊಡೆದ ರಭಸಕ್ಕೆ ಆಯತಪ್ಪಿ ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ ಹುಣಸೂರು ನಗರದ ಕಡೆಗೆ ಬರುತ್ತಿದ್ದ ಆಟೊರಿಕ್ಷಾ ಕಸ್ತೂರಮ್ಮ ಅವರ ಮೇಲೆ ಹರಿದು ಪಲ್ಟಿಯಾಗಿದೆ, ಆಟೊರಿಕ್ಷಾದಲ್ಲಿದ್ದ ಕಮರುನ್ನೀಸಾ ಮೇಲೆ ಆಟೋ ಮಗುಚಿ ಬಿದ್ದಿದ್ದರಿಂದ ಅವರಿಗೂ ತೀವ್ರ ಗಾಯವಾಗಿದೆ. ಸಾರ್ವಜನಿಕರು ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕಸ್ತೂರಮ್ಮ ಮೃತಪಟ್ಟಿದ್ದಾರೆ. ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಾಗಿರುವ ಕಮರುನ್ನೀಸಾ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಆಟೊರಿಕ್ಷಾ ಮತ್ತು ಚಾಲಕನ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ನಗರ ಠಾಣೆ ಎಸ್‌.ಐ.ಮಹೇಶ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ