ಲಕ್ಷಣತೀರ್ಥ ನದಿ ರಕ್ಷಣೆ ಅನಿವಾರ್ಯ
ಹುಣಸೂರು ಮತ್ತು ದಕ್ಷಿಣ ಕೊಡಗಿನ ಜೀವನದಿ ಲಕ್ಷ ್ಮಣತೀರ್ಥ ನದಿಯು ಮಾನವನ ಅಲಕ್ಷ ್ಯದಿಂದ ಇಂದು ಸಾಕಷ್ಟು ಮಲಿನಗೊಂಡಿದ್ದು, ಸಂರಕ್ಷ ಣೆಗೆ ಮುಂದಾಗದಿದ್ದಲ್ಲಿ ಭವಿಷ್ಯದಲ್ಲಿ ಗಂಭೀರ ಪರಿಣಾಮ ಬೀರಲಿದೆ ಎಂದು ಸೇವ್ ಅವರ್ ಅರ್ಥ್ ಕ್ಲಬ್ ಅಧ್ಯಕ್ಷ ಸಂಜಯ್ಕುಮಾರ್ ಎಚ್ಚರಿಸಿದರು.
Vijaya Karnataka 24 Jul 2019, 5:00 am
ಹುಣಸೂರು : ಹುಣಸೂರು ಮತ್ತು ದಕ್ಷಿಣ ಕೊಡಗಿನ ಜೀವನದಿ ಲಕ್ಷ ್ಮಣತೀರ್ಥ ನದಿಯು ಮಾನವನ ಅಲಕ್ಷ ್ಯದಿಂದ ಇಂದು ಸಾಕಷ್ಟು ಮಲಿನಗೊಂಡಿದ್ದು, ಸಂರಕ್ಷ ಣೆಗೆ ಮುಂದಾಗದಿದ್ದಲ್ಲಿ ಭವಿಷ್ಯದಲ್ಲಿ ಗಂಭೀರ ಪರಿಣಾಮ ಬೀರಲಿದೆ ಎಂದು ಸೇವ್ ಅವರ್ ಅರ್ಥ್ ಕ್ಲಬ್ ಅಧ್ಯಕ್ಷ ಸಂಜಯ್ಕುಮಾರ್ ಎಚ್ಚರಿಸಿದರು.
ಹುಣಸೂರಿನ ಸೇವ್ ಅವರ್ ಅರ್ಥ್ ಕ್ಲಬ್ವತಿಯಿಂದ ನಗರದ ಟಾಲೆಂಟ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ 'ಲಕ್ಷ ್ಮಣತೀರ್ಥ ನದಿ ಉಳಿವಿಗಾಗಿ ನನ್ನ ಯೋಜನೆಗಳು' ಕುರಿತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಗಾರು ಮಳೆಯನ್ನು ಧರೆಗಿಳಿಸುವಲ್ಲಿ ಪಶ್ಚಿಮಘಟ್ಟಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ ಈ ಪಶ್ಚಿಮ ಘಟ್ಟಗಳನ್ನೇ ವಿನಾಶ ಮಾಡುವತ್ತ ಆಳುವ ಸರಕಾರಗಳು ಹಾಗೂ ಟಿಂಬರ್ ಲಾಬಿ ನಡೆಸುತ್ತಿರುವುದರಿಂದ ಮುಂಗಾರು ಮಳೆಗೆ ಹೊಡೆತ ಬಿದ್ದಿದೆ. ಲಕ್ಷ ್ಮಣತೀರ್ಥ ನದಿಯು ವರ್ಷವಿಡೀ ಹರಿಯುವ ಶಕ್ತಿ ಹೊಂದಿರುವ ದೀರ್ಘಕಾಲಿಕ ನದಿ ಇದಾಗಿದೆ. ಕಾವೇರಿಯ ಉಪನದಿಯಾಗಿ ಲಕ್ಷ ್ಮಣತೀರ್ಥ ನದಿ ಈ ಭಾಗದ ಜನರ ಜೀವನಾಡಿಯಾಗಿದೆ. ಮಾನವ ನದಿ ಮೂಲಗಳನ್ನು ಪ್ರಕೃತಿಗೆ ವಿರುದ್ಧವಾಗಿ ಮುಚ್ಚಿ ಹಾಕಿದ್ದು, ಈ ನದಿಗೆ ಕಲ್ಮಶವನ್ನು ಪರೋಕ್ಷ ವಾಗಿ ತುಂಬುವ ಪ್ರವೃತ್ತಿಯಿಂದಾಗಿ ನದಿಯು ಕಣ್ಮರೆಯಾದರೂ ಆಶ್ಚರ್ಯವಿಲ್ಲ. ಈ ನದಿ ಉಳಿಸುವ ಬಗ್ಗೆ ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಜನರ ಸಹಕಾರ ಸಿಗುತ್ತಿಲ್ಲ. ಇದು ನನ್ನ ನದಿ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬಾರದಿದ್ದಲ್ಲಿ ಮುಂದಿನ ಪೀಳಿಗೆಗೆ ದೊಡ್ಡ ಅಪಾಯ ಕಾದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ನದಿ ಉಳಿವಿಗೆ ಕಂಕಣತೊಡಬೇಕಾದ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಸಂಸ್ಥಾಪಕ ನವೀನ್ ರೈ ಮಾತನಾಡಿ, ಹಿಂದೆ ಈ ಸುಂದರ ನದಿಯಲ್ಲಿ ಈಜಾಡಿದ ಅನುಭವ ನಮ್ಮಲ್ಲಿದೆ. ಆದರೆ ಪ್ರಸ್ತುತ ನದಿಯ ಸ್ಥಿತಿ ಅಯೋಮಯವಾಗಿದ್ದು, ವಿದ್ಯಾರ್ಥಿಗಳ ಮೂಲಕ ಪೋಷಕರನ್ನು ಸೇವ್ ಅವರ್ ಅರ್ಥ್ ಕ್ಲಬ್ನ ನದಿ ಉಳಿಸಿ ಕಾರ್ಯಕ್ರಮಕ್ಕೆ ಬೆಂಬಲ ಪಡೆಯಲು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದರು.
ಪ್ರಾಚಾರ್ಯ ರೇಣುಕಾಪ್ರಸಾದ್ ಮಾತನಾಡಿ, ಲಕ್ಷ ್ಮಣತೀರ್ಥ ನದಿಯ ತಳದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಜಲಚರಗಳು ಸತ್ತುಹೋಗುತ್ತಿವೆ. ನೀರು ಉಪಯೋಗಕ್ಕೆ ಬಾರದಂತಾಗಿದ್ದು, ಮುಂದೊಂದು ದಿನ ಈ ನದಿ ಮಲಿನಗೊಂಡು ಸಾಂಕ್ರಾಮಿಕ ರೋಗಗಳ ತಾಣವಾದಲ್ಲಿ ಇಡೀ ಊರೇ ಖಾಲಿ ಮಾಡುವ ಸ್ಥಿತಿ ಬಂದೊದಗಲಿದೆ. ವಿದ್ಯಾರ್ಥಿಗಳು, ನಾಗರಿಕರು ಎಲ್ಲರೂ ಒಟ್ಟಾಗಿ ಲಕ್ಷ ್ಮಣತೀರ್ಥ ನದಿ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಹೃದಯವಂತಿಕೆಯನ್ನು ಪ್ರದರ್ಶಿಸೋಣ ಎಂದರು.
ಪ್ರಬಂಧ ಸ್ಪರ್ಧೆಗೆ ತಾಲೂಕಿನ ವಿವಿಧ ಶಾಲೆಗಳಿಂದ 36 ವಿದ್ಯಾರ್ಥಿಗಳು ಮತ್ತು ಭಾಷಣ ಸ್ಪರ್ಧೆಗೆ 18 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಮಂಜುನಾಥ್, ಸಹಶಿಕ್ಷ ಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸನ್ಮಾನ: ಸಮಾರಂಭದಲ್ಲಿ ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಶಿವಕುಮಾರ್.ವಿ.ರಾವ್, ಕಾರ್ಯದರ್ಶಿ ದಾ.ರಾ.ಮಹೇಶ್ ಹಾಗೂ ಕಾರ್ಯದರ್ಶಿ ಸಂಪತ್ಕುಮಾರ್ಗೋಳಿ ಅವರನ್ನು ವಿದ್ಯಾಸಂಸ್ಥೆವತಿಯಿಂದ ಸನ್ಮಾನಿಸಲಾಯಿತು.
ಹುಣಸೂರಿನ ಸೇವ್ ಅವರ್ ಅರ್ಥ್ ಕ್ಲಬ್ವತಿಯಿಂದ ನಗರದ ಟಾಲೆಂಟ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ 'ಲಕ್ಷ ್ಮಣತೀರ್ಥ ನದಿ ಉಳಿವಿಗಾಗಿ ನನ್ನ ಯೋಜನೆಗಳು' ಕುರಿತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಗಾರು ಮಳೆಯನ್ನು ಧರೆಗಿಳಿಸುವಲ್ಲಿ ಪಶ್ಚಿಮಘಟ್ಟಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ ಈ ಪಶ್ಚಿಮ ಘಟ್ಟಗಳನ್ನೇ ವಿನಾಶ ಮಾಡುವತ್ತ ಆಳುವ ಸರಕಾರಗಳು ಹಾಗೂ ಟಿಂಬರ್ ಲಾಬಿ ನಡೆಸುತ್ತಿರುವುದರಿಂದ ಮುಂಗಾರು ಮಳೆಗೆ ಹೊಡೆತ ಬಿದ್ದಿದೆ. ಲಕ್ಷ ್ಮಣತೀರ್ಥ ನದಿಯು ವರ್ಷವಿಡೀ ಹರಿಯುವ ಶಕ್ತಿ ಹೊಂದಿರುವ ದೀರ್ಘಕಾಲಿಕ ನದಿ ಇದಾಗಿದೆ. ಕಾವೇರಿಯ ಉಪನದಿಯಾಗಿ ಲಕ್ಷ ್ಮಣತೀರ್ಥ ನದಿ ಈ ಭಾಗದ ಜನರ ಜೀವನಾಡಿಯಾಗಿದೆ. ಮಾನವ ನದಿ ಮೂಲಗಳನ್ನು ಪ್ರಕೃತಿಗೆ ವಿರುದ್ಧವಾಗಿ ಮುಚ್ಚಿ ಹಾಕಿದ್ದು, ಈ ನದಿಗೆ ಕಲ್ಮಶವನ್ನು ಪರೋಕ್ಷ ವಾಗಿ ತುಂಬುವ ಪ್ರವೃತ್ತಿಯಿಂದಾಗಿ ನದಿಯು ಕಣ್ಮರೆಯಾದರೂ ಆಶ್ಚರ್ಯವಿಲ್ಲ. ಈ ನದಿ ಉಳಿಸುವ ಬಗ್ಗೆ ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಜನರ ಸಹಕಾರ ಸಿಗುತ್ತಿಲ್ಲ. ಇದು ನನ್ನ ನದಿ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬಾರದಿದ್ದಲ್ಲಿ ಮುಂದಿನ ಪೀಳಿಗೆಗೆ ದೊಡ್ಡ ಅಪಾಯ ಕಾದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ನದಿ ಉಳಿವಿಗೆ ಕಂಕಣತೊಡಬೇಕಾದ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಸಂಸ್ಥಾಪಕ ನವೀನ್ ರೈ ಮಾತನಾಡಿ, ಹಿಂದೆ ಈ ಸುಂದರ ನದಿಯಲ್ಲಿ ಈಜಾಡಿದ ಅನುಭವ ನಮ್ಮಲ್ಲಿದೆ. ಆದರೆ ಪ್ರಸ್ತುತ ನದಿಯ ಸ್ಥಿತಿ ಅಯೋಮಯವಾಗಿದ್ದು, ವಿದ್ಯಾರ್ಥಿಗಳ ಮೂಲಕ ಪೋಷಕರನ್ನು ಸೇವ್ ಅವರ್ ಅರ್ಥ್ ಕ್ಲಬ್ನ ನದಿ ಉಳಿಸಿ ಕಾರ್ಯಕ್ರಮಕ್ಕೆ ಬೆಂಬಲ ಪಡೆಯಲು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದರು.
ಪ್ರಾಚಾರ್ಯ ರೇಣುಕಾಪ್ರಸಾದ್ ಮಾತನಾಡಿ, ಲಕ್ಷ ್ಮಣತೀರ್ಥ ನದಿಯ ತಳದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಜಲಚರಗಳು ಸತ್ತುಹೋಗುತ್ತಿವೆ. ನೀರು ಉಪಯೋಗಕ್ಕೆ ಬಾರದಂತಾಗಿದ್ದು, ಮುಂದೊಂದು ದಿನ ಈ ನದಿ ಮಲಿನಗೊಂಡು ಸಾಂಕ್ರಾಮಿಕ ರೋಗಗಳ ತಾಣವಾದಲ್ಲಿ ಇಡೀ ಊರೇ ಖಾಲಿ ಮಾಡುವ ಸ್ಥಿತಿ ಬಂದೊದಗಲಿದೆ. ವಿದ್ಯಾರ್ಥಿಗಳು, ನಾಗರಿಕರು ಎಲ್ಲರೂ ಒಟ್ಟಾಗಿ ಲಕ್ಷ ್ಮಣತೀರ್ಥ ನದಿ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಹೃದಯವಂತಿಕೆಯನ್ನು ಪ್ರದರ್ಶಿಸೋಣ ಎಂದರು.
ಪ್ರಬಂಧ ಸ್ಪರ್ಧೆಗೆ ತಾಲೂಕಿನ ವಿವಿಧ ಶಾಲೆಗಳಿಂದ 36 ವಿದ್ಯಾರ್ಥಿಗಳು ಮತ್ತು ಭಾಷಣ ಸ್ಪರ್ಧೆಗೆ 18 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಮಂಜುನಾಥ್, ಸಹಶಿಕ್ಷ ಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸನ್ಮಾನ: ಸಮಾರಂಭದಲ್ಲಿ ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಶಿವಕುಮಾರ್.ವಿ.ರಾವ್, ಕಾರ್ಯದರ್ಶಿ ದಾ.ರಾ.ಮಹೇಶ್ ಹಾಗೂ ಕಾರ್ಯದರ್ಶಿ ಸಂಪತ್ಕುಮಾರ್ಗೋಳಿ ಅವರನ್ನು ವಿದ್ಯಾಸಂಸ್ಥೆವತಿಯಿಂದ ಸನ್ಮಾನಿಸಲಾಯಿತು.