ಮೈಸೂರು : ನಗರಕ್ಕೆ ಮತ್ತೊಂದು ಸುಂದರ ಉದ್ಯಾನ ಸೇರ್ಪಡೆಗೊಂಡಿದೆ.
ಉತ್ತಮ ಗಾಳಿ ಹಾಗೂ ನಗರದಲ್ಲಿ ಹಸುರೀಕರಣ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಜಯನಗರ ಮಳಲವಾಡಿ ಕೆರೆ ಆವರಣದಲ್ಲಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗಿದ್ದು, ಸಾವಿರಾರು ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಉದ್ಯಾನ ನಿರ್ಮಿಸಲಾಗಿದೆ.
ಉದ್ಯಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭಾನುವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ನಗರಪಾಲಿಕೆ ಸದಸ್ಯರಾದ ಎಂ.ಎಸ್.ಶೋಭಾ, ಆರ್.ಕೆ.ಶರತ್ಕುಮಾರ್, ಡಿಸಿಎಫ್ಗಳಾದ ಮಹೇಶ್ವರನ್, ಹನುಮಂತಪ್ಪ ಸೇರಿದಂತೆ ಮತ್ತಿತರಿದ್ದರು.
ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಮಳಲವಾಡಿ ಕೆರೆಯಲ್ಲಿ 33 ಎಕರೆ ಪ್ರದೇಶದಲ್ಲಿ ರಾಜ್ಯ ಸರಕಾರದ 61 ಲಕ್ಷ ರೂ.ಅನುದಾನದಲ್ಲಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗಿದೆ.
ವಾಯುಹಾರ ರಸ್ತೆಗಳು, ಮಕ್ಕಳ ಆಟಿಕೆ ಮೈದಾನ, ಪರಗೋಲ, ಶೌಚಾಲಯ, ಪ್ರವೇಶ ದ್ವಾರ ಮುಂಭಾಗದ ಗೇಟ್, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಸಂದೇಶವುಳ್ಳ ಸೂಚನಾಫಲಕ ಅಳವಡಿಸಿ ಅಭಿವೃದ್ಧಿಮಾಡಲಾಗಿದೆ. ಇನ್ನೂ ಜಯನಗರದ ಸುತ್ತಮುತ್ತಲಿನ ನಿವಾಸಿಗಳಿಗೆ ಸಾಲು ಮರದ ತಿಮ್ಮಕ ಉದ್ಯಾನ ಉತ್ತಮ ಉದ್ಯಾನವಾಗಲಿದೆ. ಇದೇ ರೀತಿ ಮುಂದಿನ ದಿನಗಲ್ಲಿ ನಗರ ಇತರೆ ಭಾಗಗಳು ಹಾಘೂ ನಗರ ಹೊಂದಿಕೊಂಡಿರುವ ಭಾಗಗಳನ್ನು ಹಸರೀಕರಣಗೊಳಿಸುವ ಉದ್ದೇಶವಿದೆ. ಈ ಮೂಲಕ ನಗರವನ್ನು ಹಸಿರು ಮತ್ತು ಸುಂದರವಾಗಿಸುವ ದೂರ ದೃಷ್ಟಿಹೊಂದಲಾಗಿದೆ,''' ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
1800 ಗಿಡಗಳು: ಆಲ, ಅರಳಿ, ಅತ್ತಿ, ನೇರಳೆ ಮೊದಲಾದ ಹಣ್ಣು ಬಿಡುವ ಹಾಗೂ ಇಡೀ ಪ್ರದೇಶದಲ್ಲಿ ಹರಡಿಕೊಂಡು ಹೃದಯಭಾಗದಲ್ಲಿ ದಟ್ಟವಾದ ಬನದಂತೆ ಬೆಳೆಸಲು ಉದ್ದೇಶಿಸಲಾಗಿದ್ದು, 1800 ಗಿಡಗಳನ್ನು ನಡೆಲಾಗಿದೆ. ಸಂದೇಶ ಸೂಚನಾ ಫಲಕಗಳಿಂದ ಮನುಷ್ಯನನ್ನ ನಿಸರ್ಗದೊಂದಿಗೆ ಬೆಸೆಯುವ ಪ್ರಯತ್ನದಂತೆ ರೂಪಿಸಿ ಆರ್ಕಸುವಂತೆ ಮಾಡಲಾಗಿದೆ.
ಉತ್ತಮ ಗಾಳಿ ಹಾಗೂ ನಗರದಲ್ಲಿ ಹಸುರೀಕರಣ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಜಯನಗರ ಮಳಲವಾಡಿ ಕೆರೆ ಆವರಣದಲ್ಲಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗಿದ್ದು, ಸಾವಿರಾರು ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಉದ್ಯಾನ ನಿರ್ಮಿಸಲಾಗಿದೆ.
ಉದ್ಯಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭಾನುವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ನಗರಪಾಲಿಕೆ ಸದಸ್ಯರಾದ ಎಂ.ಎಸ್.ಶೋಭಾ, ಆರ್.ಕೆ.ಶರತ್ಕುಮಾರ್, ಡಿಸಿಎಫ್ಗಳಾದ ಮಹೇಶ್ವರನ್, ಹನುಮಂತಪ್ಪ ಸೇರಿದಂತೆ ಮತ್ತಿತರಿದ್ದರು.
ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಮಳಲವಾಡಿ ಕೆರೆಯಲ್ಲಿ 33 ಎಕರೆ ಪ್ರದೇಶದಲ್ಲಿ ರಾಜ್ಯ ಸರಕಾರದ 61 ಲಕ್ಷ ರೂ.ಅನುದಾನದಲ್ಲಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗಿದೆ.
ವಾಯುಹಾರ ರಸ್ತೆಗಳು, ಮಕ್ಕಳ ಆಟಿಕೆ ಮೈದಾನ, ಪರಗೋಲ, ಶೌಚಾಲಯ, ಪ್ರವೇಶ ದ್ವಾರ ಮುಂಭಾಗದ ಗೇಟ್, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಸಂದೇಶವುಳ್ಳ ಸೂಚನಾಫಲಕ ಅಳವಡಿಸಿ ಅಭಿವೃದ್ಧಿಮಾಡಲಾಗಿದೆ. ಇನ್ನೂ ಜಯನಗರದ ಸುತ್ತಮುತ್ತಲಿನ ನಿವಾಸಿಗಳಿಗೆ ಸಾಲು ಮರದ ತಿಮ್ಮಕ ಉದ್ಯಾನ ಉತ್ತಮ ಉದ್ಯಾನವಾಗಲಿದೆ. ಇದೇ ರೀತಿ ಮುಂದಿನ ದಿನಗಲ್ಲಿ ನಗರ ಇತರೆ ಭಾಗಗಳು ಹಾಘೂ ನಗರ ಹೊಂದಿಕೊಂಡಿರುವ ಭಾಗಗಳನ್ನು ಹಸರೀಕರಣಗೊಳಿಸುವ ಉದ್ದೇಶವಿದೆ. ಈ ಮೂಲಕ ನಗರವನ್ನು ಹಸಿರು ಮತ್ತು ಸುಂದರವಾಗಿಸುವ ದೂರ ದೃಷ್ಟಿಹೊಂದಲಾಗಿದೆ,''' ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
1800 ಗಿಡಗಳು: ಆಲ, ಅರಳಿ, ಅತ್ತಿ, ನೇರಳೆ ಮೊದಲಾದ ಹಣ್ಣು ಬಿಡುವ ಹಾಗೂ ಇಡೀ ಪ್ರದೇಶದಲ್ಲಿ ಹರಡಿಕೊಂಡು ಹೃದಯಭಾಗದಲ್ಲಿ ದಟ್ಟವಾದ ಬನದಂತೆ ಬೆಳೆಸಲು ಉದ್ದೇಶಿಸಲಾಗಿದ್ದು, 1800 ಗಿಡಗಳನ್ನು ನಡೆಲಾಗಿದೆ. ಸಂದೇಶ ಸೂಚನಾ ಫಲಕಗಳಿಂದ ಮನುಷ್ಯನನ್ನ ನಿಸರ್ಗದೊಂದಿಗೆ ಬೆಸೆಯುವ ಪ್ರಯತ್ನದಂತೆ ರೂಪಿಸಿ ಆರ್ಕಸುವಂತೆ ಮಾಡಲಾಗಿದೆ.