ಆ್ಯಪ್ನಗರ

ಮೈಸೂರು: ಮೈದನಹಳ್ಳಿಯಲ್ಲಿ ಚಿರತೆ ಸೆರೆ | ನಾಗರಹೊಳೆ ಅಭಯಾರಣ್ಯದಲ್ಲಿ ಬಿಡುಗಡೆ

ಹುಣಸೂರು ತಾಲೂಕಿನಲ್ಲಿ ಜನರಿಗೆ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಮಂಗಳವಾರ ಸೆರೆ ಹಿಡಿಯಲಾಗಿದೆ. ತಾಲೂಕಿನ ಬಿಳಿಕೆರೆ ಹೋಬಳಿಯ ಮೈದಹಳ್ಳಿಯಲ್ಲಿ ಚಿರತೆಯನ್ನು ಸೆರೆಹಿಡಿಯಲಾಗಿದೆ. ನಾಗರಹೊಳೆ ಅಭಯಾರಣ್ಯದಲ್ಲಿ ಚಿರತೆಯನ್ನು ಬಿಡುಗಡೆಗೊಳಿಸಲಾಗಿದೆ.

Vijaya Karnataka Web 4 Nov 2020, 4:03 pm
ಹುಣಸೂರು: ಜಮೀನು-ಗ್ರಾಮಕ್ಕೆ ಲಗ್ಗೆ ಇಟ್ಟು ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಿದ್ದ ಗಂಡು ಚಿರತೆಯೊಂದು ಮಂಗಳವಾರ ಮುಂಜಾನೆ ಬೋನಿನಲ್ಲಿ ಬಂಧಿಯಾಗಿದೆ. ತಾಲೂಕಿನ ಬಿಳಿಕೆರೆ ಹೋಬಳಿಯ ಮೈದನಹಳ್ಳಿಯ ಮಹೇಶ್‌ ಅವರ ಜಮೀನಿನಲ್ಲಿಟ್ಟಿದ್ದ ಬೋನಿಗೆ ಸುಮಾರು ನಾಲ್ಕು ವರ್ಷದ ಚಿರತೆ ಸಿಲುಕಿದೆ.
Vijaya Karnataka Web leopard trapped in mydanahalli hunsur taluk
ಮೈಸೂರು: ಮೈದನಹಳ್ಳಿಯಲ್ಲಿ ಚಿರತೆ ಸೆರೆ | ನಾಗರಹೊಳೆ ಅಭಯಾರಣ್ಯದಲ್ಲಿ ಬಿಡುಗಡೆ


ಈ ಚಿರತೆಯು ಮೈದನಹಳ್ಳಿ ಹಾಗೂ ಸುತ್ತಮುತ್ತಲಿನ ಜಮೀನುಗಳಲ್ಲಿ ಅಡ್ಡಾಡುತ್ತಿದ್ದ ಸಾಕಷ್ಟು ಸಾಕುನಾಯಿಗಳನ್ನು ತಿಂದು ಹಾಕಿತ್ತು. ಇತ್ತೀಚಿಗೆ ಮಹೇಶ್‌ರ ಜಮೀನಿನಲ್ಲಿ ಚಿರತೆ ಹೆಜ್ಜೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ ಮೇರೆಗೆ ಮಹೇಶ್‌ ಅವರ ಜಮೀನಿನಲ್ಲಿ ಬೋನ್‌ನಲ್ಲಿ ನಾಯಿಯನ್ನು ಕಟ್ಟಿಹಾಕಿ ಚಿರತೆಗೆ ಬಲೆ ಬೀಸಿದ್ದರು.

ನಾಯಿಯನ್ನು ತಿನ್ನುವ ಆಸೆಯಿಂದ ಬಂದ ಚಿರತೆಯು ಬೋನಿನಲ್ಲಿ ಸೆರೆಯಾಯಿತು. ಈ ಚಿರತೆಯನ್ನು ನಾಗರಹೊಳೆ ಉದ್ಯಾನದಲ್ಲಿ ಬಂಧ ಮುಕ್ತಗೊಳಿಸಲಾಯಿತೆಂದು ಆರ್‌ಎಫ್‌ಓ ಸಂದೀಪ್‌ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಓಗಳಾದ ರಿಜ್ವಾನ್‌, ಸಿದ್ದರಾಜು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಚಿರತೆಯ ಬಂಧನದಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಮೈಸೂರು: ಮೊಳೆಯೂರು ಅರಣ್ಯದಲ್ಲಿ ಕಾಡಾನೆ ಸಾವು | ರೈಲು ಕಂಬಿಗೆ ಸಿಲುಕಿ ಮೃತಪಟ್ಟಿರುವ ಶಂಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ