ಆ್ಯಪ್ನಗರ

ಇಲಾಖೆ ಯೋಜನೆ ಕೃಷಿಕರಿಗೆ ತಲುಪಲಿ

ಸರಕಾರದಿಂದ ರೈತರಿಗಾಗಿ ಇಲಾಖೆ ಗಳಿಗೆ ಬರುವ ಸವಲತ್ತುಗಳ ಬಗ್ಗೆ ಗ್ರಾಮ ಪಂಚಾಯಿತಿ ಹಂತದವರೆಗೂ ವ್ಯಾಪಕ ಪ್ರಚಾರ ಮಾಡಿ ಅವುಗಳು ಸದ್ಬಳಕೆಯಾ ಗುವಂತೆ ಅಧಿಕಾರಿಗಳು ಕೆಲಸ ಮಾಡ ಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾರವಿಕುಮಾರ್ ಹೇಳಿದರು.

Vijaya Karnataka 25 Jun 2019, 9:15 pm
ಕೃಷ್ಣರಾಜನಗರ : ಸರಕಾರದಿಂದ ರೈತರಿಗಾಗಿ ಇಲಾಖೆ ಗಳಿಗೆ ಬರುವ ಸವಲತ್ತುಗಳ ಬಗ್ಗೆ ಗ್ರಾಮ ಪಂಚಾಯಿತಿ ಹಂತದವರೆಗೂ ವ್ಯಾಪಕ ಪ್ರಚಾರ ಮಾಡಿ ಅವುಗಳು ಸದ್ಬಳಕೆಯಾ ಗುವಂತೆ ಅಧಿಕಾರಿಗಳು ಕೆಲಸ ಮಾಡ ಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾರವಿಕುಮಾರ್ ಹೇಳಿದರು.
Vijaya Karnataka Web MYR-MYS25KRN2C


ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಹಣಕಾಸು ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ, ಸಾಮಾನ್ಯ ಸ್ಥಾಯಿ ಸಮಿತಿ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದರು.

‘‘ಸರಕಾರದ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್‌ಗಳನ್ನು ಉಚಿತವಾಗಿ ವಿತರಿಸಲು ಸರಕಾರದಿಂದ ಪ್ರತಿ ವಿದ್ಯಾರ್ಥಿಗೆ ಸುಮಾರು 300 ರೂ. ಮಂಜೂರಾಗಿದ್ದು, ಈಗಾಗಲೇ ಎಸ್‌ಡಿಎಂಸಿ ಖಾತೆಗೆ ಹಣ ಜಮಾ ಆಗಿದೆ. ಗುಣಮಟ್ಟದ ಶೂಗಳನ್ನು ವಿತರಿಸಲು ಶಾಲೆಗಳ ಮುಖ್ಯಶಿಕ್ಷಕರಿಗೆ ಸುತ್ತೋಲೆ ಹೊರಡಿಸಬೇಕು,’’ ಎಂದು ಬಿಆರ್‌ಸಿ ಅವರಿಗೆ ಸೂಚಿಸಿದರು.

ಶಿಕ್ಷಕರ ನೇಮಿಸಿ: ಸದಸ್ಯೆ ಸುನೀತಾ ದಿನೇಶ್ ಮಾತನಾಡಿ, ‘‘ಹನಸೋಗೆಯ ಪ್ರೌಢಶಾಲೆಯಲ್ಲಿ 60 ಮಕ್ಕಳು ವ್ಯಾಸಂಗ ಮಾಡುತ್ತಿದ್ದು 3 ಮಂದಿ ಶಿಕ್ಷಕರನ್ನು ಮಾತ್ರ ನಿಯೋಜಿಸಲಾಗಿದ್ದು, ಇದರಲ್ಲಿ ಒಬ್ಬರು ಸತತ ಗೈರು ಹಾಜರಾಗಿದ್ದು, ಇವರ ಬಗ್ಗೆ ಸೂಕ್ತ ಕ್ರಮಕೈಗೊಂಡು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕನೇಮಕ ಮಾಡುವಂತೆ ಕಳೆದ 11 ತಿಂಗಳಿಂದಲೂ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ,’’ಎಂದು ದೂರಿದರು.

ಇದರಿಂದ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಲಿತಾಂಶ ಬಂದಿದೆ. ಆದ್ದರಿಂದ ಮುಂದಿನ ಒಂದು ತಿಂಗಳ ಒಳಗೆ ಶಿಕ್ಷಕರ ನೇಮಕ ಮಾಡಬೇಕು ಎಂದು ಬಿಆರ್‌ಸಿ ರುದ್ರಪ್ಪ ಅವರಿಗೆ ತಾಕೀತು ಮಾಡಿದ ಸದಸ್ಯರು ಶಿಕ್ಷಣ ಇಲಾಖೆಯಲ್ಲಿ ಲೋಪವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದಾಗ ಇತರ ಸದಸ್ಯರು ಬೆಂಬಲ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗದಂತೆ ಶಿಕ್ಷಣ ಇಲಾಖೆ ಕೆಲಸ ಮಾಡಬೇಕು,’’ಎಂದು ಹೇಳಿದರು.

ನಿಲಯ ಪಾಲಕರ ನೇಮಕ ಮಾಡಿ: ಸದಸ್ಯೆ ಶೋಭಾಕೋಟೇಗೌಡ ಮಾತನಾಡಿ, ‘‘ಮಿರ್ಲೆಯ ವಸತಿ ಶಾಲೆಯಲ್ಲಿ 150 ವಿದ್ಯಾರ್ಥಿಗಳಿದ್ದು, ನಿಲಯ ಪಾಲಕ ಇಲ್ಲದಿರುವುದರಿಂದ ಪ್ರಾಂಶುಪಾಲ ರೊಬ್ಬರಿಂದ ಅಷ್ಟು ಮಕ್ಕಳನ್ನು ನೋಡಿಕೊಳ್ಳಲು ತೊಂದರೆಯಾಗುತ್ತಿದೆ. ಕೂಡಲೇ ಪಾಲಕರ ನೇಮಕ ಮಾಡ ಬೇಕೆಂದು ಒತ್ತಾಯಿಸಿದಲ್ಲದೆ ಸಮಾಜ ಕಲ್ಯಾಣ ಮತ್ತು ಬಿಸಿಎಂ ಇಲಾಖೆಗಳ ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ನಿಯಮಾನುಸಾರ ಆಹಾರ ನೀಡಬೇಕು,’’ ಎಂದು ಸೂಚಿಸಿದರು.

ಸದಸ್ಯ ಶ್ರೀನಿವಾಸಪ್ರಸಾದ್ ಮಾತನಾಡಿ, ‘‘ರೇಷ್ಮೆ ಬೆಳೆಗಾರರಿಗೆ ಇಲಾಖೆಯ ವತಿಯಿಂದ ವಿತರಿಸಲಾಗಿರುವ ಸಲಕರಣೆ ಗಳು ಕಳಪೆ ಗುಣಮಟ್ಟದಾಗಿರುವ ಬಗ್ಗೆ ದೂರು ಬಂದಿದ್ದು ಇಲಾಖೆಯ ಅಧಿಕಾರಿಗಳು ವಿತರಣೆಗೂ ಮೊದಲೇ ಗುಣಮಟ್ಟ ಪರಿಶೀಲಿಸಬೇಕು. 488 ಮಂದಿ ಮಾತ್ರ ರೇಷ್ಮೆ ಬೆಳೆಯುತ್ತಿದ್ದು, ಇನ್ನಷ್ಟು ರೈತರು ಬೆಳೆ ಬೆಳೆಯಲು ಇಲಾಖೆ ಪ್ರೇರಣೆ ಮಾಡುವುದರ ಜತೆಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು,’’ ಎಂದು ತಾಕೀತು ಮಾಡಿದರು.

ಉಪಾಧ್ಯಕ್ಷೆ ಸಾಕಮ್ಮಸಣ್ಣಪ್ಪ, ಸದಸ್ಯ ಕುಮಾರ್, ಮಹದೇವ್, ಜಿ.ಎಸ್.ಮಂಜುನಾಥ್, ರತ್ನಮ್ಮಮಂಜುನಾಥ್, ಸಿದ್ದಮ್ಮದೇವರಾಜು, ಇಒ ಲಕ್ಷ್ಮಿಮೋಹನ್, ತಾಲೂಕು ಪಂಚಾಯಿತಿಯ ಅನಿತ, ಕರೀಗೌಡ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಕ್ರಮಕೈಗೊಳ್ಳಿ
ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಯೋಗೀಶ್ ಮಾತನಾಡಿ,‘‘ಎಸ್‌ಸಿಪಿ ಯೋಜನೆಯಲ್ಲಿ 2018ರಲ್ಲಿ ಹಣ ಬಿಡುಗಡೆಯಗಿ ಇಲಾಖೆ ಅಧಿಕಾರಿಗಳು ಹಣ ಪಡೆದಿದ್ದರೂ ಏಕೆ ಯೋಜನೆಯಲ್ಲಿ ರೈತರಿಗೆ ಟಾರ್ಪಾಲ್ ವಿತರಣೆ ಮಾಡಿ ಎಂದು ಪ್ರಶ್ನಿಸಿದರಲ್ಲದೆ ಈ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಶಿಾರಸ್ಸು ಮಾಡಲಾಗುವುದು,’’ ಎಂದು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ