ಆ್ಯಪ್ನಗರ

ಸಮಾಜಕ್ಕೆ ರಂಗಭೂಮಿಯೇ ಪಾಠ ಮಾಡಲಿ

ವಿಶ್ವವಿದ್ಯಾನಿಲಯಗಳು ತೀರಿಕೊಂಡಿರುವ ಸಂದರ್ಭದಲ್ಲಿ ರಂಗಭೂಮಿಯೇ ಸಮಾಜಕ್ಕೆ ಪಾಠ ಮಾಡಬೇಕಿದೆ ಎಂದು ಚಿಂತಕ ಪೊ›.ನಟರಾಜ ಹುಳಿಯಾರ್‌ ತಿಳಿಸಿದರು.

Vijaya Karnataka 28 Jun 2018, 5:00 am
ಮೈಸೂರು: ವಿಶ್ವವಿದ್ಯಾನಿಲಯಗಳು ತೀರಿಕೊಂಡಿರುವ ಸಂದರ್ಭದಲ್ಲಿ ರಂಗಭೂಮಿಯೇ ಸಮಾಜಕ್ಕೆ ಪಾಠ ಮಾಡಬೇಕಿದೆ ಎಂದು ಚಿಂತಕ ಪೊ›.ನಟರಾಜ ಹುಳಿಯಾರ್‌ ತಿಳಿಸಿದರು.
Vijaya Karnataka Web let society teach theater nataraj huliyar
ಸಮಾಜಕ್ಕೆ ರಂಗಭೂಮಿಯೇ ಪಾಠ ಮಾಡಲಿ


ಜನಮನ ಸಾಂಸ್ಕೃತಿಕ ಸಂಘಟನೆಯ ಸಹಯೋಗದೊಂದಿಗೆ ನೆಲೆ ಹಿನ್ನೆಲೆ ಸಂಸ್ಥೆಯು ಬುಧವಾರ ಸಂಜೆ ರಂಗಾಯಣದ ಕಿಂದರಿಜೋಗಿ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀರಾಜೇಶ್ವರಿ ವಸ್ತ್ರಾಲಂಕಾರದ ಮಾಲೀಕರು, ಹಿರಿಯ ರಂಗಕರ್ಮಿ ದಂಪತಿ ಎಚ್‌.ಬಿ.ಯಶೋಧ ಹಾಗೂ ಬಿ.ಎಂ.ರಾಮಚಂದ್ರ ಅವರಿಗೆ ಸಿಜಿಕೆ ರಂಗ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘‘ಸಿಜಿಕೆ ಕ್ರಿಯಾಶೀಲ ವ್ಯಕ್ತಿತ್ವದವರಾಗಿದ್ದು, ಎಂಥಹ ಸಂದರ್ಭದಲ್ಲಿಯೂ ಭರವಸೆ ನೀಡುತ್ತಿದ್ದಂತಹ ವ್ಯಕ್ತಿ. ನಿಸ್ತೇಜವಾಗಿದ್ದ ರಂಗಭೂಮಿ ನಂತರದಲ್ಲಿ ಚಲನೆ, ಪ್ರಯೋಗ ಗಳಿಗೆ ತೊಡಗಿ ಸಮುದಾಯದತ್ತ ನಡೆಯಿತು. ಆನಂತರ ಸಿಜಿಕೆ ರಂಗಭೂಮಿಯನ್ನು ಮೆಟಾಫರ್‌ ಅನ್ನಾಗಿಸಿದರು. ಪೊ›ಸೀನಿಯಂ ರಂಗಭೂಮಿಯನ್ನು ಬದಲಿಸಿ ಸಮುದಾಯದತ್ತ ತಂದ ಕೀರ್ತಿ ಸಿಜಿಕೆ ಅವರದು. ಮತ್ತೆ ರಂಗ ಭೂಮಿಯು ಪೊ›ಸೀನಿಯಂನತ್ತ ಹೋದಾಗ ಬೀದಿ ನಾಟಕದ ಎಲ್ಲಾ ಗುಣಗಳನ್ನೂ ಒಳಗೊಂಡಿತ್ತು,’’ ಎಂದರು.

‘‘ಎಲ್ಲರೊಳಗಿರುವ ಅನುಭವವನ್ನು ರಂಗ ಭೂಮಿಯ ಮೇಲೆ ತರುವುದು ಹೇಗೆ ಎಂದು ಸಿಜಿಕೆ ಕಲಿಸಿದವರು. ಅನೇಕ ಬರಹಗಾರರಿಗೆ ಒತ್ತಡ ತಂದು ಉತ್ತಮ ನಾಟಕಗಳನ್ನು ಬರೆಸುವಲ್ಲಿ ಯಶಸ್ವಿಯಾದವರು,’’ ಎಂದರು.
‘‘ತಳವಾರ ಜನಾಂಗದಿಂದ ಬಂದ, ಬಾಲ್ಯದಲ್ಲಿ ಕೀಳರಿಮೆ ಗಳನ್ನಿಟ್ಟುಕೊಂಡಿದ್ದ ಸಿಜಿಕೆ ಅವರು, ಕಮ್ಯೂನಿಸಂನಿಂದ ತಯಾರಾದರೂ ಎಲ್ಲಾ ವಾದ, ಸಿದ್ಧಾಂತಗಳನ್ನೂ ಒಳಗೊಂಡಿ ದ್ದರು. ಅವರು ನಾಟಕ ಮಾಡಿದರೆ ದಲಿತ, ರೈತ, ಮಾರ್ಕ್ಸ್‌ ವಾದಿ ಚಳವಳಿಗಳು ಅಲ್ಲೇ ಬರುತ್ತಿದ್ದವು. ಅವರಿಗೆ ಮಾಕ್ರ್ಸಿಸ್ಟ್‌ ರಾಜಕೀಯ, ಜೀವರಾಜ್‌ಆಳ್ವ ರಾಜಕಾರಣ, ಕಾಂಗ್ರೆಸ್‌ ರಾಜಕಾರಣದೊಂದಿಗೆ ಚಾಕು, ಚೈನು ರಾಜಕಾರಣವೂ ಗೊತ್ತಿತ್ತು,’’ಎಂದು ಹೇಳಿದರು.

‘‘ಸಂಘಟನೆಯಿಂದ ಟಿಕೆಟ್‌ ಮಾರುವವರೆಗೆ ಎಲ್ಲವೂ ರಂಗಭೂಮಿ ಕಾಯಕವೇ ಎಂದು ನಂಬಿದಂತಹವರು ಸಿಜಿಕೆ. ಸಮಾಜಕ್ಕೆ ಶಿಕ್ಷಕರಾಗಿ ಸಹಸ್ರಾರು ಜನರಿಗೆ ಗುರುಗಳಾಗಿದ್ದಾರೆ. ಕೇವಲ ಕಮ್ಯೂನಿಸಂ ಮಾತ್ರವಲ್ಲದೇ, ಎಲ್ಲ ಸಿದ್ಧಾಂತಗಳ, ಸಮುದಾಯಗಳ ಪ್ರಗತಿಪರರೊಡನೆ ಒಡನಾಟ ವನ್ನು ಹೊಂದಿದ್ದರು,’’ಎಂದು ನೆನೆದರು.
ರಂಗಕರ್ಮಿ ಎಚ್‌.ಜನಾರ್ದನ್‌ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಬಿ.ಎಂ.ರಾಮಚಂದ್ರ ಹಾಗೂ ಎಚ್‌.ಬಿ.ಯಶೋಧ ದಂಪತಿಗೆ ಸಿಜಿಕೆ ರಂಗ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕಸಾಪ ಜಿಲ್ಲಾ ಅಧ್ಯಕ್ಷ ವೈ.ಡಿ.ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ