ಆ್ಯಪ್ನಗರ

25 ಮಿಲಿಯನ್‌ ತಂಬಾಕು ಖರೀದಿಸಲಿ

​ತಂಬಾಕು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸಿದ್ದರೂ ಬೆಳೆಗಾರರಿಗೆ ಲಾಭ ವಾಗುತ್ತಿಲ್ಲ. ಹೀಗಾಗಿ ತಂಬಾಕಿನ ದರ ಕುಸಿತವಾದಾಗ ತಂಬಾಕು ಮಂಡಳಿಯೇ ಸ್ವತ: ಮಧ್ಯಪ್ರವೇಶಿಸಿ ಕನಿಷ್ಠ 25 ಮಿಲಿಯನ್‌ ತಂಬಾಕು ಖರೀದಿಸಲು ಮುಂದೆ ಬರಬೇಕು ಎಂದು ರಾಜ್ಯ ರೈತ ಸಂಘ ಒತ್ತಾಯಿಸಿದೆ.

Vijaya Karnataka 19 Oct 2019, 5:00 am
ಹುಣಸೂರು : ತಂಬಾಕು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸಿದ್ದರೂ ಬೆಳೆಗಾರರಿಗೆ ಲಾಭ ವಾಗುತ್ತಿಲ್ಲ. ಹೀಗಾಗಿ ತಂಬಾಕಿನ ದರ ಕುಸಿತವಾದಾಗ ತಂಬಾಕು ಮಂಡಳಿಯೇ ಸ್ವತ: ಮಧ್ಯಪ್ರವೇಶಿಸಿ ಕನಿಷ್ಠ 25 ಮಿಲಿಯನ್‌ ತಂಬಾಕು ಖರೀದಿಸಲು ಮುಂದೆ ಬರಬೇಕು ಎಂದು ರಾಜ್ಯ ರೈತ ಸಂಘ ಒತ್ತಾಯಿಸಿದೆ.
Vijaya Karnataka Web MYS18HUN1_45


ನಗರದ ಪ್ರವಾಸಿ ಮಂದಿರದಲ್ಲಿರೈತಸಂಘ ಮತ್ತು ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿಆಯೋಜಿಸಿದ್ದ ತಂಬಾಕು ಬೆಳೆಗಾರರ ಸಭೆ ನಡೆಯಿತು. ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ಲೋಕನಾಥ್‌ರಾಜೇ ಅರಸ್‌ ಮಾತನಾಡಿ, ''ತಂಬಾಕು ಮಾರುಕಟ್ಟೆ ಯಲ್ಲಿ15ಕ್ಕೂ ಹೆಚ್ಚು ಕಂಪನಿಗಳು ಖರೀದಿದಾರರಾಗಿ ಭಾಗವಹಿಸುತ್ತವೆ. ಈ ಪೈಕಿ ಐಟಿಸಿ ಕಂಪನಿ ಅತಿಹೆಚ್ಚಿನ ಪ್ರಮಾಣದಲ್ಲಿಖರೀದಿಸುತ್ತಿದೆ. ತಂಬಾಕು ಖರೀದಿ ಯಿಂದ ಐಟಿಸಿ ಕಂಪನಿ ನಿವ್ವಳ 1300 ಕೋಟಿ ರೂ. ಲಾಭ ಗಳಿಸುತ್ತಿದ್ದು, ಖರೀದಿ ಯಲ್ಲಿದೊಡ್ಡಣ್ಣ ನಂತೆ ವರ್ತಿಸುತ್ತಾ, ಬೆಳೆಗಾರರನ್ನು ಶೋಷಣೆ ಮಾಡುತ್ತಿದೆ,'' ಎಂದು ಆರೋಪಿಸಿದರು.

''ಬೆಳೆಗಾರರು ಚುನಾಯಿತ ಪ್ರತಿನಿಧಿಗಳನ್ನು ನಂಬಿ ಕುಳಿತರೆ ಪ್ರಯೋಜನವಿಲ್ಲ. ರೈತ ಸಂಘಟನೆಗಳು ಸಂಘಟಿತ ಹೋರಾಟ ನಡೆಸಿ ತಂಬಾಕು ಮಂಡಳಿ ಹಾಗೂ ಸರಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ,'' ಎಂದರು. ರೈತ ಸಂಘದ ಜಿಲ್ಲಾಧ್ಕಕ್ಷ ಹೊಸೂರು ಕುಮಾರ್‌ ಮಾತನಾಡಿ, ''ತಂಬಾಕು ಪ್ಲಾಟ್‌ಫಾರಂಗಳಲ್ಲಿಕೆಲ ಸಮಯ ಉಂಟಾಗುವ ಬಿಗುವಿನ ವಾತಾವರಣ ತಿಳಿಗೊಳಿಸಲು ಹಾಗೂ ರೈತರಿಗೆ ನೈತಿಕ ಧೈರ್ಯ ತುಂಬಲು ಪೊಲೀಸ್‌ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಹಳ್ಳಿಗಳಲ್ಲಿತಂಬಾಕು ಹುಡಿಯನ್ನ ಖಾಸಗಿ ವ್ಯಕ್ತಿಗಳು ಖರೀದಿ ನಡೆಯುತ್ತಿದ್ದು, ಇದರಿಂದ ರೈತರಿಗೆ ನ್ಯಾಯಯುತ ದರ ಸಿಗದೇ ಅನ್ಯಾಯವಾಗುತ್ತಿದೆ. ಬದಲಾಗಿ ಮಂಡಳಿಯೇ ತಿಂಗಳಿಗೊಂದು ದಿನ ಹುಡಿ ಖರೀದಿ ದಿನವನ್ನಾಗಿ ಆಯೋಜಿಸ ಬೇಕು,'' ಎಂದು ಹೇಳಿದರು.

ಮುಖಂಡ ವಿಷಕಂಠಪ್ಪ ಮಾತನಾಡಿ, ''ಪ್ರಸ್ತುತ ವರ್ಷ ಇಲ್ಲಿಯವರೆಗೆ ಸರಾಸರಿ ಕೆಜಿ ತಂಬಾಕಿಗೆ 143 ರೂ. ದೊರಕಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸಂಸದ ಹಾಗೂ ರಾಜ್ಯ ಸರಕಾರ ನೊಂದ ತಂಬಾಕು ಬೆಳೆಗಾರರ ಪರವಾಗಿ ನಿಲ್ಲಬೇಕಿದೆ,'' ಎಂದು ಒತ್ತಾಯಿಸಿದರು. ಕಟ್ಟೆಮಳಲವಾಡಿಯ ತಂಬಾಕು ಮಂಡಳಿಯ ಹರಾಜು ಅಧೀಕ್ಷಕರಾದ ವೀರಭದ್ರನಾಯ್ಕ, ದಿನೇಶ್‌ ಹಾಗೂ ಪುರುಷೋತ್ತಮರಾಜೇ ಅರಸ್‌ರಿಗೆ ಬೆಳೆಗಾರರ ಸಂಕಷ್ಟವನ್ನು ಮನವರಿಕೆ ಮಾಡಿಕೊಟ್ಟು, ಬೆಳೆಗಾರರ ಪರ ನಿಲ್ಲಬೇಕೆಂಬ ಬೇಡಿಕೆಯುಳ್ಳ ಮನವಿ ಸಲ್ಲಿಸ ಲಾಯಿತು. ರೈತ ಸಂಘದ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ತಂಬಾಕು ಬೆಳೆಗಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮೋದೂರು ಶಿವಣ್ಣ, ಗೌರವಾಧ್ಯಕ್ಷ ಉಂಡುವಾಡಿ ಸಿ.ಚಂದ್ರೇಗೌಡ, ಪ್ರಧಾನ ಕಾರ್ಯದರ್ಶಿ ನಿಲುವಾಗಿಲು ಪ್ರಭಾಕರ್‌, ರೈತ ಸಂಘದ ಪ್ರಧಾನ ಕಾರ‍್ಯದರ್ಶಿ ಅಗ್ರಹಾರ ರಾಮೇ ಗೌಡ, ಮುಖಂಡರಾದ ಜಯಣ್ಣ, ಮಹದೇವ್‌, ರಮೇಶ್‌, ಕಾಳೇಗೌಡ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ