ಆ್ಯಪ್ನಗರ

ಮಕ್ಕಳ ಬೌದ್ಧಿಕ ಮನಸ್ಥಿತಿಗೆ ಹೊಂದುವ ಪಠ್ಯವಿರಲಿ

ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಹೋಂ ಹೋರ್ಕ್‌ಗಳನ್ನು ನೀಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೊಹಮ್ಮದ್ ಮುಜೀರ್ ಉಲ್ಲಾ ಸಲಹೆ ನೀಡಿದರು.

Vijaya Karnataka 11 Jan 2018, 5:16 am
ಮೈಸೂರು: ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಹೋಂ ಹೋರ್ಕ್‌ಗಳನ್ನು ನೀಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೊಹಮ್ಮದ್ ಮುಜೀರ್ ಉಲ್ಲಾ ಸಲಹೆ ನೀಡಿದರು.
Vijaya Karnataka Web lets have a childs intellectual mood
ಮಕ್ಕಳ ಬೌದ್ಧಿಕ ಮನಸ್ಥಿತಿಗೆ ಹೊಂದುವ ಪಠ್ಯವಿರಲಿ


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜೆಎಸ್‌ಎಸ್ ನರ್ಸಿಂಗ್ ಕಾಲೇಜು ಸಹಯೋಗದಲ್ಲಿ ನಗರದ ಜೆಎಸ್‌ಎಸ್ ಆವರಣದ ರಾಜೇಂದ್ರಭವನದಲ್ಲಿ ಆಯೋಜಿಸಿದ್ದ ‘ಮಕ್ಕಳ ಹಕ್ಕುಗಳು ಮತ್ತು ಕಾಯಿದೆ, ದತ್ತು ಪ್ರಕ್ರಿಯೆಯಲ್ಲಿ ಆಸ್ಪತ್ರೆಗಳ ಪಾತ್ರ, ಪೋಕ್ಸೋ ಕಾಯಿದೆ- 2012, ಪಿಸಿಪಿಎನ್‌ಡಿಟಿ ಕಾಯಿದೆ, ಎಂಟಿಪಿ ಕಾಯಿದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯಿದೆ-2016’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘‘ಮಕ್ಕಳ ರಕ್ಷಣೆಯಲ್ಲಿ ಮುಖ್ಯವಾಗಿ ನರ್ಸ್‌ಗಳು ಹಾಗೂ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ. ಆದರಿಂದ ನಸ್‌ರ್ಂಗ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಈ ರೀತಿಯ ಕಾರ್ಯಾಗಾರ ಆಯೋ ಜಿರುವುದು ಶ್ಲಾಘನೀಯ,’’ಎಂದರು.

‘‘ಇಂದಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿ, ಮಕ್ಕಳನ್ನು ಸೃಜನಶೀಲರಾಗಿ ಮಾತನಾಡಬೇಕೆಂದು ಶಿಕ್ಷಕರು ಮಕ್ಕಳ ಸಾಮರ್ಥ್ಯಕ್ಕೂ ಮೀರಿದ ಮನೆ ಪಾಠ ನೀಡುತ್ತಿರುವ ಶಿಕ್ಷಣ ವ್ಯವಸ್ಥೆಯಿಂದಾಗಿ ಪೋಷಕರ ಬೌದ್ಧಿಕ ಮಟ್ಟ ಬೆಳೆಯುತ್ತಿದೆ. ಆದರೆ, ಮಕ್ಕಳ ಬೌದ್ಧಿಕ ಸಾಮರ್ಥ್ಯ ಕುಸಿಯುತ್ತಿದೆ. ಶಿಕ್ಷಣ ಸಂಸ್ಥೆಗಳು ನೀಡುತ್ತಿರುವ ಮನೆ ಪಾಠವನ್ನು ಪೋಷಕರೇ ಹೆಚ್ಚು ಮಾಡುತ್ತಿ ದ್ದಾರೆ. ಇದರಿಂದ ಪ್ರಯೋಜನವಿಲ್ಲ. ಮಕ್ಕಳ ಬೌದ್ಧಿಕ ಮನಸ್ಥಿತಿಗೆ ಅನುಗುಣ ವಾಗಿ ಪಠ್ಯಗಳನ್ನು ರಚಿಸಬೇಕು. ಜತೆಗೆ ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಕಡೆ ಗಮನ ಹರಿಸಬೇಕು,’’ ಎಂದರು.

‘‘ಮಕ್ಕಳ ಪೋಷಣೆಯಲ್ಲಿ ನರ್ಸ್ ಹಾಗೂ ವೈದ್ಯರ ಪಾತ್ರ ಪ್ರಮುಖ ವಾಗಿದೆ. ಮಕ್ಕಳಿಗಾಗಿಯೇ ಹಲವು ಕಾನೂನು ಸೇವೆಗಳಿದ್ದು, ಅವುಗಳನ್ನು ವೈದ್ಯರು ತಿಳಿಸಿಕೊಡುವ ಕೆಲಸವನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಸದಾಕಾಲ ಒಡನಾಟದಲ್ಲಿರುವಂತೆ,’’ ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಕೆ ಉಪನಿರ್ದೇಶಕಿ ಕೆ.ರಾಧಾ ಮಾತನಾಡಿ, ‘‘ಮಗು ಬೇಕು ಎಂಬ ಆಸೆಯಲ್ಲಿ ಸಂಬಂಧಿಕರ ಮಗುವನ್ನು ತೆಗದುಕೊಂಡು ಸಾಕುತ್ತಾರೆ. ಆದರೆ ಹಾಗೇ ಮಗು ತೆಗದುಕೊಳ್ಳುವುದು ಅಪರಾಧ. ಕಾನೂನು ಮೂಲಕ ದತ್ತು ಪಡೆದುಕೊಳ್ಳಬೇಕು. ಮೈಸೂರಿನಲ್ಲಿ 16 ಮಾನವ ಸಾಗಣಿಕ ಪ್ರಕರಣ ದಾಖಲಾಗಿದೆ. ಇದುವರೆಗೆ ಇತ್ಯರ್ಥ ಕೊಂಡಿಲ್ಲ. ಆದರಿಂದ ಆಸ್ಪತ್ರೆ ಮಗು ಜನನ ಸಮಯದಲ್ಲಿ ನರ್ಸ್‌ಗಳು ಎಚ್ಚರಿಕೆವಹಿಸಬೇಕು,’’ ಎಂದರು.

ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ದೇಶಕ ಡಾ.ಎಂ.ಡಿ. ರವಿ, ಜೆ.ಎಸ್.ಎಸ್ ಕಾನೂನು ಕಾಲೇಜು ಮುಖ್ಯ ಕಾರ್ಯನಿರ್ವಾಹಕ ಸುರೇಶ್, ಪ್ರಾಂಶುಪಾಲ
ಪ್ರೊ.ಶೀಲಾ ವಿಲಿಯಮ್ಸ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೊಬೆಷನ್ ಅಧಿಕಾರಿ ಶ್ರೀನಿವಾಸರಾಜೇ ಅರಸ್, ವೆಂಕಟೇಶ್ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ