ಮೈಸೂರು: ದಸರಾ ಮಹೋತ್ಸವಕ್ಕೆ ಆನೆಗಳೊಂದಿಗೆ ಮೈಸೂರಿಗೆ ಆಗಮಿಸಿರುವ ಮಾವುತರ ಮಕ್ಕಳ ಓದಿಗೆ ಅನುಕೂಲವಾಗುವಂತೆ ಪ್ರತಿ ಬಾರಿಯಂತೆ ಈ ಸಲವೂ ಟೆಂಟ್ ಗ್ರಂಥಾಲಯ ಆರಂಭಿಸಲಾಗಿದೆ.
ಮೈಸೂರು ಅರಮನೆ ಆವರಣದಲ್ಲಿಬೀಡು ಬಿಟ್ಟಿರುವ ಮಾವುತರು, ಅವರ ಕುಟುಂಬ ಹಾಗೂ ಮಕ್ಕಳ ಜ್ಞಾನಾರ್ಜನೆಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮೈಸೂರು ನಗರ ಕೇಂದ್ರ ಗ್ರಂಥಾಲಯವು ಟೆಂಟ್ ಗ್ರಂಥಾಲಯವನ್ನು ತಾತ್ಕಾಲಿಕವಾಗಿ ನಿರ್ಮಿಸಿದೆ. ಮಾವುತರು ಹಾಗೂ ಅವರ ಕುಟುಂಬದವರಿಗೆ ಮಾತ್ರವಲ್ಲದೆ ಹೆಚ್ಚಾಗಿ ಅವರ ಮಕ್ಕಳಿಗೆ ಪುಸ್ತಕ ಪ್ರಪಂಚ ಪರಿಚಯ ಮಾಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಟೆಂಟ್ ಗ್ರಂಥಾಲಯದಲ್ಲಿಮಕ್ಕಳ ಕಥೆಗಳು, ಸ್ವಾತಂತ್ರ್ಯ ಹೋರಾಟಗಾರರು, ಗೌತಮ ಬುದ್ಧ, ಗಾಂಧೀಜಿ ಇತರೆ ಮಹಾನೀಯರ ಪುಸ್ತಕಗಳಿವೆ.
ದಿನಪತ್ರಿಕೆ ಹಾಗೂ ಮಕ್ಕಳ ನಿಯತಕಾಲಿಕೆಗಳನ್ನು ಒದಗಿಸಲಾಗುತ್ತಿದೆ. 200 ಪುಸ್ತಕಗಳನ್ನು ಮಕ್ಕಳಿಗೆ ಪರಿಚಯಿಸುವುದರ ಜತೆಗೆ ಮಕ್ಕಳಲ್ಲಿಓದುವ ಹವ್ಯಾಸವನ್ನು ಬೆಳೆಸುವುದು, ಬಳಕೆ, ಸಂಗ್ರಹಣೆ, ಪುಸ್ತಕಗಳನ್ನು ಗುರುತಿಸುವುದು, ಮುಂತಾದ ಹಲವಾರು ವಿಷಯಗಳಲ್ಲಿಮಾಹಿತಿ ನೀಡುವ ಚುಟುವಟಿಕೆ ಗ್ರಂಥಾಲಯದಲ್ಲಿನಡೆಯಲಿದೆ. ಇಲಾಖಾ ಸಿಬ್ಬಂದಿಗಳು, ಹಾಗೂ ಇತರರು ಈ ಸಂಬಂಧ ಪ್ರತಿನಿತ್ಯ ಟೆಂಟ್ ಗ್ರಂಥಾಲಯದಲ್ಲಿಮಕ್ಕಳಿಗೆ ವಿಭಿನ್ನ ಚಟುವಟಿಕೆಗಳನ್ನು ಪರಿಚಯಿಸುತ್ತಾರೆ.
ಮೈಸೂರು ಅರಮನೆ ಆವರಣದಲ್ಲಿಬೀಡು ಬಿಟ್ಟಿರುವ ಮಾವುತರು, ಅವರ ಕುಟುಂಬ ಹಾಗೂ ಮಕ್ಕಳ ಜ್ಞಾನಾರ್ಜನೆಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮೈಸೂರು ನಗರ ಕೇಂದ್ರ ಗ್ರಂಥಾಲಯವು ಟೆಂಟ್ ಗ್ರಂಥಾಲಯವನ್ನು ತಾತ್ಕಾಲಿಕವಾಗಿ ನಿರ್ಮಿಸಿದೆ. ಮಾವುತರು ಹಾಗೂ ಅವರ ಕುಟುಂಬದವರಿಗೆ ಮಾತ್ರವಲ್ಲದೆ ಹೆಚ್ಚಾಗಿ ಅವರ ಮಕ್ಕಳಿಗೆ ಪುಸ್ತಕ ಪ್ರಪಂಚ ಪರಿಚಯ ಮಾಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಟೆಂಟ್ ಗ್ರಂಥಾಲಯದಲ್ಲಿಮಕ್ಕಳ ಕಥೆಗಳು, ಸ್ವಾತಂತ್ರ್ಯ ಹೋರಾಟಗಾರರು, ಗೌತಮ ಬುದ್ಧ, ಗಾಂಧೀಜಿ ಇತರೆ ಮಹಾನೀಯರ ಪುಸ್ತಕಗಳಿವೆ.
ದಿನಪತ್ರಿಕೆ ಹಾಗೂ ಮಕ್ಕಳ ನಿಯತಕಾಲಿಕೆಗಳನ್ನು ಒದಗಿಸಲಾಗುತ್ತಿದೆ. 200 ಪುಸ್ತಕಗಳನ್ನು ಮಕ್ಕಳಿಗೆ ಪರಿಚಯಿಸುವುದರ ಜತೆಗೆ ಮಕ್ಕಳಲ್ಲಿಓದುವ ಹವ್ಯಾಸವನ್ನು ಬೆಳೆಸುವುದು, ಬಳಕೆ, ಸಂಗ್ರಹಣೆ, ಪುಸ್ತಕಗಳನ್ನು ಗುರುತಿಸುವುದು, ಮುಂತಾದ ಹಲವಾರು ವಿಷಯಗಳಲ್ಲಿಮಾಹಿತಿ ನೀಡುವ ಚುಟುವಟಿಕೆ ಗ್ರಂಥಾಲಯದಲ್ಲಿನಡೆಯಲಿದೆ. ಇಲಾಖಾ ಸಿಬ್ಬಂದಿಗಳು, ಹಾಗೂ ಇತರರು ಈ ಸಂಬಂಧ ಪ್ರತಿನಿತ್ಯ ಟೆಂಟ್ ಗ್ರಂಥಾಲಯದಲ್ಲಿಮಕ್ಕಳಿಗೆ ವಿಭಿನ್ನ ಚಟುವಟಿಕೆಗಳನ್ನು ಪರಿಚಯಿಸುತ್ತಾರೆ.