ಮೈಸೂರು : ನಗರ ಪ್ರದೇಶದಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಿಸುವ ದೃಷ್ಟಿಯಿಂದ ಫೆ.23 ,24ರಂದು ಹಾಗೂ ಮಾರ್ಚ್ 1,2ರಂದು ಮಿಂಚಿನ ಮತದಾನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
''ಜಿಲ್ಲೆಯ ಈ ಹಿಂದಿನ ಮತದಾನ ಪ್ರಮಾಣವನ್ನು ಗಮನಿಸಿದರೆ, ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶದಲ್ಲಿ ಮತದಾನ ಕಡಿಮೆಯಾಗಿದೆ. ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿರುವ ನಗರ ಪ್ರದೇಶಗಳಲ್ಲೇ ಮತದಾನ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಚುನಾವಣೆ ಆಯೋಗ, ನಗರ ಪ್ರದೇಶದಲ್ಲಿ ಯುವಕರ ಮತದಾನ ಪ್ರಮಾಣವನ್ನು ಹೆಚ್ಚಿಸಲು ಸೂಚನೆ ನೀಡಿದೆ. ಅಂತೆಯೆ ನಗರ ವ್ಯಾಪ್ತಿಯ 18, 19 ವರ್ಷ ವಯಸ್ಸಿನ ಯುವಕರು ಹೊಸದಾಗಿ ಮತದಾನದ ಹಕ್ಕು ಪಡೆಯುವವರನ್ನೆ ಗುರಿಯಾಗಿಸಿಕೊಂಡು ನಗರ ವ್ಯಾಪ್ತಿಯ 2091 ಬೂತ್ಗಳಲ್ಲೂ ಫೆ.23 ,24ರಂದು ಹಾಗೂ ಮಾರ್ಚ್ 1,2ರಂದು ಮಿಂಚಿನ ಮತದಾನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,'' ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
''ವಿಶೇಷ ನೋಂದಣಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಫೆ.23,24ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಗರ ವ್ಯಾಪ್ತಿಯ ಎಲ್ಲಾ ಬೂತ್ಮಟ್ಟದ ಅಧಿಧಿಕಾರಿಗಳು ಕೆಲಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಯುವಕರು ತಮ್ಮ ಬೂತ್ಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ, ಹೊಸ ನೋಂದಣಿ, ವಿಳಾಸ ಬದಲಾವಣೆ ಮಾಡಿಸಿಕೊಳ್ಳಬೇಕು,'' ಎಂದು ಮನವಿ ಮಾಡಿದರು.
''ಮತದರಾರರು ಕೇವಲ ಮತದಾರರ ಗುರುತಿನ ಚೀಟಿ ಇದ್ದ ಮಾತ್ರಕ್ಕೆ ಮತ ಮಾಡಬಹುದು ಎಂದು ತಿಳಿದುಕೊಳ್ಳಬಾರದು, ಅದಕ್ಕೂ ಮುನ್ನ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಒಂದು ವೇಳೆ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲವಾದರೆ ನೋಂದಣಿ ಮಾಡಿಕೊಳ್ಳಬೇಕೆಂದರು.
ದೂರು ನೀಡಲು ಆ್ಯಪ್: ಮತದಾರರು ಚುನಾವಣೆಗೆ ಸಂಬಂಧಿಧಿಸಿದ ದೂರು ಸಲ್ಲಿಸಲು 1950 ಸಹಾಯವಾಣಿ ಕಾರ್ಯಾರಂಭಿಸಲಾಗಿದೆ. ಇದೇ ಮೊದಲ ಬಾರಿಗೆ ಮತದಾರರು ದೂರು ನೀಡಲು ಸಿ-ವಿಜಿಲ್ ಎಂಬ ಆ್ಯಪ್ ಹೊರತಂದಿದೆ. ಜಿಪಿಎಸ್ ಮತ್ತು ಇಂಟರ್ನೆಟ್ ಸಹಾಯದಿಂದ ಈ ಆ್ಯಪ್ ಕೆಲಸ ಮಾಡಲಿದೆ. ಮತದಾರರು ಚುನಾವಣೆ ಅಕ್ರಮ ಸೇರಿದಂತೆ ಚುನಾವಣೆ ಸಂಬಂಧಿಧಿಸಿದ ಫೋಟೊ, ವೀಡಿಯೊಗಳನ್ನು ಇ ಆ್ಯಪ್ನಲ್ಲಿ ಅಪ್ಲೋಡ್ ಮಾಡಬಹುದು. ಅವುಗಳು ಜಿಲ್ಲಾ ಚುನಾವಣಾಧಿಕಾರಿಗಳ ವೆಬ್ಸೈಟ್ನ ಡ್ಯಾಶ್ಬೋರ್ಡ್ಗೆ ಬರಲಿವೆ.
ಬಳಿಕ ಸಂಬಂಧಿಧಿಸಿದ ಅಧಿಧಿಕಾರಿಗಳು ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವರು. ನೀಡಿದ ದೂರಿಗೆ ಸಂಬಂಧಿಧಿಸಿದಂತೆ ಕ್ರಮ ಕೈಗೊಳ್ಳುವ ಪ್ರತಿಯೊಂದು ಹಂತದಲ್ಲೂ ಮತದಾರರಿಗೆ ಮಾಹಿತಿ ದೊರೆಯಲಿದೆ. ಆ್ಯಂಡ್ರಾಯಿಡ್ ಮೊಬೈಲ್ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
''ಜಿಲ್ಲೆಯ ಈ ಹಿಂದಿನ ಮತದಾನ ಪ್ರಮಾಣವನ್ನು ಗಮನಿಸಿದರೆ, ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶದಲ್ಲಿ ಮತದಾನ ಕಡಿಮೆಯಾಗಿದೆ. ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿರುವ ನಗರ ಪ್ರದೇಶಗಳಲ್ಲೇ ಮತದಾನ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಚುನಾವಣೆ ಆಯೋಗ, ನಗರ ಪ್ರದೇಶದಲ್ಲಿ ಯುವಕರ ಮತದಾನ ಪ್ರಮಾಣವನ್ನು ಹೆಚ್ಚಿಸಲು ಸೂಚನೆ ನೀಡಿದೆ. ಅಂತೆಯೆ ನಗರ ವ್ಯಾಪ್ತಿಯ 18, 19 ವರ್ಷ ವಯಸ್ಸಿನ ಯುವಕರು ಹೊಸದಾಗಿ ಮತದಾನದ ಹಕ್ಕು ಪಡೆಯುವವರನ್ನೆ ಗುರಿಯಾಗಿಸಿಕೊಂಡು ನಗರ ವ್ಯಾಪ್ತಿಯ 2091 ಬೂತ್ಗಳಲ್ಲೂ ಫೆ.23 ,24ರಂದು ಹಾಗೂ ಮಾರ್ಚ್ 1,2ರಂದು ಮಿಂಚಿನ ಮತದಾನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,'' ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
''ವಿಶೇಷ ನೋಂದಣಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಫೆ.23,24ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಗರ ವ್ಯಾಪ್ತಿಯ ಎಲ್ಲಾ ಬೂತ್ಮಟ್ಟದ ಅಧಿಧಿಕಾರಿಗಳು ಕೆಲಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಯುವಕರು ತಮ್ಮ ಬೂತ್ಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ, ಹೊಸ ನೋಂದಣಿ, ವಿಳಾಸ ಬದಲಾವಣೆ ಮಾಡಿಸಿಕೊಳ್ಳಬೇಕು,'' ಎಂದು ಮನವಿ ಮಾಡಿದರು.
''ಮತದರಾರರು ಕೇವಲ ಮತದಾರರ ಗುರುತಿನ ಚೀಟಿ ಇದ್ದ ಮಾತ್ರಕ್ಕೆ ಮತ ಮಾಡಬಹುದು ಎಂದು ತಿಳಿದುಕೊಳ್ಳಬಾರದು, ಅದಕ್ಕೂ ಮುನ್ನ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಒಂದು ವೇಳೆ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲವಾದರೆ ನೋಂದಣಿ ಮಾಡಿಕೊಳ್ಳಬೇಕೆಂದರು.
ದೂರು ನೀಡಲು ಆ್ಯಪ್: ಮತದಾರರು ಚುನಾವಣೆಗೆ ಸಂಬಂಧಿಧಿಸಿದ ದೂರು ಸಲ್ಲಿಸಲು 1950 ಸಹಾಯವಾಣಿ ಕಾರ್ಯಾರಂಭಿಸಲಾಗಿದೆ. ಇದೇ ಮೊದಲ ಬಾರಿಗೆ ಮತದಾರರು ದೂರು ನೀಡಲು ಸಿ-ವಿಜಿಲ್ ಎಂಬ ಆ್ಯಪ್ ಹೊರತಂದಿದೆ. ಜಿಪಿಎಸ್ ಮತ್ತು ಇಂಟರ್ನೆಟ್ ಸಹಾಯದಿಂದ ಈ ಆ್ಯಪ್ ಕೆಲಸ ಮಾಡಲಿದೆ. ಮತದಾರರು ಚುನಾವಣೆ ಅಕ್ರಮ ಸೇರಿದಂತೆ ಚುನಾವಣೆ ಸಂಬಂಧಿಧಿಸಿದ ಫೋಟೊ, ವೀಡಿಯೊಗಳನ್ನು ಇ ಆ್ಯಪ್ನಲ್ಲಿ ಅಪ್ಲೋಡ್ ಮಾಡಬಹುದು. ಅವುಗಳು ಜಿಲ್ಲಾ ಚುನಾವಣಾಧಿಕಾರಿಗಳ ವೆಬ್ಸೈಟ್ನ ಡ್ಯಾಶ್ಬೋರ್ಡ್ಗೆ ಬರಲಿವೆ.
ಬಳಿಕ ಸಂಬಂಧಿಧಿಸಿದ ಅಧಿಧಿಕಾರಿಗಳು ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವರು. ನೀಡಿದ ದೂರಿಗೆ ಸಂಬಂಧಿಧಿಸಿದಂತೆ ಕ್ರಮ ಕೈಗೊಳ್ಳುವ ಪ್ರತಿಯೊಂದು ಹಂತದಲ್ಲೂ ಮತದಾರರಿಗೆ ಮಾಹಿತಿ ದೊರೆಯಲಿದೆ. ಆ್ಯಂಡ್ರಾಯಿಡ್ ಮೊಬೈಲ್ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.