ಆ್ಯಪ್ನಗರ

ಸಾಹಿತ್ಯ, ಸಂಸ್ಕೃತಿ ಸಂಬಂಧ ಸ್ತಬ್ಧಚಿತ್ರವಿರಲಿ

ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸ್ತಬ್ಧಚಿತ್ರಗಳನ್ನು ಮಾತ್ರ ತಯಾರು ಮಾಡಬೇಕು ಎಂದು ಶಾಸಕ ಅನಿಲ್‌ ಚಿಕ್ಕಮಾದು ತಿಳಿಸಿದರು.

Vijaya Karnataka 28 Sep 2019, 5:00 am
ಎಚ್‌.ಡಿ.ಕೋಟೆ : ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸ್ತಬ್ಧಚಿತ್ರಗಳನ್ನು ಮಾತ್ರ ತಯಾರು ಮಾಡಬೇಕು ಎಂದು ಶಾಸಕ ಅನಿಲ್‌ ಚಿಕ್ಕಮಾದು ತಿಳಿಸಿದರು.
Vijaya Karnataka Web MYS27HDK2C_45


ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿನಡೆದ ಗ್ರಾಮೀಣಾ ದಸರಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿಅಧಿಕಾರಿಗಳು ಮತ್ತು ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಸರಕಾರ ಪುರಸಭೆ ಮಟ್ಟಕ್ಕೆ 1 ಲಕ್ಷ ರೂ. ಕೊಡಲಿದೆ. ಸ್ತಬ್ಧಚಿತ್ರ ತಯಾರಿಕೆಗೆ 10 ಸಾವಿರ ಮತ್ತು ಉತ್ತಮವಾದ ಸ್ತಬ್ಧಚಿತ್ರಕ್ಕೆ ಮೂರು ಬಹುಮಾನಗಳನ್ನು ಕೊಡೋಣ. ಯಾವುದೇ ಕಾರಣಕ್ಕೂ ಕಾಟಾಚಾರಕ್ಕೆ ಸ್ತಬ್ಧಚಿತ್ರಗಳನ್ನು ತಯಾರು ಮಾಡುವುದು ಬೇಡ. ಕೃಷಿ, ರೇಷ್ಮೆ, ಪಶು ಇಲಾಖೆ ವತಿಯಿಂದ ದಸರಾ ನಡೆಯುವ ವಸ್ತು ಪ್ರದರ್ಶನವನ್ನು ಏರ್ಪಡಿಸುತ್ತದೆ. ಇದರೊಂದಿಗೆ ಉತ್ತಮ ಸ್ತಬ್ಧ ಚಿತ್ರವನ್ನು ತಯಾರು ಮಾಡಬೇಕು. ಇವರೊಂದಿಗೆ ಆರೋಗ್ಯ, ಪುರಸಭೆ, ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾಪಂಚಾಯಿತಿ ವತಿಯಿಂದ ಒಟ್ಟು 10 ಸ್ತಬ್ಧ ಚಿತ್ರಗಳನ್ನು ನಿರ್ಮಾಣ ಆಗಬೇಕು ಎಂದರು.

ದಸರಾ ನಡೆಯುವ 10 ದಿನಗಳ ಕಾಲ ಪಟ್ಟಣದಲ್ಲಿರುವ ಎಲ್ಲಾಸರಕಾರಿ ಕಚೇರಿಗಳಲ್ಲಿದೀಪಾಲಾಂಕರ ಮಾಡಿರಬೇಕು. ಪುರಸಭೆಯವರು ಪಟ್ಟಣವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ದಸರಾ ನಡೆಯುವ ದಿನ ಎಲ್ಲಾರೀತಿಯ ಕಲಾ ತಂಡಗಳಾದ ನಂದಿ ಧ್ವಜ, ವೀರಗಾಸೆ, ಕಂಸಾಳೆ, ಸತ್ತಿಗೆ, ನಗಾರಿ ಮತ್ತು ತಮಟೆ ಸೇರಿದಂತೆ ಎಲ್ಲಾಕಲಾತಂಡಗಳು ಭಾಗವಹಿಸಬೇಕು, ದಸರಾ ಆಚರಣೆಯ ಯಶಸ್ವಿಗೆ ಎಲ್ಲಾಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರ ಕೊಡಬೇಕು ಎಂದರು.

ತಹಸೀಲ್ದಾರ್‌ಗಳಾದ ಮಂಜುನಾಥ್‌, ಬಸವರಾಜ್‌ ಚಿಗರಿ, ಜಿಲ್ಲಾಪಂಚಾಯಿತಿ ಸದಸ್ಯ ವೆಂಕಟಸ್ವಾಮಿ, ತಾಲೂಕು ಪಂಚಾಯಿತಿ ಸದಸ್ಯರಾದ ಸ್ಟಾನ್ಲಿಬ್ರಿಟೋ, ಅಂಕನಾಯಕ, ಪುರಸಭೆ ಸದಸ್ಯರಾದ ಎಚ್‌.ಸಿ. ನರಸಿಂಹಮೂರ್ತಿ, ಮಧುಕುಮಾರ್‌, ಮುಖಂಡರಾದ ಎಂ.ಸಿ. ದೊಡ್ಡನಾಯಕ, ಬಸವರಾಜು, ಶಂಭೂ ಲಿಂಗನಾಯಕ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ