ಆ್ಯಪ್ನಗರ

ಮೋದಿ ಟೀಕಿಸುವವರಿಗೆ ದೇಶದ್ರೋಹಿ ಪಟ್ಟ: ತರಾಟೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಟೀಕಿಸುವವರಿಗೆ ದೇಶದ್ರೋಹಿಪಟ್ಟ ಕಟ್ಟಲಾಗುತ್ತಿದ್ದು, ಇವರಿಗೆ ಈ ಅಧಿಕಾರವನ್ನು ಕೊಟ್ಟವರು ಯಾರು ಎಂದು ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್‌ ಖಾನ್‌ ತರಾಟೆಗೆ ತೆಗೆದುಕೊಂಡರು.

Vijaya Karnataka 11 Apr 2019, 5:00 am
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಟೀಕಿಸುವವರಿಗೆ ದೇಶದ್ರೋಹಿಪಟ್ಟ ಕಟ್ಟಲಾಗುತ್ತಿದ್ದು, ಇವರಿಗೆ ಈ ಅಧಿಕಾರವನ್ನು ಕೊಟ್ಟವರು ಯಾರು ಎಂದು ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್‌ ಖಾನ್‌ ತರಾಟೆಗೆ ತೆಗೆದುಕೊಂಡರು.
Vijaya Karnataka Web lok sabha election 2109
ಮೋದಿ ಟೀಕಿಸುವವರಿಗೆ ದೇಶದ್ರೋಹಿ ಪಟ್ಟ: ತರಾಟೆ


ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಮೋದಿ ಅವರನ್ನು ಟೀಕಿಸುವಂತಿಲ್ಲ. ಬಿಜೆಪಿಯ ಕೃತ್ಯವನ್ನು ಖಂಡಿಸುವಂತಿಲ್ಲ. ಒಂದು ವೇಳೆ ಟೀಕಿಸಿದರೆ ದೇಶ ದ್ರೋಹಿ ಎಂದು ಹೇಳುತ್ತಾರೆ. ಈ ರೀತಿ ಆರೋಪ ಹೊರಿಸಲು ಈ ಮೋದಿ ಯಾರು? ಅವರಿಗೆ ಅಧಿಕಾರ ನೀಡಿದವರು ಯಾರು'' ಎಂದು ಪ್ರಶ್ನಿಸಿದರು.

''ನರೇಂದ್ರ ಮೋದಿ ರಾಷ್ಟ್ರೀಯ ಭದ್ರತೆ ವಿಷಯವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸೈನಿಕರು ದೇಶಕ್ಕಾಗಿ ಬಲಿದಾನ ಮಾಡಿದರೆ ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಪ್ರಧಾನಿ ಸೈನಿಕರ ಬಲಿದಾನಕ್ಕೆ ಮಾಡುತ್ತಿರುವ ಅವಮಾನ. ಜನರ ಭಾವನೆಗಳನ್ನು ಕೆರಳಿಸಿ ರಾಜಕೀಯ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಒಂದು ರೀತಿಯ ಭಯದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಭಯೋತ್ಪಾದಕತೆಯ ವಿಷಯದಲ್ಲಿ ಅವರೊಬ್ಬರೇ ಹೋರಾಟ ಮಾಡುತ್ತಿಲ್ಲ. 20 ವರ್ಷಗಳಿಂದ ಕಾಂಗ್ರೆಸ್‌ ಇದರ ವಿರುದ್ಧ ಹೋರಾಟ ನಡೆಸುತ್ತಿದೆ'' ಎಂದು ಹೇಳಿದರು.

''ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮತ ಬ್ಯಾಂಕ್‌ ಪಾಕಿಸ್ತಾನದಲ್ಲಿಯೇ ಎಂದು ಪ್ರಧಾನಿ ಕೇಳುತ್ತಿದ್ದಾರೆ. ನರೇಂದ್ರ ಮೋದಿ ಬಿಜೆಪಿಯ ನಾಯಕರಲ್ಲ. ಅವರು ದೇಶದ ಪ್ರಧಾನಿ. ಒಬ್ಬ ಪ್ರಧಾನಿ ಇಂತಹ ಮಾತನಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಆದರೆ, ಪಾಕಿಸ್ತಾನಕ್ಕೆ ಹೋಗಿದ್ದು ಮೋದಿ ಎನ್ನುವುದನ್ನು ಮರೆಯಬಾರದು. ತಮ್ಮ ಪ್ರಮಾಣ ವಚನ ಸ್ವೀಕಾರದ ಸಂದರ್ಭ ಪಾಕ್‌ ಪ್ರಧಾನಿಯನ್ನು ಆಹ್ವಾನಿಸಿದ್ದರು. ಇದೀಗ ಈ ರೀತಿಯ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡು. ದೇಶ ನರೇಂದ್ರ ಮೋದಿ ಅವರ ಜಾಹಗೀರಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐದು ವರ್ಷದಲ್ಲಿ ಬಿಜೆಪಿ ಸರಕಾರದ ಸಾಧನೆ ಏನೂ ಇಲ್ಲ. ಅವರ ಎಲ್ಲಾ ಆಶ್ವಾಸನೆ ವಿಫಲವಾಗಿವೆ. ಸರ್ಜಿಕಲ್‌ ಸ್ಟ್ರೈಕ್‌ ಬಿಟ್ಟರೆ ಅವರಿಗೆ ಬೇರೆ ವಿಷಯವೇ ಇಲ್ಲ. ಈ ಸ್ಟ್ರೈಕ್‌ ಮಾಡಿರುವುದು ಸೇನೆ. ಭಾರತೀಯ ಸೇನೆ ಮೋದಿ ಅಥವಾ ಬಿಜೆಪಿಯ ಸೇನೆಯಲ್ಲ. ಸೇನೆಯ ಕರ್ತವ್ಯ ಪಾಲನೆಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ವಿಶ್ವದಲ್ಲಿಯೇ ಮೂರನೇ ಬೃಹತ್‌ ಸೇನೆ ನಮ್ಮದು. ಇದನ್ನು ಕಟ್ಟುವಲ್ಲಿ ಮೋದಿ ಪಾತ್ರವೇನೂ ಇಲ್ಲ. ಮೋದಿ ಅವರಿಗೆ ಸಂವಿಧಾನ, ಸುಪ್ರೀಂ ಕೋರ್ಟ್‌ಗಿಂತ ತಾವು ದೊಡ್ಡವರು ಎಂಬ ಅಹಂಕಾರ ಇದೆ'' ಎಂದು ಟೀಕಿಸಿದರು.

ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ಮನ್ಸೂರ್‌ ಖಾನ್‌ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ