ಆ್ಯಪ್ನಗರ

ಆಯುಧಪೂಜೆ ಸಂಭ್ರಮ: ದೇಗುಲಗಳ ಮುಂದೆ ಸಾಲುಗಟ್ಟಿ ನಿಂತ ವಾಹನಗಳು..!

ಸಂಪ್ರದಾಯ ಪ್ರಕಾರ ವಿಜಯದಶಮಿ ಹಿಂದಿನ ದಿನ ಆಯುಧಗಳಿಗೆ ಹಾಗೂ ವಾಹನಗಳಿಗೆ ಪೂಜೆ ಸಲ್ಲಿಸುವುದು ಪ್ರತೀತಿಯಿದ್ದು, ಅಂಗಡಿಗಳ ಪೂಜೆಯನ್ನು ಸಹ ಸಲ್ಲಿಸಲಾಗುತ್ತಿದೆ. ಈ ನಡುವ ಪ್ರತಿವರ್ಷದಂತೆ ಈ ಬಾರಿಯೂ ಸಹ ಮೈಸೂರಿನಲ್ಲಿ ವೆಂಕಟೇಶ್ವರ ಸ್ವಾಮಿ ರಥೋತ್ಸವ ಸರಳವಾಗಿ ನಡೆಯಿತು.

Vijaya Karnataka Web 25 Oct 2020, 11:43 am
ಮೈಸೂರು : ನಾಡಿನೆಲ್ಲೆಡೆ ಇಂದು ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಇತ್ತ ಮೈಸೂರಿನಲ್ಲಿ ಜನರು ಸಾಲುಗಟ್ಟಿ ನಿಂತು ತಮ್ಮ ವಾಹನಗಳ ಪೂಜೆಗಾಗಿ ದೇಗುಲದ ಮುಂದೆ ಕಾದು ಕುಳಿತಿದ್ದಾರೆ.
Vijaya Karnataka Web vehicle pooja at mysore


ಅಂಬಾವಿಲಾಸದಲ್ಲಿ ಆಯುಧಪೂಜೆ ಸಂಭ್ರಮ; ಅರಮನೆಯ ಖಾಸಾ ಆಯುಧಗಳಿಗೆ ಯದುವೀರ್ ನಮನ

ಮೈಸೂರಿನ ಪ್ರಮುಖ ದೇವಾಲಯಗಳ ಮುಂದೆ ವಾಹನಗಳ ದಂಡು ಕಂಡುಬಂದಿದ್ದು, ಆಯುಧ ಪೂಜೆ ಹಿನ್ನಲೆ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಅಗ್ರಹಾರದ 101ಗಣಪತಿ ದೇವಾಲಯದ ಮುಂದೆ ನೂರಾರು ವಾಹನಗಳಿಗೆ ಪೂಜೆಯನ್ನು ಅರ್ಚಕರು ಸಲ್ಲಿಸುತ್ತಿದ್ದಾರೆ. ವಾಹನಗಳ ಸಿಂಗರಿಸಿ ಪೂಜೆ ಸಲ್ಲಿಸಲಾಗುತ್ತಿದೆ. ತಮ್ಮ ವಾಹನವನ್ನು ಬಾಳೆ, ಮಾವಿನ ಸೊಪ್ಪು ಹೂಗಳಿಂದ ಸಿಂಗರಿಸಿ ಆಯುಧ ಪೂಜೆ ಆಚರಣೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಮೈಸೂರು ದಸರಾ: ಈ ಬಾರಿ ಜಂಬೂ ಸವಾರಿಗೆ ಸಾಥ್ ನೀಡಲಿವೆ ಕೇವಲ 2 ಸ್ತಬ್ಧಚಿತ್ರಗಳು

ಸಂಪ್ರದಾಯ ಪ್ರಕಾರ ವಿಜಯದಶಮಿ ಹಿಂದಿನ ದಿನ ಆಯುಧಗಳಿಗೆ ಹಾಗೂ ವಾಹನಗಳಿಗೆ ಪೂಜೆ ಸಲ್ಲಿಸುವುದು ಪ್ರತೀತಿಯಿದ್ದು, ಅಂಗಡಿಗಳ ಪೂಜೆಯನ್ನು ಸಹ ಸಲ್ಲಿಸಲಾಗುತ್ತಿದೆ. ಈ ನಡುವ ಪ್ರತಿವರ್ಷದಂತೆ ಈ ಬಾರಿಯೂ ಸಹ ಮೈಸೂರಿನಲ್ಲಿ ವೆಂಕಟೇಶ್ವರ ಸ್ವಾಮಿ ರಥೋತ್ಸವ ಸರಳವಾಗಿ ನಡೆಯಿತು.

ಹಬ್ಬದ ಸಂಭ್ರಮದಲ್ಲಿ ಮೈಸೂರು ಮಾರ್ಕೆಟ್‌ನಲ್ಲಿ ಜನವೋ ಜನ; ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಖರೀದಿ ಬಲು

ವಿವಿ ಮೊಹಲ್ಲಾದ ಕೃಷ್ಣವಿಲಾಸ ರಸ್ತೆಯಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ಪ್ರತೀ ವರ್ಷ ಆಯುಧ ಪೂಜೆ ದಿನದಂದು ನಡೆಯುವ ವೆಂಕಟೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನಲೆ ಸರಳವಾಗಿ ರಥೋತ್ಸವ ಕಾರ್ಯಕ್ರಮವನ್ನು ದೇವಾಲಯದ ಸಿಬ್ಬಂದಿ ಹಾಗೂ ಸ್ಥಳೀಯರು ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ