ಮೈಸೂರು : ಪ್ರೀತಿ ಎಂದರೆ ಓಡಿ ಹೋಗುವುದಲ್ಲ. ಪರಸ್ಪರ ಆಕರ್ಷಣೆ ಪ್ರೀತಿಯಲ್ಲ. ಅರಿತು ಬಾಳುವುದೇ ನಿಜವಾದ ಪ್ರೇಮ...
ಇದು ಉನ್ನತ ಶಿಕ್ಷಣ ಸಚಿವರಾದ ಜಿ.ಟಿ.ದೇವೇಗೌಡ ಅವರು ವಿದ್ಯಾರ್ಥಿಗಳಿಗೆ ಪ್ರೀತಿ- ಪ್ರೇಮದ ಬಗ್ಗೆ ಪಾಠ ಮಾಡಿದ ಪರಿ. ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
''ಕೆಲವರಿಗೆ ಪ್ರೀತಿ ಎಂದರೆ ಏನೆಂದು ಗೊತ್ತಿಲ್ಲ. ಪ್ರೇಮವೆಂದರೆ ಯುವತಿಯರನ್ನು ಓಡಿಸಿಕೊಂಡು ಹೋಗುವುದು ಎಂದುಕೊಂಡಿದ್ದಾರೆ. ಅದು ನಿಜವಾದ ಪ್ರೀತಿಯಲ್ಲ. ಯಾರು ನಿಮ್ಮ ಜತೆ ಸದಾ ಇರುತ್ತಾರೋ, ನಿಮ್ಮನ್ನು ಅರ್ಥ ಮಾಡಿಕೊಂಡಿರುತ್ತಾರೋ ಅಲ್ಲಿ ಶಾಶ್ವತವಾದ ಪ್ರೀತಿ ಇರುತ್ತದೆ. ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು, ತಂದೆ-ತಾಯಿಯನ್ನು ಯಾರು ಗೌರವಿಸುತ್ತಾರೋ ಅವರದು ನಿಜವಾದ ಪ್ರೀತಿ,'' ಎಂದು ಹೇಳಿದರು.
''ಈಗಿನ ಕಾಲದಲ್ಲಿ ಪ್ರೀತಿಸಿ ಮದುವೆಯಾಗುವುದಕ್ಕೆ ಯಾವುದೇ ಜಾತಿ ಅಡ್ಡಿ ಬರುವುದಿಲ್ಲ. ಆದರೆ, ಉತ್ತಮ ಗುಣ, ನಡವಳಿಕೆ ಇರುವ ಜೀವನ ಸಂಗಾತಿ ಹುಡುಕಿಕೊಳ್ಳುವ ಆಯ್ಕೆ ನಿಮ್ಮದೇ ಆಗಿರುತ್ತದೆ. ವಿದ್ಯಾವಂತರಾಗಿ ನೀವೇ ನಿಮ್ಮ ಸಂಗಾತಿಯ ಆಯ್ಕೆಯಲ್ಲಿ ತಪ್ಪು ದಾರಿ ತುಳಿಯಬಾರದು,'' ಎಂದು ಕಿವಿಮಾತು ಹೇಳಿದರು.
''ಬಹಳಷ್ಟು ಜನ ಪ್ರೀತಿಸಿ ಅದ್ಧೂರಿಯಾಗಿ ಮದುವೆಯಾಗುತ್ತಾರೆ. ಆದರೆ, ಕೆಲವು ದಿನಗಳಲ್ಲೇ ಡಿವೋರ್ಸ್ ನೀಡುತ್ತಾರೆ. ಈಗಿನ ವಕೀಲರು ಹಾಗೂ ಪೊಲೀಸರಿಗೆ ಡಿವೋರ್ಸ್ ಕೇಸ್ಗಳೇ ಹೆಚ್ಚಾಗಿ ಬರುತ್ತಿವೆ. ಸಂಗಾತಿಯ ಆಯ್ಕೆಯಲ್ಲಿ ಒಂದು ಹೆಜ್ಜೆ ತಪ್ಪು ಇಟ್ಟರೆ ವಿದ್ಯಾವಂತರಾಗಿ ಏನು ಪ್ರಯೋಜನ? ಹಾಗಾಗಿ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಅತ್ಯಂತ ಎಚ್ಚರಿಕೆಯಿಂದ ಇಡಬೇಕು,'' ಎಂದು ಸಲಹೆ ನೀಡಿದರು.
''ಕೆಲ ವರ್ಷಗಳ ಹಿಂದೆ ವರನಿಗೆ ವರದಕ್ಷಿಣೆ ನೀಡುವ ಪರಿಪಾಠವಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ವಧುದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರು ನಿಮಗೆ ಕಷ್ಟಪಟ್ಟು ಶಿಕ್ಷ ಣ ಕೊಡಿಸುತ್ತಾರೆ. ಅವರಿಗೂ, ನಿಮ್ಮ ಗ್ರಾಮ, ಕಾಲೇಜಿಗೂ ಒಳ್ಳೆಯ ಹೆಸರು ಬರುವಂತೆ ಸಾಧನೆ ಮಾಡಬೇಕು,'' ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಇದು ಉನ್ನತ ಶಿಕ್ಷಣ ಸಚಿವರಾದ ಜಿ.ಟಿ.ದೇವೇಗೌಡ ಅವರು ವಿದ್ಯಾರ್ಥಿಗಳಿಗೆ ಪ್ರೀತಿ- ಪ್ರೇಮದ ಬಗ್ಗೆ ಪಾಠ ಮಾಡಿದ ಪರಿ. ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
''ಕೆಲವರಿಗೆ ಪ್ರೀತಿ ಎಂದರೆ ಏನೆಂದು ಗೊತ್ತಿಲ್ಲ. ಪ್ರೇಮವೆಂದರೆ ಯುವತಿಯರನ್ನು ಓಡಿಸಿಕೊಂಡು ಹೋಗುವುದು ಎಂದುಕೊಂಡಿದ್ದಾರೆ. ಅದು ನಿಜವಾದ ಪ್ರೀತಿಯಲ್ಲ. ಯಾರು ನಿಮ್ಮ ಜತೆ ಸದಾ ಇರುತ್ತಾರೋ, ನಿಮ್ಮನ್ನು ಅರ್ಥ ಮಾಡಿಕೊಂಡಿರುತ್ತಾರೋ ಅಲ್ಲಿ ಶಾಶ್ವತವಾದ ಪ್ರೀತಿ ಇರುತ್ತದೆ. ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು, ತಂದೆ-ತಾಯಿಯನ್ನು ಯಾರು ಗೌರವಿಸುತ್ತಾರೋ ಅವರದು ನಿಜವಾದ ಪ್ರೀತಿ,'' ಎಂದು ಹೇಳಿದರು.
''ಈಗಿನ ಕಾಲದಲ್ಲಿ ಪ್ರೀತಿಸಿ ಮದುವೆಯಾಗುವುದಕ್ಕೆ ಯಾವುದೇ ಜಾತಿ ಅಡ್ಡಿ ಬರುವುದಿಲ್ಲ. ಆದರೆ, ಉತ್ತಮ ಗುಣ, ನಡವಳಿಕೆ ಇರುವ ಜೀವನ ಸಂಗಾತಿ ಹುಡುಕಿಕೊಳ್ಳುವ ಆಯ್ಕೆ ನಿಮ್ಮದೇ ಆಗಿರುತ್ತದೆ. ವಿದ್ಯಾವಂತರಾಗಿ ನೀವೇ ನಿಮ್ಮ ಸಂಗಾತಿಯ ಆಯ್ಕೆಯಲ್ಲಿ ತಪ್ಪು ದಾರಿ ತುಳಿಯಬಾರದು,'' ಎಂದು ಕಿವಿಮಾತು ಹೇಳಿದರು.
''ಬಹಳಷ್ಟು ಜನ ಪ್ರೀತಿಸಿ ಅದ್ಧೂರಿಯಾಗಿ ಮದುವೆಯಾಗುತ್ತಾರೆ. ಆದರೆ, ಕೆಲವು ದಿನಗಳಲ್ಲೇ ಡಿವೋರ್ಸ್ ನೀಡುತ್ತಾರೆ. ಈಗಿನ ವಕೀಲರು ಹಾಗೂ ಪೊಲೀಸರಿಗೆ ಡಿವೋರ್ಸ್ ಕೇಸ್ಗಳೇ ಹೆಚ್ಚಾಗಿ ಬರುತ್ತಿವೆ. ಸಂಗಾತಿಯ ಆಯ್ಕೆಯಲ್ಲಿ ಒಂದು ಹೆಜ್ಜೆ ತಪ್ಪು ಇಟ್ಟರೆ ವಿದ್ಯಾವಂತರಾಗಿ ಏನು ಪ್ರಯೋಜನ? ಹಾಗಾಗಿ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಅತ್ಯಂತ ಎಚ್ಚರಿಕೆಯಿಂದ ಇಡಬೇಕು,'' ಎಂದು ಸಲಹೆ ನೀಡಿದರು.
''ಕೆಲ ವರ್ಷಗಳ ಹಿಂದೆ ವರನಿಗೆ ವರದಕ್ಷಿಣೆ ನೀಡುವ ಪರಿಪಾಠವಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ವಧುದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರು ನಿಮಗೆ ಕಷ್ಟಪಟ್ಟು ಶಿಕ್ಷ ಣ ಕೊಡಿಸುತ್ತಾರೆ. ಅವರಿಗೂ, ನಿಮ್ಮ ಗ್ರಾಮ, ಕಾಲೇಜಿಗೂ ಒಳ್ಳೆಯ ಹೆಸರು ಬರುವಂತೆ ಸಾಧನೆ ಮಾಡಬೇಕು,'' ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.