ಆ್ಯಪ್ನಗರ

ಎಸ್ಸಿಗೆ ಸೇರಿಸಲು ಆಗ್ರಹಿಸಿ ಮಡಿವಾಳರ ಪ್ರತಿಭಟನೆ

ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿ ಹಾಗೂ ಸಮುದಾಯದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶ್ರೀವೀರ ಮಡಿವಾಳ ಮಹಾಜನ ಸೇವಾ ಸಂಘದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

Vijaya Karnataka 17 Oct 2017, 5:00 am

ಮೈಸೂರು: ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿ ಹಾಗೂ ಸಮುದಾಯದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶ್ರೀವೀರ ಮಡಿವಾಳ ಮಹಾಜನ ಸೇವಾ ಸಂಘದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ದೊಡ್ಡ ಗಡಿಯಾರ ಸಮೀಪದ ಗಾಂಧಿವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಸರಕಾರ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದದರು.

ಸಂಘದ ಗೌರವಾಧ್ಯಕ್ಷ ಎನ್‌.ಜಗದೀಶ್‌ ಕುಮಾರ್‌ ಮಾತನಾಡಿ, ''ಜಿಲ್ಲಾ ಸಂಘದ ಸಮುದಾಯ ಭವನಕ್ಕೆ ಹಣ ಬಿಡುಗಡೆಗೊಳಿಸಬೇಕು. ನರ್ಮ್‌ ಯೋಜನೆಯಡಿ ದೋಬಿಘಾಟ್‌ ಸದಸ್ಯರಿಗೆ ವಸತಿ ಕಲ್ಪಿಸಬೇಕು. ಸರಕಾರಿ ನೌಕರಿಯಲ್ಲಿರುವ ಸಮುದಾಯದವರಿಗೆ ಸೇವೆಗೆ ಅನುಗುಣವಾಗಿ ಬಡ್ತಿ ನೀಡಬೇಕು. ಯಾದವಗಿರಿ, ಗೊಬ್ಬಳಿಕಟ್ಟೆ, ಕುಕ್ಕರಹಳ್ಳಿ ಕೆರೆ ಮೊದಲಾದ ದೋಬಿಘಾಟ್‌ಗಳಿಗೆ ಕಾಂಪೌಂಡ್‌ ನಿರ್ಮಿಸಬೇಕು,'' ಎಂದು ಆಗ್ರಹಿಸಿದರು.

''ತಾಲೂಕಿನ ಕಡಕೊಳ ಗ್ರಾಮದಲ್ಲಿರುವ ಸಮುದಾಯದ ಶ್ರೀಸಿದ್ದಪ್ಪಾಜಿ ದೇವಸ್ಥಾನದ ಅಭಿವೃದ್ಧಿಗೆ ಹಣ ಬಿಡುಗಡೆಗೊಳಿಸಬೇಕುಎಂಬುದು ಸೇರಿದಂತೆ ಸಮುದಾಯದ ಇತರ ಬೇಡಿಕೆಗಳನ್ನು ಈಡೇರಿಸಬೇಕು,'' ಎಂದು ಒತ್ತಾಯಿಸಿದರು.

''ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಮಡಿವಾಳ ಜನಾಂಗದವರಿದ್ದು, ಕಳೆದ ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಆಶ್ವಾಸನೆ ನೀಡಿ ಜನಾಂಗಕ್ಕೆ ಮೋಸ ಮಾಡುತ್ತಿದ್ದಾರೆ,'' ಎಂದು ಮಡಿವಾಳ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ಎಚ್‌.ಡಿ.ಕೋಟೆ ಅಕ್ರೋಶ ವ್ಯಕ್ತಪಡಿಸಿದರು.

ಇಟ್ಟಿಗೆಗೂಡಿನ ಅಧ್ಯಕ್ಷ ಬೈರಪ್ಪ, ರಾಚಪ್ಪ, ಮಡಿವಾಳ ಮಹಿಳಾ ಸಂಘದ ನಗರಾಧ್ಯಕ್ಷ ಭುವನೇಶ್ವರಿ, ರಘು, ಲೋಕೇಶ್‌ ಮತ್ತಿತರರು ಹಾಜರಿದ್ದರು.

Vijaya Karnataka Web madivas protests
ಎಸ್ಸಿಗೆ ಸೇರಿಸಲು ಆಗ್ರಹಿಸಿ ಮಡಿವಾಳರ ಪ್ರತಿಭಟನೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ