ಆ್ಯಪ್ನಗರ

ಮೈಸೂರು ದಸರಾ: ನಮಗ್ಯಾಕೆ ಕೊರೊನಾ ಟೆಸ್ಟ್‌ ಎಂದ ಮಾವುತರು, ಕಾವಾಡಿಗಳು, ಎಲ್ಲರ ರಿಸಲ್ಟ್‌ ನೆಗೆಟಿವ್‌

ಮೈಸೂರು ದಸರಾಗಾಗಿ ಅರಮನೆಗೆ ಆಗಮಿಸಿದ ಗಜಪಡೆಯ ಟೀಂ ರಿಲ್ಯಾಕ್ಸ್ ಮೂಡ್‌ನಲ್ಲಿತ್ತು. ಬೆಳಗ್ಗೆಯೇ ಆನೆಗಳಿಗೆ ಸ್ನಾನ ಮಾಡಿಸಿದ ಮಾವುತರು, ಕಾವಾಡಿಗಳು ಆನೆಗಳನ್ನ ಶುಚಿಗೊಳಿಸಿ ಆರೈಕೆ ಮಾಡಿದರು. ಅಲ್ಲದೇ ಆನೆಗಳಿಗೆ ಬೆಲ್ಲ, ಭತ್ತ, ಹುಲ್ಲು ಮಿಶ್ರಣ ಮಾಡಿದ ಪೌಷ್ಠಿಕ ಆಹಾರ ನೀಡಿ ಪೋಷಣೆ ಮಾಡಿದರು.

Vijaya Karnataka Web 3 Oct 2020, 5:45 pm
ಮೈಸೂರು: ನಾಡಹಬ್ಬ ದಸರೆಯಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಜಪಡೆಯ ಮಾವುತರು ಹಾಗೂ ಕಾವಾಡಿಗಳು ಹಾಗೂ ಡಿಎಚ್‌ಒ ನಡುವೆ ಕೊರೊನಾ ಟೆಸ್ಟ್‌ ವಿಚಾರವಾಗಿ ವಾಗ್ವಾದ ನಡೆಯಿತು.
Vijaya Karnataka Web ಗಜಪಡೆ
ಗಜಪಡೆ


ದಸರಾದಲ್ಲಿ ಭಾಗವಾಗಿರುವ ಆನೆಗಳ ಮಾವುತರು, ಕಾವಾಡಿಗಳಿಗೆ ಕೊರೋನಾ ಟೆಸ್ಟ್ ಮಾಡಿಸಲು ಮುಂದಾದ ಆರೋಗ್ಯ ಇಲಾಖೆಗೆ ಮಾವುತರು ಹಾಗೂ ಕಾವಾಡಿಗಳ ಅಸಹಕಾರ ತೋರಿದರು. ಬಳಿಕ ಒಲ್ಲದ ಮನಸ್ಸಿನಿಂದಲೇ ನಡೆಸಿದ ಕೊರೋನಾ ಟೆಸ್ಟ್‌ನಲ್ಲಿ ಎಲ್ಲರಿಗೂ ನೆಗೆಟಿವ್ ವರದಿ ಬಂದಿದ್ದು ಸದ್ಯ ಸಮಾಧಾನ ತರಿಸಿದೆ.

ನಾವು ಕಾಡಿನ ಜನ ನಮಗೆ ಯಾವ ರೋಗ ಇಲ್ಲ. ರೋಗ ಇದ್ದರೆ ಟೆಸ್ಟ್ ಮಾಡಿಸೋಣ. ರೋಗ ಇಲ್ಲದಿದ್ದರೆ ಯಾಕೆ ಎಂದು ಕೊರೊನಾ ಟೆಸ್ಟ್‌ಗೆ ವಿರೋಧ ಹೊರಹಾಕಿದರು. ನಮಗೆ ಕೊರೋನಾ ಟೆಸ್ಟ್ ಮಾಡಿಸಿದ್ರೆ ಆನೆಗೂ ಕೊರೋನಾ ಪರೀಕ್ಷೆ ಮಾಡಿಸಿ ಎಂದು ವಾಗ್ವಾದ ನಡೆಸಿದ್ದು, ಈ ಸಂದರ್ಭ ಆರೋಗ್ಯ ಸಿಬ್ಬಂದಿ ಮಾವುತರ ಮನವೊಲಿಕೆಗೆ ಮುಂದಾದರು.

ಆದರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ನೇತೃತ್ವದಲ್ಲಿ ಆನೆಗಳ ಮಾವುತರಿಗೆ ಕಾವಾಡಿಗರಿಗೆ ಕೊರೊನಾ ಟೆಸ್ಟ್ ಮಾಡಲು ಮುಂದಾದರು.

ಗಜಪಡೆ ಟೀಮ್‌ ರಿಲ್ಯಾಕ್ಸ್‌

ಮೈಸೂರು ದಸರಾಗಾಗಿ ಅರಮನೆಗೆ ಆಗಮಿಸಿದ ಗಜಪಡೆಯ ಟೀಂ ರಿಲ್ಯಾಕ್ಸ್ ಮೂಡ್‌ನಲ್ಲಿತ್ತು. ಬೆಳಗ್ಗೆಯೇ ಆನೆಗಳಿಗೆ ಸ್ನಾನ ಮಾಡಿಸಿದ ಮಾವುತರು, ಕಾವಾಡಿಗಳು ಆನೆಗಳನ್ನ ಶುಚಿಗೊಳಿಸಿ ಆರೈಕೆ ಮಾಡಿದರು. ಅಲ್ಲದೇ ಆನೆಗಳಿಗೆ ಬೆಲ್ಲ, ಭತ್ತ, ಹುಲ್ಲು ಮಿಶ್ರಣ ಮಾಡಿದ ಪೌಷ್ಠಿಕ ಆಹಾರ ನೀಡಿ ಪೋಷಣೆ ಮಾಡಿದರು.

ಮೊದಲ ದಿನ ಸಿಂಪಲ್ ವಾಕಿಂಗ್ ಮಾಡಿದ ಆನೆಗಳು ಅರಮನೆ ಆವರಣದಲ್ಲೆ ವಿಶ್ರಾಂತಿ ಪಡೆದವು. ಇನ್ನು ಭಾನುವಾರದಿಂದ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುಗೆ ಭಾರ ಹೊರುವ ತಾಲೀಮು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಶುವೈದ್ಯಾಧಿಕಾರಿ ಡಾ. ನಾಗರಾಜ್ ನೇತೃತ್ವದಲ್ಲಿ ಅಭಿಮನ್ಯುವಿಗೆ ಭಾರ ಹೊರುವ ತಾಲೀಮು ನಡೆಯಲಿದ್ದು ಅರಮನೆ ಆವರಣದೊಳಗೆ ಅಭಿಮನ್ಯುವಿಗೆ ಅಧಿಕಾರಿಗಳು ತಾಲೀಮು ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆ ಅರಮನೆಯ ಸುತ್ತಲೂ ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಲಾಯಿತು.

ಆನೆಗಳು ಇರುವ ಪ್ರದೇಶಕ್ಕೂ ಸ್ಯಾನಿಟೈಸ್‌ ಮಾಡಲಾಗಿದೆ. ಆನೆಗಳಿಗೂ ಸಿಂಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ