ಆ್ಯಪ್ನಗರ

ಗೊಮ್ಮಟಗಿರಿ ವಿರಾಗಿಗೆ ಮಜ್ಜನ ಪುಳಕ

ಹುಣಸೂರು: ಜೈನರ ಆರಾಧ್ಯ ಕೇಂದ್ರ ಗೊಮ್ಮಟಗಿರಿಯಲ್ಲಿ ಭಾನುವಾರ ನಡೆದ 70ನೇ ವರ್ಷದ ಬಾಹುಬಲಿಯ ಮಸ್ತಕಾಭಿಷೇಕದಲ್ಲಿ ಭಕ್ತರ ಉದ್ಘೋಷಗಳ ನಡುವೆ ನಾನಾ ದ್ರವ್ಯಗಳ ಮಹಾ ಮಜ್ಜನದಲ್ಲಿ ಗೊಮ್ಮಟ ಕಂಗೊಳಿಸಿತು.

Vijaya Karnataka 25 Nov 2019, 5:00 am
ಹುಣಸೂರು: ಜೈನರ ಆರಾಧ್ಯ ಕೇಂದ್ರ ಗೊಮ್ಮಟಗಿರಿಯಲ್ಲಿ ಭಾನುವಾರ ನಡೆದ 70ನೇ ವರ್ಷದ ಬಾಹುಬಲಿಯ ಮಸ್ತಕಾಭಿಷೇಕದಲ್ಲಿ ಭಕ್ತರ ಉದ್ಘೋಷಗಳ ನಡುವೆ ನಾನಾ ದ್ರವ್ಯಗಳ ಮಹಾ ಮಜ್ಜನದಲ್ಲಿ ಗೊಮ್ಮಟ ಕಂಗೊಳಿಸಿತು.
Vijaya Karnataka Web Hun


ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮಿಜಿ, ಮಂಡ್ಯ ಜಿಲ್ಲೆಯ ಆರತಿಪುರದ ಜೈನ ಮಠದ ಸಿದ್ದಾಂತ ಕೀರ್ತಿ ಭಟ್ಟಾರಕ ಸ್ವಾಮಿಜಿಗಳ ಸಾನಿಧ್ಯದಲ್ಲಿ ಧಾರ್ಮಿಕ ವಿಧಿ, ವಿಧಾನಗಳ ಮೂಲಕ ಮಹಾ ಮಸ್ತಕಾಭಿಷೇಕ ನೆರವೇರಿತು. ನಂತರ ಬೆಟ್ಟದ ಮೇಲಿನ 18 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಹರಾಜಿನಲ್ಲಿಕೊಂಡ ಭಕ್ತರು ಕಳಸಗಳನ್ನು ತಲೆಯ ಮೇಲೆ ಹೊತ್ತು ತಂದು ಅಭಿಷೇಕ ನಡೆಸಿದರು.

ಮೊದಲಿಗೆ ಜಲಾಭಿಷೇಕ, ಎಳನೀರು, ಕಬ್ಬಿನ ಹಾಲು, ಅರಿಶಿನ, ಚಂದನ, ಕ್ಷೀರ, ಕಂಕಚೂರ್ಣ, ಅರಳು, ಸಕ್ಕರೆಪುಡಿ, ಅಕ್ಕಿ ಹಿಟ್ಟು, ಜೇನುತುಪ್ಪ, ಶ್ರೀಗಂಧ, ನಾನಾ ಕಷಾಯಾಭಿಷೇಕ ಹಾಗೂ ಪುಷ್ಪಾರ್ಚನೆ ನಡೆಯಿತು. ಪ್ರತಿ ಅಭಿಷೇಕದಲ್ಲೂನಾನಾ ಬಣ್ಣಗಳಿಂದ ಕಂಗೊಳಿಸಿದ ಗೊಮ್ಮಟನನ್ನು ಕಣ್ತುಂಬಿಕೊಂಡ ಭಕ್ತರು, ವಿರಾಟ್‌ ಯೋಗಿ ಬಾಹುಬಲಿ ಮಹಾರಾಜ್‌ ಕೀ ಜೈ ಎಂದು ಜಯಘೋಷ ಮೊಳಗಿಸಿದರು. ರಾಜ್ಯದ ವಿವಿಧೆಡೆಗಳಿಂದ ಜೈನ ಭಕ್ತರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿ ರಾರು ಮಂದಿ ಗ್ರಾಮಸ್ಥರು ಮಸ್ತಕಾಭಿಷೇಕವನ್ನು ವೀಕ್ಷಿಸಿದರು.

ಮಹಿಳೆಯರು, ಮಕ್ಕಳೆನ್ನದೆ ಬೆಟ್ಟ ಹತ್ತಿ ಬಾಹುಬಲಿಗೆ ಪೂಜೆ ಸಲ್ಲಿಸಿದರು. ಈ ಬಾರಿ ಗೊಮ್ಮಟಗಿರಿ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಡಾ.ಎಂ.ವಿ.ಶಾಂತಕುಮಾರ್‌, ಕಾರ್ಯದರ್ಶಿ ಪದ್ಮರಾಜಯ್ಯರವರ ನೇತೃತ್ವದಲ್ಲಿನಾನಾ ಧಾರ್ಮಿಕ ಕಾರ್ಯಗಳು ಹಾಗೂ ಮಸ್ತಕಾಭಿಷೇಕ ಜರುಗಿತು. ಆನಂತರ ಸ್ವಾಮಿಜಿಗಳು ಆಶೀರ್ವಚನ ನೀಡಿದರು. ಪ್ರಸಾದ ವಿತರಣೆ: ಮಸ್ತಕಾಭಿಷೇಕಕ್ಕೆ ಬಂದಿದ್ದ ಭಕ್ತಾಧಿಗಳಿಗೆ ದಾನಿಗಳು ಅನ್ನಸಂತರ್ಪಣೆ ಏರ್ಪ ಡಿಸಿದ್ದರು. ಬಿಳಿಕೆರೆ ಎಸ್‌.ಐ. ಜಯಪ್ರಕಾಶ್‌ ನೇತೃತ್ವದಲ್ಲಿಬಿಗಿ ಬಂದೋಬಸ್‌್ತ ಏರ್ಪಡಿಸ ಲಾಗಿತ್ತು. ಚುನಾವಣೆಯಿಂದಾಗಿ ಯಾವುದೇ ರಾಜಕೀಯ ಮುಖಂಡರು ಭಾಗವಹಿಸಿರಲಿಲ್ಲ. ಮಸಾಲೆಪುರಿ ವೈಶಿಷ್ಟತ್ರ್ಯ: ಎಲ್ಲೇ ಮಸ್ತಕಾಭಿಷೇಕ ನಡೆದರೂ ಅಲ್ಲಿಮಸಾಲೆ ಪುರಿಯ ಮಾರಾಟ ಭರ್ಜರಿಯಾಗಿರುತ್ತದೆ. ಇಲ್ಲಿಯೂ ಬಗೆಬಗೆಯ ಮಸಾಲೆಪುರಿ ಘಮಘಮಿಸುತ್ತಿತ್ತು, ಭಕ್ತರು ಮುಗಿ ಬಿದ್ದು ಮಸಾಲೆಪುರಿ ಖರೀದಿಸಿದರು. ಸಿಹಿತಿಂಡಿ ಅಂಗಡಿ, ಮಕ್ಕಳ ಆಟಿಕೆ ಸಾಮಾನುಗಳ ಅಂಗಡಿಗಳು ಗಮನ ಸೆಳೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ