ಆ್ಯಪ್ನಗರ

ಮೈಸೂರನ್ನು ನಿರ್ಗತಿಕ ಮುಕ್ತ ನಗರವಾಗಿಸಿ

ಮೈಸೂರು ನಗರವನ್ನು ನಿರ್ಗತಿಕ ಮುಕ್ತ ನಗರವಾಗಿ ರೂಪಿಸಲು ಕಾರ‌್ಯಕ್ರಮ ರೂಪಿಸಿ ಅನುಷ್ಠಾನ ಮಾಡುವಂತೆ ಕೋರಿ ವೀ ಕೇರ್ ಚಾರಿಟೇಬಲ್ ಸಂಸ್ಥೆ ವತಿಯಿಂದ ಸೋಮವಾರ ಜಾಥಾ ನಡೆಯಿತು.

Vijaya Karnataka 19 Dec 2017, 5:15 am
ಮೈಸೂರು: ಮೈಸೂರು ನಗರವನ್ನು ನಿರ್ಗತಿಕ ಮುಕ್ತ ನಗರವಾಗಿ ರೂಪಿಸಲು ಕಾರ‌್ಯಕ್ರಮ ರೂಪಿಸಿ ಅನುಷ್ಠಾನ ಮಾಡುವಂತೆ ಕೋರಿ ವೀ ಕೇರ್ ಚಾರಿಟೇಬಲ್ ಸಂಸ್ಥೆ ವತಿಯಿಂದ ಸೋಮವಾರ ಜಾಥಾ ನಡೆಯಿತು.
Vijaya Karnataka Web make mysore a destitute free city
ಮೈಸೂರನ್ನು ನಿರ್ಗತಿಕ ಮುಕ್ತ ನಗರವಾಗಿಸಿ


ಅರಮನೆ ಕೋಟೆ ಆಂಜನೇಯ ದೇವಾಲಯದ ಮುಂದೆ ಜಾಥಾದ ವೇಳೆ ‘ನಿರ್ಗತಿಕ ನಗರವಾಗಿ ರೂಪಿಸಲು ಕೈ ಜೋಡಿಸಿ’, ‘ನಿರ್ಗತಿಕರು ನಮ್ಮಂತೆಯೇ ಮನುಜರಲ್ಲವೇ?’ ಮೊದಲಾದ ಭಿತ್ತಿಫಲಕಗಳನ್ನು ಪ್ರದರ್ಶಿಸಿದರು.

ಈ ಸಂದರ್ಭ ಮಾತನಾಡಿದ ಸದಸ್ಯರು, ‘‘ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಮಾರ್ಗಸೂಚಿ ಅನುಸಾರ ಮೈಸೂರು ನಗರದ ಜನಸಂಖ್ಯೆಗೆ ಅನುಗುಣವಾಗಿ ನಿರ್ಗತಿಕರ ತಂಗುದಾಣಗಳನ್ನು ಸ್ಥಾಪಿಸಬೇಕು. ಪ್ರಸಕ್ತ ಪಾಲಿಕೆಯಿಂದ ಎರಡು ತಂಗುದಾಣಗಳನ್ನು ಸ್ಥಾಪಿಸಲಾಗಿದ್ದು ಈ ತಂಗುದಾಣ ಗಳಿಗೆ ಅಗತ್ಯ ಮೂಲ ಸೌಕರ್ಯ ನೀಡಬೇಕು,’’ ಎಂದು ಒತ್ತಾಯಿಸಿದರು.

‘‘ಗುರುತಿಸಲಾದ ನಿರ್ಗತಿಕರಿಗೆ ಸರಕಾರದ ಆಸ್ಪತ್ರೆ, ಸಂಸ್ಥೆಗಳಲ್ಲಿ ಆರೋಗ್ಯ ಸೇವೆ ಲಭಿಸಬೇಕಿದೆ. ಸರಕಾರದ ನಿಯಮದಂತೆ ಮಹಿಳೆಯರು, ಮಕ್ಕಳು, ವಯೋವೃದ್ಧರು, ಅಂಗವಿಕಲರು, ಮಾನಸಿಕ ರೋಗಿಗಳಿಗೆ ಪುನರ್ವಸತಿ ಕಲ್ಪಿಸಲು ಆಶ್ರಯ ಕೇಂದ್ರಗಳಲ್ಲಿ ಆವಕಾಶ ಇರಬೇಕು. ನಿರ್ಗತಿಕರಿಗೆ ಸಮುದಾಯ ಭೋಜನಾಲಯ ಕಲ್ಪಿಸಬೇಕು,’’ಎಂದು ಅವರು ಆಗ್ರಹಿಸಿದರು.

‘‘ಬಡಜನರಿಗೆ ಇರುವ ಕಲ್ಯಾಣ ಕಾರ‌್ಯಕ್ರಮಗಳ ಸೌಲಭ್ಯಗಳನ್ನು ನಿರ್ಗತಿಕರು ಪಡೆಯಲು ಅವಕಾಶ ಕಲ್ಪಿಸ ಬೇಕು. ಇವರಿಗೆ ಗುಂಪುಮನೆ ನಿರ್ಮಾಣ, ಸ್ವಯಂ ಉದ್ಯೋಗ ತರಬೇತಿ, ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯವನ್ನು ನೀಡಬೇಕಿದೆ. ನಿರ್ಗತಿಕರ ಸಮೀಕ್ಷಾ ಕಾರ್ಯದಲ್ಲಿ ಎನ್‌ಜಿಒ ಗಳು ಭಾಗಿಯಾದಾಗ ಪೊಲೀಸ್ ಇಲಾಖೆ ಸೇರಿದಂತೆ ಸರಕಾರ ದ ಇತರ ಇಲಾಖೆಗಳನ್ನು ಭಾಗಿದಾರರಾಗಿ ಪಾಲ್ಗೊಳ್ಳುವಂತೆ ಸೂಕ್ತ ನಿರ್ದೇಶನ ನೀಡಬೇಕು,’’ ಎಂದು ಹೇಳಿದರು.

ಈ ಸಂದರ್ಭ ವೀ ಕೇರ್ ಚಾರಿಟೇಬಲ್ ಸಂಸ್ಥೆ ಅಧ್ಯಕ್ಷ ಮನು ಬಿ ಮೆನನ್, ಸಂಘದ ಪದಾಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ