ಆ್ಯಪ್ನಗರ

ಮಣ್ಣಿಗೆ ಪೋಷಕಾಂಶವಿದ್ದರೆ ಉತ್ತಮ ಬೆಳೆ

ಮಣ್ಣಿಗೆ ಉತ್ತಮ ಪೋಷಕಾಂಶಗಳಿದ್ದರೆ ಉತ್ತಮ ಬೆಳೆ ಬರುವುದರಿಂದ, ಜಮೀನಗೆ ಕೊಟ್ಟಿಗೆ ಗೊಬ್ಬರ ಮತ್ತು ಬಯೋಡರ್ಮವನ್ನು ಮಿಶ್ರಣ ಮಾಡಿ ಚೆಲ್ಲಬೇಕು ಎಂದು ಕಷಿ ಇಲಾಖೆಯ ಸಹಾಯಕ ಅಧಿಕಾರಿ ಮಧುಸೂದನ್ ತಿಳಿಸಿದರು.

Vijaya Karnataka 21 May 2019, 10:36 pm
ಎಚ್.ಡಿ.ಕೋಟೆ : ಮಣ್ಣಿಗೆ ಉತ್ತಮ ಪೋಷಕಾಂಶಗಳಿದ್ದರೆ ಉತ್ತಮ ಬೆಳೆ ಬರುವುದರಿಂದ, ಜಮೀನಗೆ ಕೊಟ್ಟಿಗೆ ಗೊಬ್ಬರ ಮತ್ತು ಬಯೋಡರ್ಮವನ್ನು ಮಿಶ್ರಣ ಮಾಡಿ ಚೆಲ್ಲಬೇಕು ಎಂದು ಕಷಿ ಇಲಾಖೆಯ ಸಹಾಯಕ ಅಧಿಕಾರಿ ಮಧುಸೂದನ್ ತಿಳಿಸಿದರು.
Vijaya Karnataka Web MYR-MYS21HDK1C


ತಾಲೂಕಿನ ಸೊಳ್ಳೇಪುರ ಪುನರ್ವಸತಿ ಕೇಂದ್ರದಲ್ಲಿ 40 ಲಾನುಭವಿಗಳಿಗೆ ಬಿತ್ತನೆ ಮುಸುಕಿನ ಜೋಳವನ್ನು ವಿತರಿಸಿ ಮಾತನಾಡಿದರು.

‘‘ಆದಿವಾಸಿ ಗಿರಿಜನರು ಕೂಡ ಮುಖ್ಯ ಕಷಿಗೆ ಬರಬೇಕಿದೆ. ಆ ನಿಟ್ಟಿನಲ್ಲಿ ವೈಲ್ಡ್ ಕನ್ಸರ್‌ವೇಷನ್ ಸೊಸೈಟಿ ಇಂಡಿಯಾ, ಬೆಂಗಳೂರು ಮೂಲದ ಸಂಸ್ಥೆ, ಸರಕಾರ ಮಾಡಬೇಕಾದ ಕೆಲಸ ವನ್ನು ಮಾಡುತ್ತಿದೆ.
ನಿಮಗೆ ಉಚಿತವಾಗಿ ಬಿತ್ತನೆ ಬೀಜವನ್ನು ವಿತರಣೆ ಮಾಡಿದೆ. ಈ ಬೀಜವನ್ನು ಜಮೀನಿಗೆ ಹಾಕುವಾಗ ಸಾಲಿನಿಂದ ಸಾಲಿಗೆ ಎರಡು ಅಡಿ ಇರಬೇಕು. ಕಾಳಿನಿಂದ ಕಾಲಿಗೆ 1 ಅಡಿ ಇರಬೇಕು. 8 ನೇ ಸಾಲಿಗೆ ತೊಗರಿ ಬೇಳೆ ಬೆಳೆ ಹಾಕುವ ಮೂಲಕ ಹಿಂದಿನ ವರು ಅನುಸರಿಸುತ್ತಿದ್ದ ಅಕ್ಕಡಿ ಪದ್ದತಿ ಯನ್ನು ಎಲ್ಲರೂ ಅನುಸರಿ ಸಬೇಕು,’’ ಎಂದರು.

‘‘ಜಮೀನಿಗೆ ಬೆಳೆ ಹಾಕುವುದು ಮುಖ್ಯ ಅಲ್ಲ. ಜಮೀನಿನಲ್ಲಿರುವ ಬೆಳೆಯನ್ನು ರೋಗದಿಂದ ದೂರ ಇರಿಸಬೇಕಾದರೆ ಜಮೀನಿನ ಸುತ್ತಲೂ ಚೆಂಡು ಹೂವು ಹಾಕಬೇಕು. ಸಮಗ್ರ ಮತ್ತು ಸುಸ್ಥಿರ ಬೆಳೆ ಬರಬೇಕಾದರೆ ಜೀವಂತ ಬೇಲಿ ನಿರ್ಮಾಣ ಮಾಡ ಬೇಕು,’’ ಎಂದು ಸಲಹೆ ನೀಡಿದರು.

ಪರಿಶಿಷ್ಟ ವರ್ಗಗಳ ಸಮಾಜ ಕಲ್ಯಾಣಾಧಿಕಾರಿ ಚಂದ್ರಪ್ಪ ಮಾತನಾಡಿ, ‘‘ಕನಕ-51 ಬಿತ್ತನೆ ಮುಸುಕಿನ ಜೋಳ ವನ್ನು ಪ್ರತಿ ಕುಟುಂಬಕ್ಕೆ 25 ಕೆ.ಜಿ. ನಂತೆ ಕೊಡಲಾಗಿದೆ. ಆದಿವಾಸಿ ಗಿರಿಜನರು ಇದನ್ನು ಸದುಪಯೋಗ ಪಡಿಸಿ ಕೊಂಡು, ಆದಿವಾಸಿ ಗಿರಿಜನರು ಕೂಡ ಕಷಿಯಲ್ಲಿ ಕಡಿಮೆ ಏನು ಇಲ್ಲ ಎಂದು ಜನರಿಗೆ ತೋರಿಸಬೇಕು. ಈಗಾಗಲೇ ಹಾಡಿಯಲ್ಲಿ ಉತ್ತಮ ಕಷಿ ನಡೆಸುವ ಅನೇಕ ಆದಿವಾಸಿ ಗಿರಿಜನ ಕುಟುಂಬ ಗಳು ಇವೆ. ಇವರ ಸಲಹೆ ಪಡೆಯಿರಿ. ಇನ್ನು ಹೆಚ್ಚಿನ ಮಾಹಿತಿಗೆ ಕಷಿ ಇಲಾಖೆ ಯನ್ನು ಸಂಪರ್ಕಿಸಿ,’’ ಎಂದರು.

ವೈಲ್ಡ್ ಕನ್ಸರ್‌ವೇಷನ್ ಸೊಸೈಟಿ ಇಂಡಿಯಾದ ಕ್ಷೇತ್ರ ಸಹಾಯಕ ಗೋವಿಂದಪ್ಪ, ಹಾಡಿಯ ಲೋಕೇಶ್, ಪ್ರಕಾಶ್ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ