ಆ್ಯಪ್ನಗರ

ಪಿರಿಯಾಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ

ಪಿರಿಯಾಪಟ್ಟಣ: ಭಾರತದ ಸಂವಿಧಾನವನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಒಬ್ಬರೆ ಬರೆದಿಲ್ಲಎಂಬ ಹೇಳಿಕೆಯನ್ನು ಬಿಜೆಪಿ ಸರಕಾರ ನೀಡಿದೆ ಎಂದು ಆರೋಪಿಸಿ ತಾಲೂಕು ಪ್ರಗತಿಪರ ಒಕ್ಕೂಟ ಬೃಹತ್‌ ಪ್ರತಿಭಟನೆ ನಡೆಸಿತು.

Vijaya Karnataka 19 Nov 2019, 5:00 am
ಪಿರಿಯಾಪಟ್ಟಣ: ಭಾರತದ ಸಂವಿಧಾನವನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಒಬ್ಬರೆ ಬರೆದಿಲ್ಲಎಂಬ ಹೇಳಿಕೆಯನ್ನು ಬಿಜೆಪಿ ಸರಕಾರ ನೀಡಿದೆ ಎಂದು ಆರೋಪಿಸಿ ತಾಲೂಕು ಪ್ರಗತಿಪರ ಒಕ್ಕೂಟ ಬೃಹತ್‌ ಪ್ರತಿಭಟನೆ ನಡೆಸಿತು.
Vijaya Karnataka Web PYP -1


ಪಿರಿಯಾಪಟ್ಟಣದ ಸರ್ಕಲ್‌ ಇನ್ಸ್‌ಪೆಕ್ಟರ್‌ ಕಚೇರಿ ಎದುರಿನಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಕಾಲ್ನಡಿಗೆಯಲ್ಲಿತಾಲೂಕು ಆಡಳಿತ ಭವನದವರೆಗೆ ಕ್ರಮಿಸಿದರು. ಈ ಸಂದರ್ಭದಲ್ಲಿ ಕುರುಬ ಸಮುದಾಯದ ಅಧ್ಯಕ್ಷ ವಿ.ಜಿ.ಅಪ್ಪಾಜಿಗೌಡ ಮಾತನಾಡಿ, ''ಭಾರತ ಅಖಂಡತೆ ಹಾಗೂ ಸೋದರತೆಗೆ ಹೆಸರಾಗಿದ್ದು, ಸರ್ವ ಧರ್ಮಗಳಿಗೂ ಸಮಾನತೆಯಿರುವ ದೇಶ, ಸಂವಿಧಾನದ ಬಗ್ಗೆ ಇತ್ತೀಚಿನ ದಿನಗಳಲ್ಲಿಇಲ್ಲಸಲ್ಲದ ಹೇಳಿಕೆಗಳು ಹಾಗೂ ಸಂವಿಧಾನ ಶಿಲ್ಪಿಯಾದ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ಗೆ ಅಪಮಾನಿಸುವ ಹುನ್ನಾರ ಬಿಜೆಪಿ ಸರಕಾರದಿಂದ ನಡೆಯುತ್ತಿದೆ,'' ಎಂದು ದೂರಿದರು.

''ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಸಾರ್ವ ಜನಿಕ ಶಿಕ್ಷಣ ಇಲಾಖೆ ತನ್ನದೇ ಆದ ಸುತ್ತೋಲೆ ಯಲ್ಲಿಸಂವಿಧಾನ ದಿನವನ್ನಾಗಿ ನ.26ರನ್ನು ಘೋಷಿ ಸಿದ್ದು, ಅದರಲ್ಲಿಡಾ.ಬಿ.ಆರ್‌.ಅಂಬೇಡ್ಕರ್‌ ಒಬ್ಬರೇ ಸಂವಿಧಾನ ಬರೆದಿಲ್ಲಎಂಬುದನ್ನು ಸೇರಿಸಿ ಸಮಗ್ರ ಭಾರತೀಯರಿಗೆ ತಪ್ಪು ಸಂದೇಶ ನೀಡಿದ್ದಾರೆ. ಇದರಿಂದ ಮನುವಾದಿಗಳು ತಮ್ಮ ಕೊಳಕು ಮನಸ್ಥಿತಿಯನ್ನು ಪ್ರದರ್ಶಿಸುತ್ತಿವೆ. ಇಡೀ ಜಗತ್ತೇ ಡಾ.ಬಿ.ಆರ್‌.ಅಂಬೇಡ್ಕರ್‌ ಸಂವಿಧಾನ ಶಿಲ್ಪಿ ಎಂದು ಹೊಗಳುತ್ತಿದ್ದರೆ, ದೇಶದ ಸಂವಿಧಾನ ವಿರೋಧಿಗಳು ಬಾಬಾ ಸಾಹೇಬ್‌ ಅವರನ್ನು ಅವಮಾನಿಸುತ್ತಿದ್ದಾರೆ,'' ಎಂದರು.

ಮುಖಂಡ ರಹತಮ್‌ಜಾನ್‌ ಬಾಬು ಮಾತನಾಡಿ, ಸ್ವಾಭಿಮಾನದ ಬದುಕನ್ನು ತಂದುಕೊಟ್ಟ ಮತ್ತು ರಾಜ್ಯ ರಕ್ಷಣೆಗಾಗಿ ರಾಕೆಟ್‌ ತಂತ್ರಜ್ಞಾನವನ್ನು ಪರಿಚಯಿಸಿದಂತ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ವಿರುದ್ಧ ಇತಿಹಾಸ ತಿರುಚಲು ಹೊರಟಿರುವ ಬಿಜೆಪಿ ಸರಕಾರದ ನಡೆಯನ್ನು ಖಂಡಿಸಿದರು. ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ ಮಾತನಾಡಿ, ''ನ.26ರಂದು ಸಂವಿಧಾನ ಅಂಗೀಕರಿಸಿದ ದಿನ ಹಾಗೂ ಜನವರಿ 26 ಸಂವಿಧಾನ ಜಾರಿಯಾದ ದಿನ. ಭಾರತ ಸರಕಾರ ಜನವರಿ 26 ರಂದು ಗಣರಾಜ್ಯೋತ್ಸವದಂದು ಸಂವಿಧಾನ ದಿನಾಚರಣೆ ಎಂದು ಆಚರಿಸಬೇಕು. ರಾಜ್ಯ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕದಿಂದ ಟಿಪ್ಪುವಿನ ಇತಿಹಾಸವಿರುವ ವಿಷಯವನ್ನು ತೆಗೆದುಹಾಕಲು ತೆಗೆದುಕೊಂಡಿ ರುವ ಕ್ರಮ ಕೈಬಿಡಬೇಕು ಮತ್ತು ಯಥಾಸ್ಥಿತಿ ಮುಂದು ವರಿಯಬೇಕು. ಸಂವಿಧಾನ ಶಿಲ್ಪಿ ಅಪಮಾನ ಮಾಡಿದ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸಂವಿಧಾನದ ಸಭೆಯ ಚರ್ಚೆಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮ್ಯೂಜಿಯಂ ರೀತಿ ಮಾಡಿ ರಕ್ಷಿಸುವುದರ ಜತೆಗೆ ಮುಂದಿನ ದಿನಗಳಲ್ಲಿಸಂವಿಧಾನವನ್ನು ಒಪ್ಪದಿದ್ದವರನ್ನು ದೇಶ ದ್ರೋಹಿ ಗಳೆಂದು ಪರಿಗಣಿಸಬೇಕು,'' ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ