ಆ್ಯಪ್ನಗರ

ಎಂಡಿಸಿಸಿ ಪ್ರಕರಣ: ನಾಲ್ವರ ವಿರುದ್ಧ ಕ್ರಿಮಿನಲ್‌ ಕೇಸ್‌

ಹುಣಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ 55 ಕೋಟಿ ರೂ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಸೂರು ನಗರ ಹಾಗೂ ಬಿಳಿಕೆರೆ ಠಾಣೆಯಲ್ಲಿ ಎಂಡಿಸಿಸಿ ಬ್ಯಾಂಕ್‌ ವತಿಯಿಂದಲೇ ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗಿದೆ.

Vijaya Karnataka 18 Sep 2018, 5:00 am
ಹುಣಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ 55 ಕೋಟಿ ರೂ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಸೂರು ನಗರ ಹಾಗೂ ಬಿಳಿಕೆರೆ ಠಾಣೆಯಲ್ಲಿ ಎಂಡಿಸಿಸಿ ಬ್ಯಾಂಕ್‌ ವತಿಯಿಂದಲೇ ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗಿದೆ.
Vijaya Karnataka Web mdc case a criminal case against four people
ಎಂಡಿಸಿಸಿ ಪ್ರಕರಣ: ನಾಲ್ವರ ವಿರುದ್ಧ ಕ್ರಿಮಿನಲ್‌ ಕೇಸ್‌


ಅವ್ಯವಹಾರದ ಪ್ರಮುಖ ಆರೋಪಿ ಹುಣಸೂರು ಬ್ಯಾಂಕಿನ ವ್ಯವಸ್ಥಾಪಕರಾಗಿದ್ದ ರಾಮಪ್ಪ ಪೂಜಾರ್‌, ಸಿಬ್ಬಂದಿಗಳಾದ ನವೀನ್‌ಕುಮಾರ್‌ ಹಾಗೂ ಕೃಷ್ಣರ ವಿರುದ್ಧ ನಗರ ಠಾಣೆಯಲ್ಲಿ 40.75 ಕೋಟಿ ರೂ. ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಹಾಲಿ ಶಾಖಾ ವ್ಯವಸ್ಥಾಪಕ ಎಸ್‌.ಯು.ಕೃಷ್ಣ ದೂರು ದಾಖಲಿಸಿದ್ದರೆ ಹಾಗೂ ಬಿಳಿಕೆರೆ ಠಾಣೆಯಲ್ಲಿ ಹಿಂದಿನ ವ್ಯವಸ್ಥಾಪಕ ನಿರಂಜನ್‌ ಹಾಗೂ ರಾಮಪ್ಪ ಪೂಜಾರ್‌ ವಿರುದ್ಧ 13.79 ಕೋಟಿ ರೂ. ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪದಡಿ ಹಾಲಿ ವ್ಯವಸ್ಥಾಪಕ ಶಶಿಧರ್‌ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎರಡೂ ಪ್ರಕರಣಗಳಲ್ಲಿ ನಾಲ್ವರ ವಿರುದ್ಧ ಹಣ ದುರುಪಯೋಗ, ವಂಚನೆ ಕಾಯ್ದೆಯಡಿ ಐ.ಪಿ.ಸಿ.409, 471, 477(ಎ)ಹಾಗೂ 420ಸೆಕ್ಷ ನ್‌ನಡಿ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ.

ಬಿಳಿಕೆರೆ ಎಂ.ಡಿ.ಸಿ.ಸಿ. ಬ್ಯಾಂಕ್‌ನ ವ್ಯವಸ್ಥಾಪಕರಾಗಿದ್ದ ನಿರಂಜನ್‌ ಬ್ಯಾಂಕಿನ ಹಣವನ್ನು ರಾಮಪ್ಪ ಪೂಜಾರ್‌ ಅವರ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿರುವುದರಿಂದ ಅವರ ವಿರುದ್ದವೂ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ನಡುವೆ ಪ್ರಕರಣದ ಪ್ರಮುಖ ಆರೋಪಿಗಳಾದ ರಾಮಪ್ಪ ಪೂಜಾರ್‌ ಹಾಗೂ ನಿರಂಜನ್‌ ಸೇರಿದಂತೆ ಇತರೆ ಆರೋಪಿಗಳು ಹುಣಸೂರು ನ್ಯಾಯಾಲಯದಲ್ಲಿ ನಿರೀಕ್ಷ ಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.

ಕಳೆದ 15 ದಿನಗಳ ಹಿಂದೆ ಪ್ರಕರಣ ಬಯಲಾಗಿದ್ದು, ಬ್ಯಾಂಕ್‌ ಮ್ಯಾನೇಜರ್‌ ಆಗಿದ್ದ ರಾಮಪ್ಪ ಪೂಜಾರ್‌ ರೈತರಿಗೆ ನೀಡಬೇಕಿರುವ ಸರಕಾರದ ವತಿಯಿಂದ ನೀಡುವ ವಿವಿಧ ಯೋಜನೆಗಳ ಸಾಲದ ವಿವಿಧ ಸಹಕಾರ ಬ್ಯಾಂಕುಗಳ ಕೋಟ್ಯಂತರ ರೂ. ಹಣವನ್ನು ತಮ್ಮ ವೈಯಕ್ತಿಕ ಖಾತೆಗೆ ಜಮೆ ಮಾಡಿಕೊಂಡು ರೈತರ ಹಣವನ್ನು ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಳಿಸಿ, ಇದೀಗ ಪ್ರಾಥಮಿಕ ತನಿಖೆ ನಡೆಸಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ