ಆ್ಯಪ್ನಗರ

ಮೇಲಧಿಕಾರಿ ಕಿರುಕುಳಕ್ಕೆ ಅಡುಗೆ ಸಿಬ್ಬಂದಿ ಆತ್ಮಹತ್ಯೆ ಯತ್ನ

ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ವಸತಿ ನಿಲಯದ ಅಡುಗೆ ಸಿಬ್ಬಂದಿಯೊಬ್ಬರು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಪಟ್ಟಣದಲ್ಲಿನಡೆದಿದೆ.

Vijaya Karnataka 11 Sep 2019, 5:00 am
ಪಿರಿಯಾಪಟ್ಟಣ : ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ವಸತಿ ನಿಲಯದ ಅಡುಗೆ ಸಿಬ್ಬಂದಿಯೊಬ್ಬರು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಪಟ್ಟಣದಲ್ಲಿನಡೆದಿದೆ.
Vijaya Karnataka Web MYS10PYP6_45


ಪಿರಿಯಾಪಟ್ಟಣ ತಾಲೂಕಿನ ಮೇಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಅಡುಗೆ ಸಿಬ್ಬಂದಿ ನೇತ್ರಾವತಿ ಎಂಬವವರೆ ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆ. ಈಕೆ ಸೋಮವಾರ ಸಂಜೆ 8ರ ಸಮಯದಲ್ಲಿತಲೆ ನೋವಿನ ಮಾತ್ರೆಗಳನ್ನು ಒಟ್ಟಿಗೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ವಿಚಾರ ತಿಳಿದ ಮತ್ತಿತರರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಈಕೆಯನ್ನು ಪಿರಿಯಾಪಟ್ಟಣದ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ವಿವರ: 2013ರಿಂದ ಅಡುಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿರುವ ನನಗೆ ಬಿಸಿಎಂ ವಿಸ್ತರಣಾಧಿಕಾರಿಯಾದ ಮೋಹನ್‌ ಕುಮಾರ್‌ ಕಿರುಕುಳ ನೀಡುತ್ತಿದ್ದು, ಮೆಟ್ರಿಕ್‌ ಪೂರ್ವ ಬಾಲಕಿಯರ ವಿದ್ಯಾರ್ಥಿನಿಯಲದಲ್ಲಿಇದ್ದ ಸಂದರ್ಭದಲ್ಲಿಈತನ ಕಿರುಕುಳದ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಿದು,್ದ ಅನೇಕ ತಿಂಗಳ ನಂತರ ಸಂಬಳ ನೀಡಿದ್ದರು. ಇದೆಲ್ಲಾಆದ ಮೇಲೆ ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಹೋಗುವಂತೆ ಸೂಚಿಸಿ ಅಲ್ಲಿಯೂ 4 ತಿಂಗಳಿನಿಂದ ಸಂಬಳ ನೀಡಿಲ್ಲ. ಅಲ್ಲದೆ ಸಂಬಳ ಕೇಳಲು ಹೋದರೆ ನಿನ್ನ ಹಾಜರಾತಿಯೆ ಇಲ್ಲ. ನಿನಗೆ ಕೆಲಸವು ಇಲ್ಲಎಂದು ಹೇಳಿ ಕಳುಹಿಸಿದ್ದಾರೆ ಎಂದು ದೂರಿದ್ದಾರೆ.

ನನಗಿಂತ ಹಿಂದೆ ಕೆಲಸಕ್ಕೆ ಸೇರಿದವರಿಗೆ ಸೇವಾ ಹಿರಿತನ ಇಲ್ಲದಿದ್ದರೂ ಕೆಲಸಕ್ಕೆ ತೆಗೆದುಕೊಂಡಿದ್ದು ನನಗೆ ಅನ್ಯಾಯ ಮಾಡಿರುವುದಲ್ಲ್ಲದೆ ನನಗೆ ನಿಲಯ ಪಾಲಕರಾದ ಅರುಣಾಕ್ಷಿ ಕೂಡ ಯಾವುದೆ ಹಾಜರಾತಿ ನೀಡದೆ ತೊಂದರೆ ನೀಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿತಿಳಿಸಿದ್ದಾರೆ.

ಈ ಸಂಬಂಧ ದೂರು ಸ್ವೀಕರಿಸಿರುವ ಪಿರಿಯಾಪಟ್ಟಣದ ಪೊಲೀಸರು ಬಿಸಿಎಂ ವಿಸ್ತರಣಾಧಿಕಾರಿ ಮೋಹನ್‌ಕುಮಾರ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿಂದೆಯೂ ಲೋಕಾಯುಕ್ತ ಸೇರಿದಂತೆ ಅನೇಕ ಕಡೆ ಮೋಹನ್‌ ಕುಮಾರ್‌ ಮೇಲೆ ಮಹಿಳೆ ದೂರು ನೀಡಿದ್ದರು.

ಸರಕಾರದ ಆದೇಶದಿಂದ ಪಿರಿಯಾಪಟ್ಟಣ ವಸತಿ ನಿಲಯದಲ್ಲಿಕೆಲಸ ನಿರ್ವಹಿಸುತ್ತಿರುವ ಹೆಚ್ಚುವರಿ ಹೊರಗುತ್ತಿಗೆ 9 ನೌಕರರಿಗೆ ಜೂನ್‌ ತಿಂಗಳಿನಿಂದ ಸಂಬಳ ನೀಡಲಾಗಿಲ್ಲ. ಸರಕಾರದ ಆದೇಶದ ಮೇರೆಗೆ ರಾಜ್ಯದಲ್ಲಿಅನೇಕ ಮಂದಿಗೆ ಸಂಬಳ ತಡೆಹಿಡಲಾಗಿದೆ. ಆದೇಶ ಬಂದ ನಂತರ ವೇತನ ಪಾವತಿಸಲಾಗುವುದು. ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಾ ಬಂದಿದಾರೆ. ಹೊರಗುತ್ತಿಗೆ ನೌಕರರಿಗೆ ಯಾವುದೆ ಸೇವಾ ಹಿರಿತನ, ಕಿರಿತನ ಪರಿಗಣಿಸುವ ಆದೇಶ ಇರುವುದಿಲ್ಲ. ಇದು ಸರಕಾರದ ಆದೇಶ ನಮ್ಮ ಹಂತದಲ್ಲಿಯಾವುದೆ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ.

-ಮೋಹನ್‌ ಕುಮಾರ್‌ ಬಿಸಿಎಂ ವಿಸ್ತರಣಾಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ