ಆ್ಯಪ್ನಗರ

ಮೈಸೂರು ಬೆಂಗಳೂರು ಮೆಮೂ ರೈಲಿಗೆ ಸಂಸದ ಪ್ರತಾಪ್ ಸಿಂಹ ಹಸಿರು ನಿಶಾನೆ

ಬೆಂಗಳೂರು-ರಾಮನಗರದ ನಡುವೆ ಸಂಚರಿಸುತ್ತಿದ್ದ ಎಲೆಕ್ಟ್ರಿಕ್‌ ರೈಲನ್ನು (ಮೆಮೂ) ಮೈಸೂರಿನ ತನಕ ವಿಸ್ತರಿಸಲಾಗಿದ್ದು, ವಾರಕ್ಕೆ ನಾಲ್ಕು ದಿನ ಇದರ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ.

Vijaya Karnataka Web 23 Dec 2018, 3:10 pm
ಮೈಸೂರು: ಮೈಸೂರು ಬೆಂಗಳೂರು ನಡುವೆ ಸಂಚಾರ ಆರಂಭಿಸಿದ ಮೆಮೂ ರೈಲಿಗೆ ಸಂಸದ ಪ್ರತಾಪ್ ಸಿಂಹ ನಗರದ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
Vijaya Karnataka Web Memu Train


ಬೆಂಗಳೂರು-ರಾಮನಗರದ ನಡುವೆ ಸಂಚರಿಸುತ್ತಿದ್ದ ಎಲೆಕ್ಟ್ರಿಕ್‌ ರೈಲನ್ನು (ಮೆಮೂ) ಮೈಸೂರಿನ ತನಕ ವಿಸ್ತರಿಸಲಾಗಿದ್ದು, ವಾರಕ್ಕೆ ನಾಲ್ಕು ದಿನ ಇದರ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ನೂತನ ರೈಲಿನ ಸಂಚಾರ ಬೆಂಗಳೂರಿನಿಂದ ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರದಂದು ಮತ್ತು ಮೈಸೂರಿನಿಂದ ಗುರುವಾರ, ಶುಕ್ರವಾರ, ಶನಿವಾರ, ಭಾನುವಾರದಂದು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದಾಗಿ ಮೈಸೂರು-ಬೆಂಗಳೂರು ನಡುವೆ ಮತ್ತೊಂದು ಹೆಚ್ಚಿನ ರೈಲು ಸಂಚರಿಸಲಿದೆ. ಡಿ. 26ರಿಂದ ಬೆಂಗಳೂರಿನಿಂದ ಹಾಗೂ ಡಿ.27 ರಂದು ಮೈಸೂರಿನಿಂದ ಸೇವೆ ಆರಂಭವಾಗಲಿದೆ. ಈ ಮೆಮೂ ರೈಲು ಗಂಟೆಗೆ 110 ಕಿ.ಮೀ ವೇಗ ಹೊಂದಿದೆ. ಮೋಟಾರ್‌ ಕೋಚ್‌ 55 ಆಸನ ಸಾಮರ್ಥ್ಯ‌ ಪಡೆದಿವೆ. ಟ್ರೇಲರ್‌ ಕೋಚ್‌ 80 ಆಸನಗಳನ್ನು ಹೊಂದಿದೆ. ನಿಲ್ಲುವ ಪ್ರಯಾಣಿಕರ ಸಾಮರ್ಥ್ಯ‌ ಕ್ರಮವಾಗಿ 171 ಹಾಗೂ 241 ಸೇರಿ ಒಟ್ಟಾರೆ 12 ಕಾರು ಹಾಗೂ 9 ಟ್ರೈಲಿಂಗ್‌ ಸೇರಿ 3,500ಕ್ಕಿಂತ ಹೆಚ್ಚು ಸಾಮರ್ಥ್ಯ‌ ಹೊಂದಿದೆ.

ಕೃಷ್ಣದೇವರಾಯ, ನಾಯಂಡಹಳ್ಳಿ, ಜ್ಞಾನಭಾರತಿ, ಕೆಂಗೇರಿ, ಹೆಜ್ಜಾಲ, ಬಿಡದಿ, ಕೇತೋಹಳ್ಳಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಬೆಂಗಳೂರಿನಿಂದ ಹೊರಡುವ ಮೆಮೂ ವಿಶೇಷ ರೈಲು 2.55 ಗಂಟೆ ಅವಧಿಯಲ್ಲಿ ಮೈಸೂರು ತಲುಪಲಿದೆ. ಮೈಸೂರಿನಿಂದ ಬೆಂಗಳೂರಿಗೆ 3.45 ನಿಮಿಷ ತೆಗೆದುಕೊಳ್ಳಲಿದೆ. ಮೈಸೂರು, ಮಂಡ್ಯ, ಮದ್ದೂರು, ಚನ್ನಪಟ್ಟಣದಿಂದ ಪ್ರಯಾಣಿಸುವ ದೈನಂದಿನ ಪ್ರಯಾಣಿಕರಿಗೆ ಹೆಚ್ಚು ಪ್ರಯೋಜನವಾಗಲಿದೆ. ಬೆಂಗಳೂರಿನ ನಾಯಂಡಹಳ್ಳಿ, ಕೆಂಗೇರಿ, ಹೆಜ್ಜಾಲಕ್ಕೆ ತೆರಳಲು ಕೂಡ ಅನುಕೂಲವಾಗಲಿದೆ. ಇದಲ್ಲದೆ ಸಂಜೆ ನಾಲ್ಕು ದಿನ ಬೆಂಗಳೂರಿನಿಂದ ಮೈಸೂರಿಗೆ ದೈನಂದಿನ ಸಂಚಾರ ಇರುವುದು ಸಾಕಷ್ಟು ಮಂದಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ನೈರುತ್ಯ ರೈಲ್ವೆಯ ಹಿರಿಯ ವಿಭಾಗೀಯ ವ್ಯವಸ್ಥಾಪಕ ಎಸ್‌.ಜಿ.ಯತೀಶ್‌ ಅವರು ತಿಳಿಸಿದ್ದಾರೆ.

ಹೊರಡುವ ಸಮಯ

ಮೆಮೂ ವಿಶೇಷ ರೈಲು ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಬೆಂಗಳೂರಿನಿಂದ ರಾತ್ರಿ 7.55ಕ್ಕೆ ಹೊರಟು ಮೈಸೂರಿಗೆ 10.55ಕ್ಕೆ ತಲುಪಲಿದೆ.

ಗುರುವಾರ, ಶುಕ್ರವಾರ, ಶನಿವಾರ, ಭಾನುವಾರ ಮೈಸೂರಿನಿಂದ ಮುಂಜಾನೆ 4.45ಕ್ಕೆ ಹೊರಟು ಬೆಂಗಳೂರಿಗೆ 8.30ಕ್ಕೆ ತಲುಲಿದೆ. (ಸಂಖ್ಯೆ: 06575ಕೆಎಸ್‌ಆರ್‌)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ