ಮೈಸೂರು : ಕರಾವಳಿ ನಗರಿ ಉಡುಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಥಾಪಿಸಲು ಉದ್ದೇಶಿಸಿರುವ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಈ ಬಾರಿಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಮೈಸೂರು ರೆಪರ್ಟರಿಯ ಹಿರಿಯ ರಂಗಕರ್ಮಿ ಮೈಮ್ ರಮೇಶ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.
ನಿರ್ದೇಶಕ ಸ್ಥಾನಕ್ಕೆ ಕೇಳಿ ಬಂದಿರುವ ಮೂವರ ಹೆಸರಲ್ಲಿ ಮೈಮ್ ರಮೇಶ್ ಅವರ ಹೆಸರು ಮುಂಚೂಣಿಯಲ್ಲಿದೆ. ಇವರೊಂದಿಗೆ ಕುಂದಾಪುರದ ಸುರೇಶ್ ಆನಗಳ್ಳಿ ಹಾಗೂ ಮಂಗಳೂರಿನ ವಾಲ್ಟರ್ ಡಿಸೋಜಾ ಅವರ ಹೆಸರೂ ಇವೆ ಎನ್ನಲಾಗಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಮೈಮ್ ರಮೇಶ್ ಅವರಿಗೆ 29 ವರ್ಷ ರಂಗಭೂಮಿ ಅನುಭವವಿದೆ. ಮೈಸೂರು ರಂಗಾಯಣಕ್ಕೆ ಸೇರುವ ಮೊದಲು 1975ರಲ್ಲೇ 'ಸಮುದಾಯ' ರಂಗತಂಡದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಕಷ್ಟು ಬೀದಿ ನಾಟಕಗಳ ಮೂಲ ಜನ ಜಾಗೃತಿ ಮೂಡಿಸಿದ್ದಾರೆ. ಕರಾವಳಿ ಭಾಗದಲ್ಲಿ 'ಅಭಿವ್ಯಕ್ತಿ' ಮತ್ತು 'ಆಯನ' ರಂಗ ತಂಡ ಕಟ್ಟಿ ರಂಗ ಚಟುವಟಿಕೆಯನ್ನು ಕೈಗೊಂಡಿದ್ದಾರೆ. ಕಾಸರಗೋಡಿನಲ್ಲಿ 'ಗಡಿನಾಡು ಕಲಾವಿದರು' ತಂಡ ಕಟ್ಟಿ ಕನ್ನಡ ಮತ್ತು ರಂಗಭೂಮಿ ಬಗ್ಗೆ ಅರಿವು ಮೂಡಿಸಿದ್ದಾರೆಎ. ಯಕ್ಷಗಾನ ಕಲಾವಿದರೂ ಆಗಿರುವ ಮೈಮ್ ರಮೇಶ್ ಭೂತಾರಾಧನೆಯನ್ನೂ ಮಾಡುತ್ತಾರೆ. ಹಲವು ತುಳು ನಾಟಕಗಳನ್ನು ನಿರ್ದೇಶನ ಮಾಡಿದ ಹೆಗ್ಗಳಿಕೆಯೂ ಇದೆ. ಬಿ.ವಿ.ಕಾರಂತರಿಂದ ಹಿಡಿದು ಸಿ.ಬಸವಲಿಂಗಯ್ಯ, ಪ್ರಕಾಶ್ ಬೆಳವಾಡಿ ಸೇರಿದಂತೆ ರಂಗಭೂಮಿಯ ಹಿರಿಯರೊಂದಿಗೆ ಕೆಲಸ ಮಾಡಿದ ಅನುಭವ ಇವರ ಬೆನ್ನಿಗಿದೆ. ಅಲ್ಲದೆ, ಈಗ ಸಿನಿಮಾ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಹೀಗಾಗಿ ಮೈಮ್ ರಮೇಶ್ ಆಯ್ಕೆ ಸೂಕ್ತ ಎಂಬ ಅಭಿಪ್ರಾಯ ರಂಗ ಕಲಾವಿದರ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನು ಸುರೇಶ್ ಆನಗಳ್ಳಿ ಅವರು ಎನ್ಎಸ್ಡಿಯಲ್ಲಿ ನಿರ್ದೇಶನÜ ಕೋರ್ಸ್ ಮುಗಿಸಿ ಬೆಂಗಳೂರಿನ ಆರ್ಆರ್ಸಿ 13 ವರ್ಷ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ವಾಲ್ಟರ್ ಡಿಸೋಜಾ ಅವರು ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಉಡುಪಿ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬಂದಿರುವುದು ನಿಜ. ರಂಗಾಯಣ ಬಿ.ವಿ.ಕಾರಂತರ ಕನಸು. ಅವರ ಕನಸುಗಳನ್ನು ಸಾಕಾರಗೊಳ್ಳಬೇಕು. ಸಾಮಾಜಿಕ ಚಿಂತನೆಯುಳ್ಳ ಯಾರು ಆಯ್ಕೆಯಾದರೂ ನನಗೆ ಖುಷಿಯೇ.
- ಮೈಮ್ ರಮೇಶ್ ಹಿರಿಯ ರಂಗಕರ್ಮಿ.
ಉಡುಪಿ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬಂದಿರುವ ವಿಷಯ ಇತ್ತೀಚೆಗೆ ಗೊತ್ತಾಯಿತು. ರಂಗಭೂಮಿ ಸಂಬಂಧಪಟ್ಟಂತೆ ಕೆಲಸ ಮಾಡಿರುವವರಿಗೆ ಸ್ಥಾನ ನೀಡಿದರೆ ಸಂಸ್ಥೆ ಬೆಳೆಸಲು ಸಾಧ್ಯವಾಗುತ್ತದೆ.
- ಸುರೇಶ್ ಆನಗಳ್ಳಿ ರಂಗಕರ್ಮಿ.
ನಿರ್ದೇಶಕ ಸ್ಥಾನಕ್ಕೆ ಕೇಳಿ ಬಂದಿರುವ ಮೂವರ ಹೆಸರಲ್ಲಿ ಮೈಮ್ ರಮೇಶ್ ಅವರ ಹೆಸರು ಮುಂಚೂಣಿಯಲ್ಲಿದೆ. ಇವರೊಂದಿಗೆ ಕುಂದಾಪುರದ ಸುರೇಶ್ ಆನಗಳ್ಳಿ ಹಾಗೂ ಮಂಗಳೂರಿನ ವಾಲ್ಟರ್ ಡಿಸೋಜಾ ಅವರ ಹೆಸರೂ ಇವೆ ಎನ್ನಲಾಗಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಮೈಮ್ ರಮೇಶ್ ಅವರಿಗೆ 29 ವರ್ಷ ರಂಗಭೂಮಿ ಅನುಭವವಿದೆ. ಮೈಸೂರು ರಂಗಾಯಣಕ್ಕೆ ಸೇರುವ ಮೊದಲು 1975ರಲ್ಲೇ 'ಸಮುದಾಯ' ರಂಗತಂಡದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಕಷ್ಟು ಬೀದಿ ನಾಟಕಗಳ ಮೂಲ ಜನ ಜಾಗೃತಿ ಮೂಡಿಸಿದ್ದಾರೆ. ಕರಾವಳಿ ಭಾಗದಲ್ಲಿ 'ಅಭಿವ್ಯಕ್ತಿ' ಮತ್ತು 'ಆಯನ' ರಂಗ ತಂಡ ಕಟ್ಟಿ ರಂಗ ಚಟುವಟಿಕೆಯನ್ನು ಕೈಗೊಂಡಿದ್ದಾರೆ. ಕಾಸರಗೋಡಿನಲ್ಲಿ 'ಗಡಿನಾಡು ಕಲಾವಿದರು' ತಂಡ ಕಟ್ಟಿ ಕನ್ನಡ ಮತ್ತು ರಂಗಭೂಮಿ ಬಗ್ಗೆ ಅರಿವು ಮೂಡಿಸಿದ್ದಾರೆಎ. ಯಕ್ಷಗಾನ ಕಲಾವಿದರೂ ಆಗಿರುವ ಮೈಮ್ ರಮೇಶ್ ಭೂತಾರಾಧನೆಯನ್ನೂ ಮಾಡುತ್ತಾರೆ. ಹಲವು ತುಳು ನಾಟಕಗಳನ್ನು ನಿರ್ದೇಶನ ಮಾಡಿದ ಹೆಗ್ಗಳಿಕೆಯೂ ಇದೆ. ಬಿ.ವಿ.ಕಾರಂತರಿಂದ ಹಿಡಿದು ಸಿ.ಬಸವಲಿಂಗಯ್ಯ, ಪ್ರಕಾಶ್ ಬೆಳವಾಡಿ ಸೇರಿದಂತೆ ರಂಗಭೂಮಿಯ ಹಿರಿಯರೊಂದಿಗೆ ಕೆಲಸ ಮಾಡಿದ ಅನುಭವ ಇವರ ಬೆನ್ನಿಗಿದೆ. ಅಲ್ಲದೆ, ಈಗ ಸಿನಿಮಾ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಹೀಗಾಗಿ ಮೈಮ್ ರಮೇಶ್ ಆಯ್ಕೆ ಸೂಕ್ತ ಎಂಬ ಅಭಿಪ್ರಾಯ ರಂಗ ಕಲಾವಿದರ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನು ಸುರೇಶ್ ಆನಗಳ್ಳಿ ಅವರು ಎನ್ಎಸ್ಡಿಯಲ್ಲಿ ನಿರ್ದೇಶನÜ ಕೋರ್ಸ್ ಮುಗಿಸಿ ಬೆಂಗಳೂರಿನ ಆರ್ಆರ್ಸಿ 13 ವರ್ಷ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ವಾಲ್ಟರ್ ಡಿಸೋಜಾ ಅವರು ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಉಡುಪಿ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬಂದಿರುವುದು ನಿಜ. ರಂಗಾಯಣ ಬಿ.ವಿ.ಕಾರಂತರ ಕನಸು. ಅವರ ಕನಸುಗಳನ್ನು ಸಾಕಾರಗೊಳ್ಳಬೇಕು. ಸಾಮಾಜಿಕ ಚಿಂತನೆಯುಳ್ಳ ಯಾರು ಆಯ್ಕೆಯಾದರೂ ನನಗೆ ಖುಷಿಯೇ.
- ಮೈಮ್ ರಮೇಶ್ ಹಿರಿಯ ರಂಗಕರ್ಮಿ.
ಉಡುಪಿ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬಂದಿರುವ ವಿಷಯ ಇತ್ತೀಚೆಗೆ ಗೊತ್ತಾಯಿತು. ರಂಗಭೂಮಿ ಸಂಬಂಧಪಟ್ಟಂತೆ ಕೆಲಸ ಮಾಡಿರುವವರಿಗೆ ಸ್ಥಾನ ನೀಡಿದರೆ ಸಂಸ್ಥೆ ಬೆಳೆಸಲು ಸಾಧ್ಯವಾಗುತ್ತದೆ.
- ಸುರೇಶ್ ಆನಗಳ್ಳಿ ರಂಗಕರ್ಮಿ.