ಆ್ಯಪ್ನಗರ

ಖಾತೆ ಹಂಚಿಕೆಯಿಂದ ಮುನಿಸಿಕೊಂಡ ಮಾಧುಸ್ವಾಮಿ, ಸಚಿವ ಸ್ಥಾನ ವಂಚಿತ ಮುನಿರತ್ನ ಟೆಂಪಲ್ ರನ್

ಮಾಧುಸ್ವಾಮಿ ಅವರ ಬಳಿಯಿದ್ದ ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಖಾತೆಯನ್ನು ಮರು ಹಂಚಿಕೆ ಸಂದರ್ಭ ಮುಖ್ಯಮಂತ್ರಿ ಹಿಂಪಡೆದು ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಿದ್ದಾರೆ. ಇದರಿಂದ ಮಾಧುಸ್ವಾಮಿ ಅಸಮಾಧಾನಗೊಂಡಿದ್ದು, ಸಂಪುಟ ಸಭೆಗೂ ತೆರಳಿರಲಿಲ್ಲ.

Vijaya Karnataka Web 22 Jan 2021, 8:00 pm
ಮೈಸೂರು: ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿರುವ ಸಚಿವ ಮಾಧುಸ್ವಾಮಿ ಹಾಗೂ ಸಂಪುಟದಲ್ಲಿ ಅವಕಾಶ ಪಡೆಯದಿರುವ ಶಾಸಕ ಮುನಿರತ್ನ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
Vijaya Karnataka Web ಸುತ್ತೂರು ಮಠಕ್ಕೆ ಭೇಟಿ
ಸುತ್ತೂರು ಮಠಕ್ಕೆ ಭೇಟಿ


ಮಾಧುಸ್ವಾಮಿ ಅವರ ಬಳಿಯಿದ್ದ ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಖಾತೆಯನ್ನು ಮರು ಹಂಚಿಕೆ ಸಂದರ್ಭ ಮುಖ್ಯಮಂತ್ರಿ ಹಿಂಪಡೆದು ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಿದ್ದಾರೆ. ಇದರಿಂದ ಮಾಧುಸ್ವಾಮಿ ಅಸಮಾಧಾನಗೊಂಡಿದ್ದು, ಸಂಪುಟ ಸಭೆಗೂ ಹೋಗಿರಲಿಲ್ಲ. ಶುಕ್ರವಾರ ಮೈಸೂರಿಗೆ ಆಗಮಿಸಿದ ಅವರು ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಸಾಕಷ್ಟು ಹೊತ್ತು ಚರ್ಚಿಸಿದರು.

ಈ ಸಂದರ್ಭ ಶಾಸಕ ಮುನಿರತ್ನ ಅವರು ಕೂಡ ಭೇಟಿಗೆ ಆಗಮಿಸಿದರು. ಶ್ರೀಗಳೊಂದಿಗೆ ಮಾಧುಸ್ವಾಮಿ ಮಾತನಾಡುತ್ತಿದ್ದ ಹಿನ್ನೆಲೆಯಲ್ಲಿ ಕಾದು ಕುಳಿತು ಅವರು ಹೊರ ಬಂದ ನಂತರ ಶ್ರೀಗಳನ್ನು ಭೇಟಿ ಮಾಡಿದರು.

ಬೇಸರ ಆಗಿದ್ದು ನಿಜ


''ಸಣ್ಣ ನೀರಾವರಿ ಖಾತೆಯನ್ನು ಬದಲಾಯಿಸಿದಾಗ ನನಗೆ ಬೇಸರ ಆಗಿರುವುದು ನಿಜ. ಆದರೆ, ಒಂದೇ ಖಾತೆ ನಮಗೆ ಶಾಶ್ವತವಲ್ಲ'' ಎಂದು ಸುತ್ತೂರು ಶ್ರೀಗಳನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ಮಾಧುಸ್ವಾಮಿ ಪ್ರತಿಕ್ರಿಯಿಸಿದರು.

''ನಾನು ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದವನು. ರೈತರಿಗೆ ಅನುಕೂಲವಾಗುವಂತಹ ಖಾತೆಯನ್ನು ಬಯಸಿದ್ದೆ. ಆದರೆ, ಏಕಾಏಕಿಯಾಗಿ ಬದಲಾಯಿಸಿದಾಗ ಬೇಸರ ಆಗುವುದು ಸಹಜ. ಹಾಗೆಂದ ಮಾತ್ರಕ್ಕೆ ನನಗೆ ಇದು ಡಿಮೋಷನ್‌ ಎಂದು ತಿಳಿಯಬೇಕಿಲ್ಲ. ವೈದ್ಯಕೀಯ ಶಿಕ್ಷಣ ಖಾತೆ ಕೂಡ ಪ್ರಭಾವಿಯಾದುದು. ಕಾನೂನು ಖಾತೆಗೆ ಹೋಲಿಸಿದರೆ ವೈದ್ಯಕೀಯ ಶಿಕ್ಷಣ ನಾಲ್ಕು ಪಟ್ಟು ದೊಡ್ಡದ್ದು'' ಎಂದು ಮಾಧುಸ್ವಾಮಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ